ಒಂದೇ ಕುಟುಂಬದ 3 ಜನರು ನೀರಿಗೆ ಬಿದ್ದು ಆತ್ಮಹತ್ಯೆಗೆ ಶರಣದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಸಾಗರನಹಳ್ಳಿ ಗೇಟ್ ಬಳಿ ನಡೆದಿದೆ…ನಿಟ್ಟೂರು ಬಳಿಯ ಸೋಮಲಾಪುರದ ಹೇಮಾವತಿ ನಾಲೆಯಲ್ಲಿ 2 ಶವಗಳು ಪತ್ತೆಯಾಗಿದ್ದು ಹೇಮಾವತಿ ನಾಲಾ ಕಛೇರಿಯ ಇಂಜಿನಿಯರ್ ರಮೇಶ್ (55) ಮತ್ತು ಪತ್ನಿ ಮಮತಾ (46 ) ವರ್ಷ ಶಿಕ್ಷಕಿ ಇವರ ಮಗಳು ಶುಭ (25)ವರ್ಷ ವಿದ್ಯಾರ್ಥಿನಿ ಸಾವನ್ನಪ್ಪಿರುವ ದುರ್ದೈವಿಗಳು ಮಮತಾ ಮತ್ತು ಶುಭ ಶವಗಳು ನಾಲೆಯಲ್ಲಿ ತೇಲಿಬಂದು ಸೋಮಲಾಪುರ ಬಳಿ ಸಿಕಿದ್ದು ಉಳಿದಂತೆ ಹೇಮಾವತಿ ಇಂಜಿನಿಯರ್ ರಮೇಶ್ (55) ಇವರ ಶವ ಪತ್ತೆ ಮಾಡಲು ಶೋಧ ಕಾರ್ಯಚರಣೆ ಮುಂದುವರೆದಿದೆ.ಸ್ಥಳಕ್ಕೆ ಗುಬ್ಬಿ ಸಿಪಿಐ ನದಾಫ್ ಚೇಳೂರು ಪಿ ಎಸ್ ಐ ವಿಜಯ್ ಕುಮಾರಿ ಸಿಬ್ಬಂದಿ ಬೇಟಿ ನೀಡಿ ಶೋಧ ಕಾರ್ಯ ಮುಂದುವರೆಸಿದ್ದಾರೆ ಇನ್ನು ಈ ಬಗ್ಗೆ ಚೇಳೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ..
ಒಂದೇ ಕುಟುಂಬ ಮೂರು ಜನ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ
Please follow and like us: