ಒಂದೇ ಕುಟುಂಬ ಮೂರು ಜನ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ

ಒಂದೇ ಕುಟುಂಬದ 3 ಜನರು ನೀರಿಗೆ ಬಿದ್ದು ಆತ್ಮಹತ್ಯೆಗೆ ಶರಣದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಸಾಗರನಹಳ್ಳಿ ಗೇಟ್ ಬಳಿ ನಡೆದಿದೆ…ನಿಟ್ಟೂರು ಬಳಿಯ ಸೋಮಲಾಪುರದ ಹೇಮಾವತಿ ನಾಲೆಯಲ್ಲಿ 2 ಶವಗಳು ಪತ್ತೆಯಾಗಿದ್ದು ಹೇಮಾವತಿ ನಾಲಾ ಕಛೇರಿಯ ಇಂಜಿನಿಯರ್ ರಮೇಶ್ (55) ಮತ್ತು ಪತ್ನಿ ಮಮತಾ (46 ) ವರ್ಷ ಶಿಕ್ಷಕಿ ಇವರ ಮಗಳು ಶುಭ (25)ವರ್ಷ ವಿದ್ಯಾರ್ಥಿನಿ ಸಾವನ್ನಪ್ಪಿರುವ ದುರ್ದೈವಿಗಳು ಮಮತಾ ಮತ್ತು ಶುಭ ಶವಗಳು ನಾಲೆಯಲ್ಲಿ ತೇಲಿಬಂದು ಸೋಮಲಾಪುರ ಬಳಿ ಸಿಕಿದ್ದು ಉಳಿದಂತೆ ಹೇಮಾವತಿ ಇಂಜಿನಿಯರ್ ರಮೇಶ್ (55) ಇವರ ಶವ ಪತ್ತೆ ಮಾಡಲು ಶೋಧ ಕಾರ್ಯಚರಣೆ ಮುಂದುವರೆದಿದೆ.ಸ್ಥಳಕ್ಕೆ ಗುಬ್ಬಿ ಸಿಪಿಐ ನದಾಫ್ ಚೇಳೂರು ಪಿ ಎಸ್ ಐ ವಿಜಯ್ ಕುಮಾರಿ ಸಿಬ್ಬಂದಿ ಬೇಟಿ ನೀಡಿ ಶೋಧ ಕಾರ್ಯ ಮುಂದುವರೆಸಿದ್ದಾರೆ ಇನ್ನು ಈ ಬಗ್ಗೆ ಚೇಳೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ..

Please follow and like us:

Leave a Reply

Your email address will not be published. Required fields are marked *

Next Post

ಅಮಾನುಷ ಹಾಗೂ ಹೃದಯವಿದ್ರಾವಕ ಘಟನೆ ನಂಜನಗೂಡಿನಲ್ಲಿ ತಾಯಿ ಮಗು ಆತ್ಮಹತ್ಯೆ

Fri Dec 17 , 2021
2ವರ್ಷದ ಗಂಡು ಮಗುವನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮದಲ್ಲಿ ನಡೆದಿದೆ ..2ವರ್ಷದ ಗಂಡು ಮಗುವನ್ನು ನೀರಿನ ತೊಟ್ಟಿಗೆ ಮುಳುಗಿಸಿ ಕೊಲೆ ಮಾಡಿರುವ ಹೆತ್ತ ತಾಯಿ ಮಗುವನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಲೆ ಮಾಡಿದ ಬಳಿಕ ತಾನೂ ಕೂಡ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ..ಗಟ್ಟವಾಡಿ ಗ್ರಾಮದ ಮಹದೇವ ಪ್ರಸಾದ್ ಅಲಿಯಾಸ್ ರಚ್ಚು ಎಂಬುವರ ಪತ್ನಿ ಅನ್ನಪೂರ್ಣ 22 ವರ್ಷದ ಮೃತ ವಿವಾಹಿತ ಮಹಿಳೆ.ಹಾಗೂ […]

Advertisement

Wordpress Social Share Plugin powered by Ultimatelysocial