ಟಾಲಿವುಡ್ ನಟ ರಾಮ್ ಚರಣ್ ಲುಗು ಚಿತ್ರರಂಗದಲ್ಲಿ ತಮ್ಮದೇ ಹವಾ ಸೃಷ್ಟಿಸಿದ್ದಾರೆ.ಇದೀಗ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. 2009ರಲ್ಲಿ ತೆರೆ ಕಂಡ ರಾಮ್ಚರಣ್ ಅವರ ಮಗಧೀರ ಸಿನಿಮಾ ಮಾರ್ಚ್ 27ರಂದು ಅವರ ಜನುಮದಿನದ ಅಂಗವಾಗಿ ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಲಿದೆ. ಇದನ್ನು ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.ಗುರುವಾರ, ಫೆಬ್ರವರಿ 23ರಂದು, ಗೀತಾ ಆರ್ಟ್ಸ್ ರಾಮ್ ಚರಣ್ ಅವರ 2009ರ ಮಗಧೀರ ಹಿಟ್ ಸಿನಿಮಾವನ್ನು ರಾಮ್ ಚರಣ್ ಅವರ ಹುಟ್ಟುಹಬ್ಬದಂದು ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಬ್ಯಾನರ್ ಪೋಸ್ಟರ್ನೊಂದಿಗೆ ಸುದ್ದಿಯನ್ನು ಹಂಚಿಕೊಂಡಿದೆ.ಮಗಧೀರ ಅಲ್ಲು ಅರವಿಂದ್ ನಿರ್ಮಾಣದ ಸಿನಿಮಾ. ಇದರಲ್ಲಿ ರಾಮ್ ಚರಣ್, ಕಾಜಲ್ ಅಗರ್ವಾಲ್, ದೇವ್ ಗಿಲ್ ಮತ್ತು ಶ್ರೀಹರಿ ನಟಿಸಿದ್ದಾರೆ. ಚಲನಚಿತ್ರವು ಆಗಿನ ಕಾಲಕ್ಕೆ ವಿಮರ್ಶಾತ್ಮಕ ಯಶಸ್ಸನ್ನು ಗಳಿಸಿತು.ರಾಮ್ ಚರಣ್ ಆರ್ಸಿ 15 (RC 15) ಚಿತ್ರೀಕರಣದಲ್ಲಿದ್ದಾರೆ. ಚರಣ್ ಎರಡು ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ವರದಿಯಾಗಿದೆ. ಚಿತ್ರದಲ್ಲಿ ಕಿಯಾರಾ ಆಡ್ವಾಣಿ ನಾಯಕಿಯಾಗಿ ನಟಿಸಿದ್ದಾರೆ. ಆರ್ಸಿ 15 ಅನ್ನು ಎಸ್. ಶಂಕರ್ ನಿರ್ದೇಶಿಸಿದ್ದಾರೆ. 170 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ತಯಾರಾಗುತ್ತಿದೆ ಎಂದು ವರದಿಯಾಗಿದೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada