ಮಾನ್ಯ ಮುಖ್ಯಮಂತ್ರಿಗಳಿಗೆ ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜ ಸಂಘ ಜೇವರ್ಗಿ ತಾಲೂಕು ಘಟಕ ವತಿಯಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು
ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕು ಮತ್ತು ಗ್ರಾಮ ತಾಲೂಕ ಜಂಟಿಯಾಗಿ ಬೇಡಜಂಗಮ ಸಮಾಜದವರಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಂಡು,
ಜೇವರ್ಗಿ ಪಟ್ಟಣದ ಶ್ರೀ ಚರ ಚಕ್ರವರ್ತ ಶ್ರೀ ಷಣ್ಮುಖ ಶಿವಯೋಗಿಗಳ ದೇವಸ್ಥಾನದಿಂದ ಪ್ರಾರಂಭವಾದ ಪ್ರತಿಭಟನೆ ರ್ಯಾಲಿ ಮಿನಿ ವಿಧಾನ ಸೌಧದವರೆಗೆ ಕಾಲ್ನಡಿಗೆಯಲ್ಲಿ ಬಂದು ಜಿಲ್ಲಾಧಿಕಾರಿಗಳಾದ ಶ್ರೀ ಯಶ್ವಂತ ವಿ ಗುರುಕರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಪ್ರವೀಣ್ ಕುಮಾರ್ ಕುಂಟೋಜಿ ಮಠ- ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಬೇಡ ಜಂಗಮರು ಆರ್ಥಿಕ ಶೈಕ್ಷಣಿಕ ಮತ್ತು ಸಾಮಾಜಿಕ ಶೋಷಣೆಗೆ ಒಳಗೊಂಡಿರುವರೆಂದು ಪರಿಗಣಿಸಿ ನಮ್ಮನ್ನು ಪರಿಶಿಷ್ಟಜಾತಿಯ ಪಟ್ಟಿಯತ್ತಿದ್ದಾರೆ ಆದರೂ ಕೂಡ 70 ವರ್ಷ ಗತಿಸಿದರೂ
ಇಂದಿಗೂ ನಮಗೆ ಸರ್ಕಾರಗಳು ಪ್ರಮಾಣ ಪತ್ರ ಕೊಡದೆ ವಂಚಿಸುತ್ತಾ ಬಂದಿವೆ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಸೂರ್ಯನಾಥ್ ಕಾಮತ ವರದಿ ಸಮಾಜಕ್ಕೆ ST ಪ್ರಮಾಣ ಪತ್ರ ನೀಡಬೇಕೆಂದು ತಿಳಿಸಿದರು ಸರ್ಕಾರಗಳು ಅನ್ಯಾಯವೆಸಗುತ್ತಾ ಬಂದಿವೆ ST ಪ್ರಮಾಣ ಪತ್ರ ಪಡೆಯುವುದು ನಮ್ಮ ಹಕ್ಕು ನಮಗೆ ಮುಕ್ತವಾಗಿ ನೀಡಲು ಮನವಿ ಮಾಡುತ್ತಿದ್ದೇವೆ ನಮ್ಮ ಹಕ್ಕು ನಮಗೆ ನೀಡದಿದ್ದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: