ಐಷಾರಾಮಿ ರೆಸಾರ್ಟ್ ಗೆ ಬಂದಿದ್ದ ಕಾಡಾನೆ

ಐಷಾರಾಮಿ ರೆಸಾರ್ಟ್ ಗೆ ಬಂದಿದ್ದ ಕಾಡಾನೆಯನ್ನು ಓಡಿಸಲು ಕೆಲಸಗಾರರು ಟೈರ್ ಗೆ ಬೆಂಕಿ ಹಚ್ಚಿ ಅದರ ಮೇಲೆ ಎಸೆದಿದ್ದರು. ಟೈರ್ ನೇರವಾಗಿ ಆನೆಯ ನೆತ್ತಿ ಮೇಲೆ ಸಿಕ್ಕಿ ಹಾಕಿಕೊಂಡಿತ್ತು. ಈ ವೇಳೆ ಅಲ್ಲಿಂದ ಓಡಿ ಹೋದ ಆನೆ ದೂರದ ಕಾಡಿನಲ್ಲಿ ಸತ್ತು ಹೋಗಿದೆ.ತಮಿಳುನಾಡಿನ ನೀಲಗಿರಿ ಜಿಲ್ಲೆಯ ಊಟಿ ಬಳಿ ಈ ಘಟನೆ ನಡೆದಿದೆ. ರಾತ್ರಿ ವೇಳೆ ಆನೆಯೊಂದು ರೆಸಾರ್ಟ್ ಒಳಗೆ ಬರಲು ಪ್ರಯತ್ನಿಸಿದೆ. ಈ ವೇಳೆ ಎಸ್ಟೇಟ್ ನೋಡಿಕೊಳ್ಳುತ್ತಿದ್ದ ಪ್ರಶಾಂತ್ ಹಾಗೂ ರೈಮಾನ್ ಎಂಬುವರು ಟೈಯರ್ ಗೆ ಬೆಂಕಿ ಹಚ್ಚಿ ಅದನ್ನು ಆನೆಯ ಮೇಲೆ ಎಸೆದಿದ್ದರು.

ಇದನ್ನೂ ಓದಿ :ಜಿಂಕೆ ಬೇಟೆಯಾಡಿ ಪೊಲೀಸರ ಅತಿಥಿಯಾದ ಭೂಪ

Please follow and like us:

Leave a Reply

Your email address will not be published. Required fields are marked *

Next Post

ಏರೋ ಇಂಡಿಯಾ ಪ್ರದರ್ಶನಕ್ಕೆ ವಾಯುನೆಲೆ ಸಜ್ಜು- ಕಣ್ಮನ ಸೆಳೆಯಲಿದೆ ಸೂರ್ಯ ಕಿರಣ್ ವಿಮಾನ

Mon Feb 1 , 2021
ಯಲಹಂಕ ವಾಯುನೆಲೆಯಲ್ಲಿ ಫೆ.3ರಿಂದ 5 ರವರೆಗೆ ನಡೆಯಲಿರುವ ಏರೋ ಇಂಡಿಯಾ 2021 ವೈಮಾನಿಕ ಪ್ರದರ್ಶನಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಭಾರತೀಯ ಸೇನೆಯ ಪ್ರಮುಖ ಅಸ್ತ್ರಗಳಾಗಿರುವ ರಫೇಲ್ ಯುದ್ಧವಿಮಾನಗಳು ಮತ್ತು ವಿವಿಧ ಹೆಲಿಕಾಪ್ಟರ್ ಗಳು ಜಂಟಿಯಾಗಿ ಕಸರತ್ತು ನಡೆಸಲಿವೆ. ಕೋವಿಡ್-19 ಆತಂಕದ ನಡುವೆಯೂ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ಸಾದ್ಯತೆಇದೆ. ಕಳೆದ ಬಾರಿ ಪಾರ್ಕಿಂಗ್ ಜಾಗದಲ್ಲಿ ಬೆಂಕಿ ಅನಾಹುತ ಸಂಭವಿಸಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಈ ಬಾರಿ ಬೆಂಕಿ ನಿಂದಿಸಲು 2 […]

Advertisement

Wordpress Social Share Plugin powered by Ultimatelysocial