ಕೆಎಲ್​ ರಾಹುಲ್-ಆಥಿಯಾ ಶೆಟ್ಟಿ ಮದುವೆ ತಯಾರಿ ನಿಜವೇ?

ಸುನೀಲ್​ ಶೆಟ್ಟಿ ಅವರು ಹೋದಲ್ಲಿ ಬಂದಲ್ಲಿ ಕೆಎಲ್​ ರಾಹುಲ್-ಆಥಿಯಾ ಶೆಟ್ಟಿ ಮದುವೆ ಬಗ್ಗೆಯೇ ಪ್ರಶ್ನೆ ಎದುರಾಗುತ್ತಿದೆ. ಅದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ.ಸಿನಿಮಾ ಕ್ಷೇತ್ರದವರು ಕ್ರಿಕೆಟ್​ ಆಟಗಾರರನ್ನು ಮದುವೆ ಆದ ಹಲವು ಉದಾಹರಣೆಗಳಿವೆ.

ಅದೇ ಹಾದಿಯಲ್ಲಿಕೆಎಲ್​ ರಾಹುಲ್​ ಹಾಗೂ ಆಥಿಯಾ ಶೆಟ್ಟಿ ಸಾಗುತ್ತಿದ್ದಾರೆ ಎಂಬ ಮಾತು ಬಹಳ ದಿನಗಳಿಂದಲೂ ಕೇಳಿಬರುತ್ತಲೇ ಇದೆ. ಸ್ಟಾರ್​ ಕ್ರಿಕೆಟಿಗ ಕೆಎಲ್​ ರಾಹುಲ್​ ಅವರು ಸುನೀಲ್​ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ (Athiya Shetty) ಜೊತೆ ಹಲವು ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ. ಆದರೆ ಸಾರ್ವಜನಿಕವಾಗಿ ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿಲ್ಲ. ಇಬ್ಬರೂ ಶೀಘ್ರದಲ್ಲೇ ಹಸೆ ಮಣೆ ಏರುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಜೋರಾಗಿ ಕೇಳಿಬರುತ್ತಿದೆ. ಅದಕ್ಕೆ ಆಥಿಯಾ ಶೆಟ್ಟಿ ತಂದೆ ಸುನೀಲ್​ ಶೆಟ್ಟಿ   ಅವರು ಪ್ರತಿಕ್ರಿಯೆ ನೀಡಿದ್ದಾರೆ. ಆ ಮೂಲಕ ಹರಿದಾಡುತ್ತಿರುವ ಅಂತೆ-ಕಂತೆಗಳಿಗೆ ಅವರು ಪೂರ್ಣವಿರಾಮ ಇಟ್ಟಿದ್ದಾರೆ.

ಯಾವಾಗ ಆಥಿಯಾ ಶೆಟ್ಟಿ ಹಾಗೂ ಕೆಎಲ್​ ರಾಹುಲ್​ ಅವರು ಜೊತೆಯಾಗಿ ಕಾಣಿಸಿಕೊಳ್ಳಲು ಆರಂಭಿಸಿದರೋ ಆಗಿನಿಂದಲೇ ಇಬ್ಬರ ಮದುವೆ ಬಗ್ಗೆ ಕುಟುಂಬದವರಿಗೆ ಪ್ರಶ್ನೆ ಎದುರಾಗಲು ಶುರುವಾಯಿತು. ಈ ಕುರಿತು ಸುನೀಲ್​ ಶೆಟ್ಟಿ ಅನೇಕ ಸಲ ಪ್ರತಿಕ್ರಿಯೆ ನೀಡಿದ್ದುಂಟು. ಇತ್ತೀಚಿನ ದಿನಗಳಲ್ಲಿ ಮದುವೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸುನೀಲ್​ ಶೆಟ್ಟಿ ಅವರು ಹೋದಲ್ಲಿ ಬಂದಲ್ಲಿ ಈ ಬಗ್ಗೆಯೇ ಪ್ರಶ್ನೆ ಎದುರಾಗುತ್ತಿದೆ. ಇತ್ತೀಚೆಗೆ ಅವರು ‘ರೇಡಿಯೋ ಮಿರ್ಚಿ’ಗೆ ಪ್ರತಿಕ್ರಿಯೆ ನೀಡಿದ್ದು, ‘ಇಲ್ಲ.. ಸದ್ಯಕ್ಕೆ ಮದುವೆ ಬಗ್ಗೆ ಏನೂ ಪ್ಲ್ಯಾನ್​ ಆಗಿಲ್ಲ’ ಎಂದು ಹೇಳಿದ್ದಾರೆ.

‘ಯಾವಾಗ ಮದುವೆ ಆಗಬೇಕು ಎಂಬುದು ಆಥಿಯಾ ಆಯ್ಕೆಗೆ ಬಿಟ್ಟ ವಿಚಾರ’ ಎಂದು ಈ ಹಿಂದೆ ಕೂಡ ಸುನೀಲ್​ ಶೆಟ್ಟಿ ಹೇಳಿದ್ದರು. ಆಥಿಯಾ ಶೆಟ್ಟಿ ಸಹೋದರ ಅಹಾನ್​ ಶೆಟ್ಟಿ ಅವರಿಗೂ ಈ ಮೊದಲು ಇಂಥದ್ದೇ ಪ್ರಶ್ನೆ ಕೇಳಲಾಗಿತ್ತು. ‘ಮದುವೆ ತಯಾರಿ ನಡೆದಿಲ್ಲ. ವಿವಾಹ ಸಮಾರಂಭವೇ ನಡೆಯುತ್ತಿಲ್ಲ ಎಂದಮೇಲೆ ನಾವು ದಿನಾಂಕದ ಬಗ್ಗೆ ಏನು ಹೇಳಲು ಸಾಧ್ಯ. ಇದೆಲ್ಲ ಬರೀ ಗಾಸಿಪ್ ಅಷ್ಟೇ’ ಎಂದು ಅವರು ಹೇಳಿದ್ದರು.

ಕೆಎಲ್ ರಾಹುಲ್ ಇತ್ತೀಚೆಗೆ ಶಸ್ತ್ರಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದರು. ಅವರ ಜೊತೆ ಆಥಿಯಾ ಶೆಟ್ಟಿ ಕೂಡ ಪ್ರಯಾಣ ಬೆಳೆಸಿದ್ದರು. ಇಬ್ಬರ ನಡುವೆ ಆಪ್ತತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದಷ್ಟು ಬೇಗ ಈ ಜೋಡಿ ಹಸೆಮಣೆ ಏರಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಚಿವ ಬಿ.ಶ್ರೀರಾಮುಲು ರವರು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಉದ್ಘಾಟನೆ ಮಾಡಿದರು...

Wed Jul 13 , 2022
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ರವರು ಚಾಮರಾಜನಗರದ ವಡಗೆರೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಉದ್ಘಾಟನೆ ಮಾಡಿದರು… ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಎಸ್.ಸಿ/ ಎಸ್.ಟಿ. ಮೀಸಲಾತಿ ಹೆಚ್ಚಳ ವಿಚಾರವಾಗಿ ಸರ್ಕಾರ ಮುಂದಿನ ದಿನಗಳಲ್ಲಿ ಕ್ರಮ ವಹಿಸುವುದು…. ಒಳ ಮೀಸಲಾತಿ ಬಗ್ಗೆ ಚರ್ಚಿಸಲಾಗುವುದು,ನಾವೆಲ್ಲರೂ ಹಿಂದುಳಿದ ಸಮುದಾಯದವರು ಎಂದು ಹೇಳಿದರು….. ವಿದ್ಯರ್ಥಿಗಳ ಬಸ್ ಪಾಸ್ ವಿಚಾರದಲ್ಲಿ 60 ಕ್ಕಿಂತ ಹೆಚ್ಚು ಕಿಲೋಮೀಟರ್ ವರೆಗೆ ಹೋಗಲು ಆದಷ್ಟು ಬೇಗ ಸರ್ಕಾರಕ್ಕೆ ಮನವಿ ತಂದು […]

Advertisement

Wordpress Social Share Plugin powered by Ultimatelysocial