ಬೆಂಗಳೂರು, ಅಕ್ಟೋಬರ್ 04 : ಟಾಟಾ ಟೆಕ್ನಾಲಜೀಸ್ ಸಂಸ್ಥೆಯ ಅಧ್ಯಕ್ಷ ಆನಂದ್ ಭಡೆ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಿದರು.ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಜಿ.ಜಗದೀಶ್, ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್ ಉಪಸ್ಥಿತರಿದ್ದರು.
#BSY#KARNATAKA#NALINKUMAR KATIL#BJP
ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಖ್ಯ ಮಂತ್ರಿಗಳಾಗಿರ್ತಾರೆ,ನಾಯಕತ್ವದ ಬದಲಾವಣೆ ನಮ್ಮ ಪಾರ್ಟಿಯಲ್ಲಿ ಇಲ್ಲ ಎಂದು ಸುರಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟಿಲು ಹೇಳಿದ್ದಾರೆ.ಯಾರೂ ಅಸಮಾಧಾನಿತರು ಇಲ್ಲ, ಎಲ್ಲರೂ ಸಮಾಧಾನದಲ್ಲಿದ್ದಾರೆ. ಶ್ರೀ ರಾಮುಲು ಅವರು ಮೊದಲೇ ರಿಕ್ವೆಸ್ಟ್ ಮಾಡಿ ಸಮಾಜ ಕಲ್ಯಾಣ ಇಲಾಖೆ ಕೇಳಿದ್ರು,ರಾಮಲುಗೆ ದೊಡ್ಡ ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ.ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆ ಒಟ್ಟಾಗಿರಲಿ ಎಂದು ಅನ್ನೋ ಕಾರಣಕ್ಕೆ ಸುಧಾಕರ್ ಅವರಿಗೆ ಖಾತೆ ನೀಡಲಾಗಿದೆ.