T-20 ವಿಶ್ವಕಪ್ ನಲ್ಲಿ ವರುಣ್ ಚಕ್ರವರ್ತಿ ಬದಲು ಯುಜ್ವೇಂದ್ರ ಚಹಾಲ್ ??

ಈ ಬಾರಿಯ T-20 ವಿಶ್ವಕಪ್‌ನ ಭಾರತ ತಂಡಕ್ಕೆ ಲೆಗ್‌ ಸ್ಪಿನ್ನರ್‌ ವರುಣ್ ಚಕ್ರವರ್ತಿ ಆಯ್ಕೆಯಾಗಿದ್ದಾರೆ. ಐಪಿಎಲ್‌ ನಲ್ಲಿ ಕೆಕೆಆರ್‌ ತಂಡಕ್ಕಾಗಿ ಆಡಿ ಅದ್ಭುತ ಪ್ರದರ್ಶನ ನೀಡುತ್ತಿರುವ  ವರುಣ್ ಚಕ್ರವರ್ತಿಯವರು ಗಾಯಕ್ಕೆ ತುತ್ತಾಗಿದ್ದಾರೆ. ಮೊಣಕಾಲು ಗಾಯ ಇವರಿಗೆ ಕಂಟಕವಾಗಿ ಕಾಡುತ್ತಿದ್ದು, ತಂಡದ ಬಗ್ಗೆ ನಿರ್ಧಾರ ತೆಗಿದುಕೊಳ್ಳುವಲ್ಲಿ ಬಿಸಿಸಿಐ ಗೂ ಗೊಂದಲವಾಗಿದೆ.

ವಿಶ್ವಕಪ್ ಗೆ ಆಯ್ಕೆಯಾದ ಕೆಲವು ಆಟಗಾರರು ಐಪಿಎಲ್‌ ನಲ್ಲಿ ಫಾರ್ಮ್‌ ಕಳೆದುಕೊಂಡಿರುವುದು ಆತಂಕಕ್ಕೆ ಗುರಿಯಾಗಿದೆ. ಅಕ್ಟೋಬರ್ 17 ರಿಂದ ಪಂದ್ಯಗಳು ಆರಂಭವಾಗಲಿದ್ದು, ತಂಡದಲ್ಲಿ ಬದಲಾವಣೆಗಳನ್ನ ಮಾಡಲು ಬಿಸಿಸಿಐ ಬಳಿ ಅಕ್ಟೋಬರ್ 10 ರವರೆಗೆ ಸಮಯ ಇದೆ. ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದ ಹಾರ್ದಿಕ್ ಪಾಂಡ್ಯ ಅವರ ಬದಲು ಒಳ್ಳೆಯ ಫಾರ್ಮ್‌ನಲ್ಲಿರುವ, ಪ್ರಬಲ ಆಲ್‌ ರೌಂಡರ್‌ ಆಗಿರುವ ಶಾರ್ದೂಲ್ ಠಾಕೂರ್ ಅವರು ಸ್ಥಾನ ಪಡೆಯಬಹುದಾಗಿದೆ.

ಮೊಣಕಾಲಿನ ನೋವಿಗೆ ತುತ್ತಾದ ವರುಣ್ ಚಕ್ರವರ್ತಿ ಅವರ ಬದಲು ಯುಜ್ವೇಂದ್ರ ಚಹಾಲ್ ಅವರಿಗೆ ಸ್ಥಾನ ನೀಡುವ ಸಾಧ್ಯತೆಗಳು ಇವೆ. ವರುಣ್ ಚಕ್ರವರ್ತಿಯವರ ಗಾಯದ ತೀವ್ರತೆಯನ್ನ ಬಿಸಿಸಿಐನ ವೈದ್ಯಕೀಯ ತಂಡ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಅಕ್ಟೋಬರ್ 10 ರವರೆಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ.

Please follow and like us:

Leave a Reply

Your email address will not be published. Required fields are marked *

Next Post

ರೈಲ್ವೆ ಸಿಬ್ಬಂದಿಗೆ ಸಿಗಲಿದೆ 78 ದಿನಗಳ ವೇತನ ಬೋನಸ್

Wed Oct 6 , 2021
  ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನವನ್ನು ಬೋನಸ್ ಆಗಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.ಕೇಂದ್ರ ಸಚಿವ ಅನುರಾಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, RPF ಮತ್ತು RPSF ಸಿಬ್ಬಂದಿಯನ್ನು ಹೊರತುಪಡಿಸಿ ಭಾರತೀಯ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನ ನೀಡಲಾಗುವುದು ಎಂದು ಹೇಳಿದ್ದಾರೆ. ಭಾರತೀಯ ರೈಲ್ವೆಯ ಸುಮಾರು 11.58 ಲಕ್ಷ ನಾನ್ […]

Advertisement

Wordpress Social Share Plugin powered by Ultimatelysocial