ಬೇಸಿಗೆಯಲ್ಲಿ ಈ ʼಪಾನೀಯʼ ಸೇವಿಸುವುದು ಬೆಸ್ಟ್

ಬಿಸಿಲಿನ ಝಳ ಹೆಚ್ಚುತ್ತಿದೆ. ಎಷ್ಟು ನೀರು ಕುಡಿದರೂ ತೀರದ ದಾಹ ಎಲ್ಲರನ್ನೂ ಬಸವಳಿಸಿದೆ. ಬೆವರಿನ ಮೂಲಕ ದೇಹದ ನೀರಿನಂಶ ಕಡಿಮೆಯಾಗಿ ಡಿಹೈಡ್ರೇಷನ್ ಸಮಸ್ಯೆ ಹೆಚ್ಚುತ್ತಿದೆ. ಮನೆಯಲ್ಲೇ ಕುಳಿತು ಕೆಲವು ಕೂಲ್ ಕೂಲ್ ಜ್ಯೂಸ್ ಗಳನ್ನು ತಯಾರಿಸಿ ಕುಡಿದು ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.ಈ ಬೇಸಿಗೆಗೆ ಬೆಸ್ಟ್ ಜ್ಯೂಸ್ ಎಂದರೆ ಲಿಂಬೆಹಣ್ಣಿನದು. ಅದಕ್ಕೆ ಬೆಲ್ಲ, ಚಿಟಿಕೆ ಏಲಕ್ಕಿ, ಕಾಳುಮೆಣಸಿನ ಪುಡಿ ಬೆರೆಸಿ ಕುಡಿದರೆ ಬಾಯಾರಿಕೆಯೂ ಕಡಿಮೆಯಾಗುತ್ತದೆ, ದೇಹಕ್ಕೂ ಒಳ್ಳೆಯದು.

 

ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು ಆ ನೀರನ್ನು ಕುಡಿಯುವುದರಿಂದ ಬೇಸಿಗೆಯ ಸಮಸ್ಯೆಗಳು ಕಾಡುವುದಿಲ್ಲ. ಎರಡು ದಿನಕ್ಕೊಮ್ಮೆ ಎಳನೀರು ಕುಡಿಯುವುದರಿಂದ ದೇಹದ ಉಷ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.

ನಿಂಬೆರಸ, ಸೌತೆಕಾಯಿ, ಪುದೀನಾ ಎಲೆ ನೆನೆಸಿದ ನೀರು ಕುಡಿಯುವುದು ಉತ್ತಮ. ಮಜ್ಜಿಗೆ ಕೂಡಾ ಬೇಸಿಗೆಗೆ ಬೆಸ್ಟ್ ಎನರ್ಜಿ ಡ್ರಿಂಕ್

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೃದಯಾಘಾತ: ಮುಧೋಳ ತಹಸೀಲ್ದಾರ್ ನಿಧನ

Fri Mar 18 , 2022
ಬಾಗಲಕೋಟೆ: ಹೃದಯಾಘಾತದಿಂದ ಮುಧೋಳ ತಹಸೀಲ್ದಾರ್ ಸಂಗಮೇಶ್ ಬಾಡಗಿ(38) ಮೃತಪಟ್ಟಿದ್ದಾರೆ.ಗುರುವಾರ ಮಧ್ಯರಾತ್ರಿ ಮುಧೋಳ ನಗರದ ಮನೆಯಲ್ಲಿ ಮಲಗಿದ್ದ ವೇಳೆ ತಹಸೀಲ್ದಾರ್​ಗೆ ಹೃದಯಾಘಾತವಾಗಿದೆ. ಪುತ್ರಿ ಮತ್ತು ಪತ್ನಿಯನ್ನು ಅಗಲಿದ್ದಾರೆ.ಅಥಣಿ ತಾಲೂಕಿನ ಜನವಾಡ ಮೂಲದ ಸಂಗಮೇಶ್ ಬಾಡಗಿ ಅವರು ಮೂರು ವರ್ಷದಿಂದ ಮುಧೋಳ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.ಸಂಗಮೇಶ್ ಬಾಡಗಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮುಧೋಳ‌ ನಿವಾಸಕ್ಕೆ ಜಮಖಂಡಿ ಎಸಿ ಸಿದ್ದು ಹುಲ್ಲಳ್ಳಿ ಸೇರಿದಂತೆ ಅನೇಕ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ […]

Advertisement

Wordpress Social Share Plugin powered by Ultimatelysocial