ಬಡತನವೇ ಮನುಷ್ಯನ ಅತಿ ದೊಡ್ಡ ಗುರು ಎಂದು ಶಾರುಖ್ ಖಾನ್ ಅವರು ʼದಿ ಕಪಿಲ್ ಶರ್ಮಾ ಶೋʼನಲ್ಲಿ ಹೇಳಿದ್ದರು. ಅಲ್ಲದೆ, ಬಡತನ ವ್ಯಕ್ತಿಯನ್ನು ತಾನು ಎಂದಿಗೂ ಯೋಚಿಸದಿದ್ದನ್ನು ಮಾಡಲು ಮತ್ತು ಕಲಿಯಲು ಒತ್ತಾಯಿಸುತ್ತದೆ ಎಂದಿದ್ದರು.
ʼದಿ ಕಪಿಲ್ ಶರ್ಮಾ ಶೋʼ ನಿಂದ ಹೊರ ಬಂದ ನಂತರ ಪ್ರಸಿದ್ಧ ಹಾಸ್ಯನಟ ಸುನಿಲ್ ಗ್ರೋವರ್ಗೆ ಬಡತನ ಎದುರಾಗಿದೆಯಾ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳನ್ನ ಕಾಡುತ್ತಿದೆ. ಏಕೆಂದ್ರೆ ಇತ್ತೀಚಿಗೆ ಅವರು ಆಲೂಗಡ್ಡೆ ಮತ್ತು ಈರುಳ್ಳಿ ಮಾರಾಟ ಮಾಡುತ್ತಿರುವ ಫೋಟೋ ಒಂದು ವೈರಲ್ ಆಗಿತ್ತು.
ಸುನಿಲ್ ಗ್ರೋವರ್ಅವರು ಆಲೂಗಡ್ಡೆ ಮತ್ತು ಈರುಳ್ಳಿ ಮಾರಾಟ ಮಾಡುತ್ತಿರುವ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋವನ್ನು ನೋಡಿದ ನೆಟ್ಟಿಗರು ಸುನೀಲ್ಗೆ ಈ ಗತಿ ಯಾಕೆ ಬಂತು. ದಿ ಕಪಿಲ್ ಶರ್ಮಾ ಶೋ ನಿಂದ ಹೊರ ಬಂದ ನಂತರ ಪ್ರಸಿದ್ಧ ಹಾಸ್ಯನಟ ಬಡತನಕ್ಕೆ ಗುರಿಯಾದ್ರಾ ಎನ್ನುವ ಪ್ರಶ್ನೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಇಂಟರ್ನೆಟ್ನಲ್ಲಿ ಚರ್ಚೆ ನಡೆಯುತ್ತಿದೆ.
https://play.google.com/store/apps/details?id=com.speed.newskannada