ಅಮಾನುಷ ಹಾಗೂ ಹೃದಯವಿದ್ರಾವಕ ಘಟನೆ ನಂಜನಗೂಡಿನಲ್ಲಿ ತಾಯಿ ಮಗು ಆತ್ಮಹತ್ಯೆ

2ವರ್ಷದ ಗಂಡು ಮಗುವನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮದಲ್ಲಿ ನಡೆದಿದೆ ..2ವರ್ಷದ ಗಂಡು ಮಗುವನ್ನು ನೀರಿನ ತೊಟ್ಟಿಗೆ ಮುಳುಗಿಸಿ ಕೊಲೆ ಮಾಡಿರುವ ಹೆತ್ತ ತಾಯಿ ಮಗುವನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಲೆ ಮಾಡಿದ ಬಳಿಕ ತಾನೂ ಕೂಡ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ..ಗಟ್ಟವಾಡಿ ಗ್ರಾಮದ ಮಹದೇವ ಪ್ರಸಾದ್ ಅಲಿಯಾಸ್ ರಚ್ಚು ಎಂಬುವರ ಪತ್ನಿ ಅನ್ನಪೂರ್ಣ 22 ವರ್ಷದ ಮೃತ ವಿವಾಹಿತ ಮಹಿಳೆ.ಹಾಗೂ ಮೋಕ್ಷಿತ್ 2ವರ್ಷದ ಗಂಡು ಮಗು ಸಾವನ್ನಪ್ಪಿದ್ದಾರೆ…ಕೌಟುಂಬಿಕ ಕಲಹ ಎಂದು ಹೇಳಲಾದರೂ ಆತ್ಮಹತ್ಯೆ ಗೆ ಕಾರಣ ತಿಳಿದುಬಂದಿಲ್ಲ.ಮೃತ ವಿವಾಹಿತ ಮಹಿಳೆ ಅನ್ನಪೂರ್ಣ ಎಂಬುವರ ಪತಿ ಮಹದೇವ ಪ್ರಸಾದ್ ಅಲಿಯಾಸ್ ರಚ್ಚು ಕೃಷಿಕನಾಗಿದ್ದಾನೆಕೌಟುಂಬಿಕ ಕಲಹಕ್ಕೆ ಬೇಸತ್ತು ನೀರಿನ ತೊಟ್ಟಿಗೆ 2ವರ್ಷದ ಮಗುವನ್ನು ಮುಳುಗಿಸಿ ಕೊಲೆ ಮಾಡಿ ತಾನು ಕೂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಅನ್ನಪೂರ್ಣ ಇನ್ನು  ಸ್ಥಳಕ್ಕೆ ನಂಜನಗೂಡಿನ ಡಿವೈಎಸ್ಪಿ ಗೋವಿಂದ ರಾಜು ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ತಳವಾರ ದೊಡ್ಡಕವಲಂದೆ ಪಿಎಸ್ ಐ ಮಹೇಂದ್ರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ…ಅಮಾನುಷ ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ಕಲೆ ಹಾಕಿ ಪ್ರಕರಣ ದಾಖಲಿಸಲು ನಂಜನಗೂಡು ಪೊಲೀಸರು ಮುಂದಾಗಿದ್ದಾರೆ..ಪ್ರಕರಣ ದಾಖಲಾದ ಬಳಿಕ ಮೃತ ಮಹಿಳೆ ಅನ್ನಪೂರ್ಣ ಮತ್ತು 2ವರ್ಷದ ಗಂಡು ಮಗು ಮೋಕ್ಷಿತಾ ಶವವನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸ ಲಾಯಿತು….

Please follow and like us:

Leave a Reply

Your email address will not be published. Required fields are marked *

Next Post

ನಂದಿನಿ ತುಪ್ಪ ತಿನ್ನುವ ಮುನ್ನ ಹುಷಾರ್‌..!ನಂದಿನಿ ತುಪ್ಪ ಸೇವಿಸುವವರನ್ನು ಬೆಚ್ಚಿ ಬೀಳಿಸುವ ಸುದ್ದಿ: ನಂದಿನಿ ತುಪ್ಪವನ್ನೇ ನಕಲಿ ಮಾಡಿ ತಯಾರಿಸುವ ಗೋಡೌನ್ ನಿರ್ಮಾಣ

Fri Dec 17 , 2021
ಶುದ್ಧ ನಂದಿನಿ ತುಪ್ಪ ಯಾರಿಗೆ ತಾನೇ ಇಷ್ಟವಾಗಲ್ಲ. ಆದರೆ ಇಲ್ಲಿ ನಂದಿನಿ ತುಪ್ಪ ಸೇವಿಸುವವರನ್ನು ಬೆಚ್ಚಿ ಬೀಳಿಸುವ ಸುದ್ದಿಯೊಂದು ಹೊರಬಿದ್ದಿದೆ..! ನಂದಿನಿ ತುಪ್ಪವನ್ನೇ ನಕಲಿ ಮಾಡಿ ತಯಾರಿಸುವ ಗೋಡೌನ್ ಒಂದು ಮೈಸೂರಿನ ಹೊಸ ಹುಂಡಿ ಬಳಿ ಪತ್ತೆಯಾಗಿದೆ.ಈ ಗೋಡೌನ್‌ನ ಮೂಲಕ ಕಳೆದ ನಾಲ್ಕು ತಿಂಗಳಿನಿಂದ ನಂದಿನಿ ತುಪ್ಪವನ್ನು ಮೈಸೂರು ನಗರಾದ್ಯಂತ ವಿತರಣೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇದೀಗ ಈ ನಕಲಿ ತುಪ್ಪ ತಯಾರಕರ ವಿತರಣೆ ಜಾಲ ಬಯಲಾಗಿದೆ. ಗುರುವಾರ […]

Advertisement

Wordpress Social Share Plugin powered by Ultimatelysocial