ಕಾಂಗ್ರೆಸ್ ಮುಖಂಡರಾದ ಹುಲಿಮಂಗಲ ರಾಜಗೋಪಾಲರೆಡ್ಡಿರವರು ಕಳೆದ ಹತ್ತಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ರಾಷ್ಠೀಯ ನಾಯಕರುಗಳು ಹುಟ್ಟು ಹಬ್ಬ ದಿನದಂದು ಮತ್ತು ತನ್ನ ಹೆಂಡತಿ ಮತ್ತು ಮಕ್ಕಳ ಹುಟ್ಟು ಹಬ್ಬದಂದು ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದಾರೆ.ಜೊತೆಗೆ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಹುಲಿಮಂಗಲ ರಾಜಗೋಪಾಲರೆಡ್ಡಿ ಕುಟುಂಬ ಒಂದು ದೊಡ್ಡ ಸೈನ್ಯವನ್ನೇ ಕಟ್ಟಿಕೊಂಡು ಸೈನ್ಯದ ಮೂಲಕ ಕ್ಷೇತ್ರದ ಉದ್ದಕ್ಕೂ ಸೇವೆಯನ್ನು ಮಾಡುತ್ತಾ ಬಂದಿದ್ದು ಇಂದು ಕೂಡ ಕಾಂಗ್ರೆಸ್ ಮುಖಂಡ ಹುಲಿಮಂಗಲ ರಾಜಗೋಪಾಲರೆಡ್ಡಿ ರವರು ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಹುಲಿಮಂಗಲ ಗ್ರಾಮದಲ್ಲಿ ಶ್ರೀಮತಿ ಸುಷ್ಮಾ ರಾಜಗೋಪಾಲರೆಡ್ಡಿg ಹಾಗೂ ಮಕ್ಕಳಾದ ಹೆಚ್.ಆರ್. ದೀಪಿಕಾರೆಡ್ಡಿ ಮತ್ತು ಹೆಚ್. ಆರ್. ನಾಗೇಂದ್ರರೆಡ್ಡಿ ರವರ ಹುಟ್ಟು ಹಬ್ಬ ಅಂಗವಾಗಿ ೪೩೧೬ ವಿದ್ಯಾರ್ಥಿಗಳಿಗೆ ಪೋತ್ಸಾಹ ಧನ ವಿತರಣೆ, ೩೩೨ ಕುಟುಂಬಗಳಿಗೆ ಸಿಮೆಂಟ್ ಶೀಟ್ ವಿತರಣೆ, ೫೬೬ ಜನ ವೃದ್ದರಿಗೆ ಕಂಬಳಿ ವಿತರಣೆ, ೧ ಸಾವಿರ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ, ೨೬೧೯ ಜನರಿಗೆ ಆರೋಗ್ಯ ತಪಾಸಣೆ, ಉಚಿತ ಔಷದಿ ವಿತರಣೆ, ೧೩೭ ಜನರಿಗೆ ಕಣ್ಣಿನ ತಪಾಸಣೆ, ೧೩೭ ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು ೨೮೯ ಜನರಿಗೆ ಉಚಿತ ಕನ್ನಡ ವಿತರಣೆ ಹಾಗೂ ೨೯ ನವ ಜೋಡಿಗೆ ಉಡುಗೊರೆ ವಿತರಣೆ ಸೇರಿದಂತೆ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada