ಸಂಗಮನಾಥ ದೇವರ ಮೂರ್ತಿ ಕಳ್ಳತನ ಮಾಡಿದ ಕಳ್ಳರು
ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ ಘಟನೆ.
ಬೆಲೆಬಾಳುವ ಪಂಚಲೋಹದ ಸಂಗಮನಾಥ ಮೂರ್ತಿ, ಹಿತ್ತಾಳೆಯ ಬಸವಣ್ಣನ ಮೂರ್ತಿ, ಇತರೆ ಹಿತ್ತಾಳೆ, ತಾಮ್ರದ ಸಾಮಾನುಗಳನ್ನು ಕಳ್ಳತನ.
ದೇವಸ್ಥಾನದ ಬಾಗಿಲಿನ ಕೀಲಿ ಮುರಿದು ಕಳ್ಳತನ ಮಾಡಿದ ಕಳ್ಳರು.
ಎಂದಿನಂತೆ ಪೂಜೆ ಮಾಡಲೆಂದು ಅರ್ಚಕರು ದೇಗುಲಕ್ಕೆ ಬಂದಾಗ ಕಳ್ಳತನವಾಗಿರೋದು ಬಹಿರಂಗ.
ದೇಗುಲದ ಅರ್ಚಕ ಮಲ್ಲಯ್ಯ ಮಠಪತಿ ನಸುಕಿನ ಜಾವ ಸಂಗಮನಾಥ ದೇವಸ್ಥಾನಕ್ಕೆ ಹೋದಾಗ ಮೂರ್ತಿ ಕಳ್ಳತನವಾಗಿರೋದು ಗೊತ್ತಾಗಿದೆ.
ಬಳಿಕ ಗ್ರಾಮಸ್ಥರಿಗೆ ಮಾಹಿತಿ ನೀಡಿದ ಅರ್ಚಕರು.
ಕಳ್ಳಕವಟಗಿಯ ಐತಿಹಾಸಿಕ ಸಂಗಮನಾಥ ದೇವಾಲಯ.
3 ಲಕ್ಷ ಬೆಲೆಬಾಳುವ ಮೂರ್ತಿಗಳು.
ತಿಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: