ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಹಾಗೂ ಯೋಜನಾ ವಿಭಾಗದ ಸಾರ್ವಜನಿಕ ಮಾಹಿತಿ ಅಧಿಕಾರಿ ಕಚೇರಿಯಿಂದ ಅಂಕಿ-ಅಂಶಗಳನ್ನು ಒದಗಿಸಿದ್ದು ಪ್ರತಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
2015-16ರಲ್ಲಿ ಅತಿ ಹೆಚ್ಚು ಅಂದರೆ 1,525 ಪ್ರಕರಣಗಳು ವರದಿಯಾಗಿವೆ. 2017-18ರಲ್ಲಿ 1,323 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಎಲ್ಲ ಪ್ರಕರಣಗಳನ್ನೂ ಸರ್ಕಾರದ ಪರಿಹಾರಕ್ಕೆ ಪರಿಗಣಿಸಿಲ್ಲ. ವಿವಿಧ ಕಾರಣಗಳನ್ನು ನೀಡಿ ನೂರಾರು ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. 215 ಪ್ರಕರಣಗಳು ಬಾಕಿ ಇವೆ. 18 ಪ್ರಕರಣಗಳಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್ಎಸ್ಎಲ್) ವರದಿ ಬರುವುದು ಬಾಕಿ ಇದೆ. 197 ಪ್ರಕರಣಗಳಲ್ಲಿ ಇತರ ದಾಖಲಾತಿಗಳನ್ನು ಕೇಳಲಾಗಿರುವುದರಿಂದ ಅವೂ ಬಾಕಿ ಇವೆ ಎಂದು ಮಾಹಿತಿ ನೀಡಲಾಗಿದೆ.
2005-16ನೇ ಸಾಲಿನಿಂದ ಸತತ ಮೂರು ವರ್ಷ ಸರಾಸರಿ 1,200 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.
ವರದಿಯಾದ ಒಟ್ಟು 8,207 ಪ್ರಕರಣಗಳಲ್ಲಿ 6,160 ಪ್ರಕರಣಗಳನ್ನಷ್ಟೆ ಅರ್ಹ ಎಂದು ಪರಿಹಾರಕ್ಕಾಗಿ ಪರಿಗಣಿಸಲಾಗಿದೆ. 1,809 ಪ್ರಕರಣಗಳನ್ನು ತಿರಸ್ಕರತಿಸಲಾಗಿದೆ!
‘ಅತಿವೃಷ್ಟಿ, ಪ್ರವಾಹ, ಬರ ಮತ್ತಿತರ ಕಾರಣಗಳಿಂದಾಗಿ ಬೆಳೆ ಕೈಗೆ ಬಾರದಿರುವುದು, ಉತ್ಪನ್ನಗಳಿಗೆ ಸರಿಯದ ಬೆಲೆ ಸಿಗದಿರುವುದು, ಕೌಟುಂಬಿಕ ಕಾರಣಗಳು, ಸಾಲದ ಬಾಧೆ, ಸರ್ಕಾರದ ಅವೈಜ್ಞಾನಿಕ ನೀತಿ ಮೊದಲಾದ ಕಾರಣಗಳಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಆ ಕುಟುಂಬಗಳು ಅತಂತ್ರವಾಗಿವೆ. ದಾಖಲಾತಿಗಳ ನೆಪವೊಡ್ಡಿ ಪರಿಹಾರ ನೀಡದೆ ಆ ಕುಟುಂಬಗಳನ್ನು ವಂಚಿಸಲಾಗಿದೆ. ಸರ್ಕಾರವು ಕುಟುಂಬಗಳನ್ನೂ ಪರಿಹಾರಕ್ಕೆ ಪರಿಗಣಿಸಿದರೆ ಅನುಕೂಲವಾಗುತ್ತದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಜಿಲ್ಲಾವಾರು ಪಟ್ಟಿಯನ್ನೂ ಕೇಳಿದ್ದೇನೆ’ ಎಂದು ಭೀಮನಗೌಡ ತಿಳಿಸಿದರು.
ರೈತರ ಆತ್ಮಹತ್ಯೆ ಪ್ರಕರಣಗಳ ವಿವರ
ವರ್ಷ;ವರದಿ;ತಿರಸ್ಕರ;ಅರ್ಹ;ಪರಿಹಾರ ನೀಡಲಾದವು
2010-11;231;105;126;126
2011-12;162;63;99;99
2012-13;146;59;87;87
2013-14;89;25;64;64
2014-15;116;23;93;93
2015-16;1,525;463;1,062;1,062
2016-17;1,203;271;932
2017-18;1,323;271;1,052;1,051
2018-19;1,087;216;867;867
2019-20;1,083;191;884;822
2020-21;822;111;637;471
2021-22 (ಫೆ.22ರವರೆಗೆ);420;31;260;82
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada