ದುಪ್ಪಟ್ಟು ಹಣ ವಸೂಲಿಗೆ ಇಳಿದಿವೆ ಟ್ಯಾಕ್ಸಿ, ಆಟೋ ಸವಾರರು, ಮೂರನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಪ್ರತಿಭಟನೆ ಬೆಳಗಾವಿಯಲ್ಲಿ ಕೂಡ ಮುಂದುವರೆದಿದೆ. ಬೆಳಗಾವಿಯ ಪ್ರತಿಭಟನ ವೇದಿಕೆ ಹಾಗೂ ಬಸ್ ನಿಲ್ದಾಣ ಪ್ರಯಾಣಿಕರು , ನೌಕರರು ಇಲ್ಲದೆ ಖಾಲಿ ಖಾಲಿ ಯಾಗಿದ್ದು, ಅಧಿಕಾರಿಗಳು ಇತರೆ ಡಿಪೋ ಬಸ್ ಗಳನ್ನು ನಿಲ್ದಾಣದಲ್ಲಿ ಪಾರ್ಕಿಂಗ್ ಹಾಕಿಸಿದ್ದಾರೆ. ಎರಡು ದಿನ ನಿರಂತರ ಧರಣಿ ಮಾಡಿರೋ ಸಾರಿಗೆ ನೌಕರರನ್ನು ಅಧಿಕಾರಿಗಳು ಹತ್ತಿಕ್ಕಲು ಯತ್ನಸಿದ್ದು, 40 ಕ್ಕೂ ಹೆಚ್ಚು […]
#karnataka#government#
ಬನಶಂಕರಿ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರ ಪ್ರತಿಭಟನೆ.. ಬಿಎಂಟಿಸಿ ಸಂಚಾರ ಸ್ಥಗಿತಗೊಳಿಸಿ ಆಕ್ರೋಶ.. ಈ ಕೂಡಲೇ ನಮ್ಮನ ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯ.. ಸರ್ಕಾರ ಆದೇಶ ಹೊರಡಿಸುವ ಹೊರೆಗು ಸಂಚಾರ ಸ್ಥಗಿತ ಮಾಡಲು ನಿರ್ಧಾರ.. ಇದನ್ನೂ ಓದಿ : ಕುಖ್ಯಾತ ಕಳವು ಆರೋಪಿಗಳ ಬಂಧನ
ಚುನಾವಣೆ ಮತ್ತು ಸರ್ಕಾರ ರಚನೆ ವೇಳೆ ಚಿ.ಪಿ ಯೋಗೇಶ್ವರ್ ಹಾಗೂ ಎನ್.ಆರ್.ಸಂತೋಷ್ ಮನಿಲ್ಯಾಂಡ್ರಿಂಗ್ ಅ್ಯಕ್ಟ್ ಉಲ್ಲಂಘನೆ ಮಾಡಿದ್ದಾರೆಂದು ಮಾಜಿ ಸಂಸದ ಉಗ್ರಪ್ಪ ನಿಯೋಗ ಎಸಿಬಿಗೆ ದೂರು ನೀಡಿದ್ದಾರೆ. ಚುನಾವಣೆಯಲ್ಲಿ 25 ಕೋಟಿ ಹಣ ಯೋಗೇಶ್ವರ್ ಸಂತೋಷ್ ಗೆ ನೀಡಿದ್ದಾರೆ… ಇಲ್ಲಿ ಮನಿಲ್ಯಾಂಡ್ರಿಂಗ್ ಅ್ಯಕ್ಟ್ ಉಲ್ಲಂಘನೆಯಾಗಿದೆ. ಹೀಗಾಗಿ ಇದರ ಬಗ್ಗೆ ತನಿಖೆ ನಡೆಸಿ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಎಸಿಬಿಗೆ ದೂರಿನಲ್ಲಿ ಕಾಂಗ್ರೆಸ್ ನಿಯೋಗ ಮನವಿ ಮಾಡಿದೆ ಇದನ್ನು ಓದಿ : ಬೆಂಗಳೂರಿನಲ್ಲಿ […]
ಪತ್ನಿ, ಮಕ್ಕಳನ್ನು ನೋಡಿಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಮಡಿಕೇರಿಯ ಪೊನ್ನಂಪೇಟೆಯಲ್ಲಿ ಮಾತನಾಡಿದ ಬಿಸಿ ಪಾಟೀಲ್ ರೈತರು ಆತ್ಮ ಹತ್ಯೆ ಮಾಡಿಕೊಳ್ಳುವ ಹೇಡಿ ಕೆಲಸಕ್ಕೆ ಮುಂದಾಗಬಾರದು.. ಕೃಷಿ ಮಾಡಿ ಉತ್ತಮ ಜೀವನ ನಡೆಸುವವರಿದ್ದಾರೆ. ಪತ್ನಿ, ಮಕ್ಕಳನ್ನು ನೋಡಿಕೊಳ್ಳಲಾರದವನು ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಗಳು ಎಂದು ಬಿಸಿ ಪಾಟೀಲ್ ರೈತರ ಅನ್ನದಾತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಇದನ್ನು ಓದಿ:ಸಂಪೂರ್ಣ ಹದಗೆಟ್ಟಿರುವ ಆದರಹಳ್ಳಿ ರಸ್ತೆ
ಮರಾಠ ಪ್ರಾಧಿಕಾರ ರಚನೆ ನಿರ್ಧಾರವನ್ನು ಕೂಡಲೇ ಹಿಂಪಡೆಯಲು ಆಗ್ರಹಿಸಿ ಡಿಸೆಂಬರ್ 5ರ ಕರೆ ನೀಡಿರುವ ಕರ್ನಾಟಕ ಬಂದ್ ನೂರಕ್ಕೆ ನೂರರಷ್ಟು ನಡೆಯುವುದು ಖಚಿತ ಎಂದು ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್ ತಿಳಿಸಿದರು.ಹಾಸನದಲ್ಲಿ ಮಾತನಾಡಿದ ಅವರು, ಬಹಳ ಗಂಭೀರವಾದ ವಿಚಾರದಲ್ಲಿ ಕರ್ನಾಟಕ ಬಂದ್ ಕರೆದಿದ್ದೇವೆ. 5ನೇ ತಾರೀಖು ಬೆಳಿಗ್ಗೆ 6 ಗಂಟೆ ಸಮಯದಿಂದ ಸಂಜೆ 5 ಗಂಟೆವರೆಗೆ ಬಂದ್ ನಡೆಯಲಿದೆ. ಇದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕನ್ನಡಿಗರ ನಡುವಿನ ಹೋರಾಟವಾಗಿದೆ. ಯಡಿಯೂರಪ್ಪರವರ […]
ಳೆ ಸಾಲವನ್ನ ಮರುಪಾವತಿಸಲು ರಾಜ್ಯ ಸರ್ಕಾರ ರೈತರಿಗೆ ಆಗಸ್ಟ್ವರೆಗು ಸಮಯವನ್ನ ವಿಸ್ತರಿಸಿದೆ. ರಾಜ್ಯ ಸರ್ಕಾರವು ಶೂನ್ಯ ಬಡ್ಡಿದರದಲ್ಲಿ ರೈತರಿಗೆ ೩ ಲಕ್ಷ ರೂ. ಅಲ್ಪಾವಧಿ ಬೆಳೆಸಾಲ ಮತ್ತು ಶೇ. ೩ ರಷ್ಟು ಬಡ್ಡಿದರದಲ್ಲಿ ಶೇ. ೧೦ ಲಕ್ಷ ರೂ. ವರೆಗೆ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ ನೀಡಿತ್ತು, ಸಾಲ ಮರುಪಾವತಿಗೆ ಜೂನ್ ಅಂತ್ಯದವರೆಗೆ ಅವಕಾಶ ನೀಡಿತ್ತು ಆದರೆ ಇದೀಗ ಬೆಳಸಾಲ ಮರುಪಾವತಿಗೆ ಆಗಸ್ಟ್ ಕೊನೆಯವರೆಗೆ ವಿಸ್ತರಿಸಿದೆ ಎನ್ನುವ ಮಾಹಿತಿ ಲಭ್ಯವಾಗ್ತಾಯಿದೆ.