ಚಿಲಿಂಬಿ: ಯದ್ವಾತದ್ವ ಚಲಿಸಿದ ಕಾರು; ದ್ವಿಚಕ್ರ ವಾಹನಕ್ಕೆ ಢಿಕ್ಕಿ

ಮಂಗಳೂರು, ಫೆ.4: ಚಾಲಕನ‌ ನಿಯಂತ್ರಣ ತಪ್ಪಿದ ಕಾರೊಂದು ಯದ್ವಾತದ್ವ ಚಲಿಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ ಘಟನೆ ಗುರುವಾರ ನಡೆದಿದೆ.ನಗರದ ಚಿಲಿಂಬಿ ಬಳಿಯ ಕೋಟೆಕಣಿ ರಸ್ತೆ ಮತ್ತು ಕುಳೂರು ಫೆರ್ರಿ ರಸ್ತೆಯಲ್ಲಿ ಸಂಜೆಯ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.ಕಾರಿನ ಚಾಲಕ ಕೋಟೆಕಣಿಯಿಂದ ಇಳಿಜಾರಿನ ರಸ್ತೆಯಲ್ಲಿ ತೆರಳುತ್ತಿರುವ ವೇಳೆ ಲೇಡಿಹಿಲ್‌ನಿಂದ ಉರ್ವಾ ಸ್ಟೋರ್ಸ್ ಕಡೆಗೆ ಹೋಗುತ್ತಿದ್ದ ಹೋಂಡಾ ಆಕ್ಟಿವಾಕ್ಕೆ ಢಿಕ್ಕಿ ಹೊಡೆದಿದೆ. ಇದರ ಪರಿಣಾಮ, ಆಕ್ಟಿವಾದಲ್ಲಿದ್ದ ಇಬ್ಬರು ಸವಾರರು ರಸ್ತೆ ಬದಿಗೆ ಬಿದ್ದಿದ್ದಾರೆ. ಕಾರು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಬಳಿಕವೂ ಚಾಲಕನಿಗೆ ಕಾರನ್ನು ನಿಯಂತ್ರಿಸಲು ಅಸಾಧ್ಯವಾಗಿದೆ. ಹಾಗಾಗಿ ಪಕ್ಕದ ಅಪಾರ್ಟ್‌ಮೆಂಟ್ ನ ಕಾಂಪೌಂಡ್ ಢಿಕ್ಕಿ ಹೊಡೆದಿದೆ. ಈ ದೃಶ್ಯವು ಸಾಮಾಜಿಕ‌ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿರುಕು ತುಟಿಯನ್ನು ಸುಂದರವಾಗಿಟ್ಟು ಕೊಳ್ಳಲು ಸುಲಭ ಮಾರ್ಗ!

Fri Feb 4 , 2022
ತುಟಿ ಒಣಗಿ ಹೊಳಪು ಕಳೆದುಕೊಂಡಿದ್ದರೆ ಮುಖದ ಸೌಂದರ್ಯ ಎಷ್ಟೇ ಆಕರ್ಷಕವಾಗಿದ್ದರೂ ಅದು ಕಳೆಗುಂದುತ್ತದೆ. ಅಂದ ಹಾಗೆ ಅಡುಗೆ ಮನೆಯೊಳಗಿನ ಕೆಲವು ಸಾಮಗ್ರಿಗಳಿಂದ ಬಿರುಕು ತುಟಿಯನ್ನು ಸುಂದರವಾಗಿಟ್ಟು ಕೊಳ್ಳಲು ಸುಲಭ ಮಾರ್ಗ ಇದೆ.ಲೆಮನ್‌ ಮಸಾಜ್‌ : ನಿಂಬೆ ಹಣ್ಣನ್ನು ಎರಡು ಭಾಗ ಮಾಡಿ, ಕೊಂಚ ಪುಡಿ ಸಕ್ಕರೆಯನ್ನು ಉದುರಿಸಿ.ಇದನ್ನು ತುಟಿಗಳ ಮೇಲೆ ಸವರಿ, ನಿಧಾನವಾಗಿ ಮಸಾಜ್‌ ಮಾಡಿ. ನಿಂಬೆ ರಸ ಉತ್ತಮ ಬ್ಲೀಚಿಂಗ್‌ ಏಜೆಂಟ್‌ ತರಹ ಕೆಲಸ ಮಾಡುತ್ತದೆ. ಉದುರಿಸಿದ ಸಕ್ಕರೆಯು […]

Advertisement

Wordpress Social Share Plugin powered by Ultimatelysocial