ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ನಾಲ್ವರಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬರಗೂರು ಹ್ಯಾಂಡ್‌ಪೋಸ್ಟ್‌ ಬಳಿ ಸಂಭವಿಸಿದೆ. ತಡ ರಾತ್ರಿ ಏಂ 53 ಒಆ 4411 ಐಟ್ವೆಂಟಿ ಕಾರಿನಲ್ಲಿ ಧರ್ಮಸ್ಥಳಕ್ಕೆ ಐವರು ಸ್ನೇಹಿತರು ಹೊರಟಿದ್ದರು. ದಾರಿ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಕಾರು ತೆಂಗಿನ ಮರಕ್ಕೆ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರಿನ ಗಾಜು ಪುಡಿ ಪುಡಿಯಾಗಿದ್ದು ಕಾರು ನಜ್ಜುಗುಜ್ಜಾಗಿದೆ.ಘಟನೆಯಲ್ಲಿ ಬೆಂಗಳೂರು […]

ಯಲಹಂಕ ವಾಯುನೆಲೆಯಲ್ಲಿ ಫೆ.3ರಿಂದ 5 ರವರೆಗೆ ನಡೆಯಲಿರುವ ಏರೋ ಇಂಡಿಯಾ 2021 ವೈಮಾನಿಕ ಪ್ರದರ್ಶನಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಭಾರತೀಯ ಸೇನೆಯ ಪ್ರಮುಖ ಅಸ್ತ್ರಗಳಾಗಿರುವ ರಫೇಲ್ ಯುದ್ಧವಿಮಾನಗಳು ಮತ್ತು ವಿವಿಧ ಹೆಲಿಕಾಪ್ಟರ್ ಗಳು ಜಂಟಿಯಾಗಿ ಕಸರತ್ತು ನಡೆಸಲಿವೆ. ಕೋವಿಡ್-19 ಆತಂಕದ ನಡುವೆಯೂ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ಸಾದ್ಯತೆಇದೆ. ಕಳೆದ ಬಾರಿ ಪಾರ್ಕಿಂಗ್ ಜಾಗದಲ್ಲಿ ಬೆಂಕಿ ಅನಾಹುತ ಸಂಭವಿಸಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಈ ಬಾರಿ ಬೆಂಕಿ ನಿಂದಿಸಲು 2 […]

ಐಷಾರಾಮಿ ರೆಸಾರ್ಟ್ ಗೆ ಬಂದಿದ್ದ ಕಾಡಾನೆಯನ್ನು ಓಡಿಸಲು ಕೆಲಸಗಾರರು ಟೈರ್ ಗೆ ಬೆಂಕಿ ಹಚ್ಚಿ ಅದರ ಮೇಲೆ ಎಸೆದಿದ್ದರು. ಟೈರ್ ನೇರವಾಗಿ ಆನೆಯ ನೆತ್ತಿ ಮೇಲೆ ಸಿಕ್ಕಿ ಹಾಕಿಕೊಂಡಿತ್ತು. ಈ ವೇಳೆ ಅಲ್ಲಿಂದ ಓಡಿ ಹೋದ ಆನೆ ದೂರದ ಕಾಡಿನಲ್ಲಿ ಸತ್ತು ಹೋಗಿದೆ.ತಮಿಳುನಾಡಿನ ನೀಲಗಿರಿ ಜಿಲ್ಲೆಯ ಊಟಿ ಬಳಿ ಈ ಘಟನೆ ನಡೆದಿದೆ. ರಾತ್ರಿ ವೇಳೆ ಆನೆಯೊಂದು ರೆಸಾರ್ಟ್ ಒಳಗೆ ಬರಲು ಪ್ರಯತ್ನಿಸಿದೆ. ಈ ವೇಳೆ ಎಸ್ಟೇಟ್ ನೋಡಿಕೊಳ್ಳುತ್ತಿದ್ದ ಪ್ರಶಾಂತ್ […]

ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅರಣ್ಯಾಧಿಕಾರಿ ಬಂಧಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಪೆರುಮ, ಚನ್ನಿಗನ ಪತ್ತೆಗಾಗಿ ಕನಕಪುರ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದು, ಆರೋಪಿಯನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಡಿ ದೂರು ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇದನ್ನೂ ಓದಿ :ಭಾರತದಲ್ಲಿ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ

ದೇಶದಲ್ಲಿ ದಿನ ಕಳೆದಂತೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಮತ್ತಷ್ಟು ತುಟ್ಟಿಯಾಗುತ್ತಿದೆ. ಇಂದು ಕೂಡ ಸರ್ಕಾರಿ ತೈಲ ಸಂಸ್ಥೆಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಭಾರೀ ಏರಿಕೆ ಮಾಡಿವೆ. ಈ ಮೂಲಕ ತೈಲ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಟಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನ ಪ್ರತೀ ಲೀಟರ್ ಪೆಟ್ರೋಲ್ ದರ ರೂ.88.59ಕ್ಕೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ ರೂ.80.47ಕ್ಕೆ ತಲುಪಿದೆ ಇದನ್ನೂ ಓದಿ :ಅಮೆರಿಕದ ಖ್ಯಾತ ನಿರೂಪಕ ಲ್ಯಾರಿ ನಿಧನ

ಜಗತ್ತಿನ ಗಣ್ಯರು, ಚಿತ್ರ ತಾರೆಯರನ್ನು ವಿಶಿಷ್ಟ ಶೈಲಿಯ ಸಂದರ್ಶನ ನಡೆಸಿ ಕಳೆದ 50 ವರ್ಷಗಳಿಂದ ಜನರನ್ನು ರಂಜಿಸಿದ್ದ ಅಮೆರಿಕದ ಖ್ಯಾತ ಟಿವಿ ನಿರೂಪಕ ಲ್ಯಾರಿ ಕಿಂಗ್ ಮೃತಪಟ್ಟಿದ್ದಾರೆ. ಕಳೆದೊಂದು ವಾರದಿಂದ ಅವರು ಕೊರೊನಾ ಸೋಂಕಿಗೆ ತುತ್ತಾಗಿ ಅಮೆರಿಕದ ಸೆಡರ್ಸ್ ಸಿನಾಯಿ ಮೆಡಿಕಲ್ ಸೆಂಟರ್ ನಲ್ಲಿ ಕೊನೆಯುಸಿರು ಏಳೆದಿದ್ದಾರೆ. ಕ್ಯಾರಿ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ :ಪತ್ರಕರ್ತರ ಗೋಲ್ಡ್​ ಹಿಂತಿರುಗಿಸಿದ  ಚಾಲಕ -ಮಾನವೀಯತೆ ಮೆರೆದ […]

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಪಂಚಾಯಿತಿ ಚುನಾವಣೆ ಹಿನ್ನಲೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೂ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಲೆಕ್ಕಿಸದೆ ಸಭೆ ಸೇರಿದ ಜನ ನೀತಿ ಸಂಹಿತೆ ಗಾಳಿಗೆ ತೂರಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು. ಮತದಾರರ ಮುಂದೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಗೆದ್ದರೆ 500 ಮನೆಗಳು ಅನುದಾನ ನಿಮಗೆ ಕೊಡುತ್ತೇವೆ ನೀತಿ ಸಂಹಿತೆ ಉಲಘನೆ ಮಾಡಿದ್ದಾರೆ. ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಪರಸ್ವರ ಗಲಾಟೆ, ವ್ಯಕ್ತಿ […]

ಕುಡಿದ ಮತ್ತಿನಲ್ಲಿ ಪರಸ್ಪರ ಗಲಾಟೆ ಉಂಟಾಗಿ ವ್ಯಕ್ತಿ ಕೊಲೆಯಾಗಿರುವ ಘಟನೆ ಕೋಲಾರ ಜಿಲ್ಲೆಯ ಮಾಲುರು ಪಟ್ಟಣದ ಸಂತೆ ಬೀದಿಯಲ್ಲಿ ತಡರಾತ್ರಿ ನಡೆದಿದೆ. ಚೈನ್ ಬಾಬು ಶಶಿ ಬಳಿ ಹಣ ಸಾಲ ಪಡೆದು ವಾಪಸ್ ನೀಡಲಿಲ್ಲ ಹಣ ವಾಪಸ್ ಕೇಳಿದಕ್ಕೆ ಚೈನ್ ಬಾಬು ಹಲ್ಲೇ ಮಾಡಲು ಮುಂದಾಗಿದ್ದಾನೆ ಈ ವೇಳೆ ಶಶಿ ಮಚ್ಚಿನಿಂದ ಹಲ್ಲೇಮಾಡಿ ಕೊಲೆಗೈದಿರುವುದಾಗಿ ಠಾಣೆಯಲ್ಲಿ ಬಂದು ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. […]

ಮನೆ ಕಳವು ಮಾಡುತ್ತಿದ್ದ 3 ಜನ ಆರೋಪಿಗಳನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .ಸದ್ದುಗುಂಟೆಪಾಳ್ಯದಲ್ಲಿ ಮನೆ ಬಾಗಿಲು ಒಡೆದು ಚಿನ್ನಾಭರಣ ಹಣ ಲೂಟಿ ಮಾಡಿದ್ದ ಆರೋಪಿ ಇಮ್ರಾನ್ಅಹ್ಮದ್, ಸಯ್ಯದ್ ಜಮೀರ್, ಅಹ್ಮದ್ ಅತ್ತಿಕ್ ಪಾಷಾ, ರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 4.5 ಲಕ್ಷ ಬೆಲೆಯ 100 ಗ್ರಾಂ ಚಿನ್ನ ಹಾಗೂ 5 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ :ಮಹಿಳಾ ಟ್ರಾಫಿಕ್ ಪೊಲೀಸ್ ಅಧಿಕಾರಿಯ ಲಂಚವತಾರ

ಟ್ರಾಫಿಕ್ ಇಲಾಖೆ ಮಹಿಳಾ ಅಧಿಕಾರಿ ಮತ್ತೊಬ್ಬ ಮಜಹಿಳೆಯಿಂದ ಲಂಚ ತೆಗೆದುಕೊಳ್ಳುತತ್ಇರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ,ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಡಿಯೋದಲ್ಲಿ ಸ್ಕೂಟಿಯ ಮೇಲೆ ಮಹಿಳೆಯೊಬ್ಬರು ಕುಳಿತಿದ್ದರೆ ಇನ್ನೊಬ್ಬ ಮಹಿಳೆ ಟ್ರಾಫಿಕ್ ಪೊಲೀಸ್ ಜೊತೆ ಮಾತನಾಡುತ್ತಿದ್ದಾಳೆ, ಆ ಮಹಿಳೆಯನ್ನ ಹತ್ತಿರಕ್ಕೆ ಕರೆದು ಮಹಿಳಾ ಪೊಲೀಸ್ ಪಿಸು ಮಾತುಗಳನ್ನ ಆಡಿದ್ದಾರೆ ಕೂಡಲೇ ಮಹಿಳೆ ಹಣವನ್ನು ತೆಗೆದು ಆಕೆಯ ಪ್ಯಾಂಟ್ ಪ್ಯಾಕೆಟ್ ನೊಳಕ್ಕೆ ಹಾಕಿ ಸ್ಕೂಟಿ ಸಮೇತ […]

Advertisement

Wordpress Social Share Plugin powered by Ultimatelysocial