ಟಿಡಿಪಿ ನಾಯಕ ʻವೆನ್ನಾ ಬಾಲಕೋಟಿ ರೆಡ್ಡಿʼ ಮೇಲೆ ಗುಂಡಿನ ದಾಳಿ,

ಹೈದರಾಬಾದ್ : ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ವೆನ್ನಾ ಬಾಲಕೋಟಿ ರೆಡ್ಡಿ  ಮೇಲೆ ಬುಧವಾರ ಅವರ ನಿವಾಸದಲ್ಲಿ ಗುಂಡು ಹಾರಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಗೆ ವೈಎಸ್‌ಆರ್‌ಸಿಪಿ (YSRCP) ಜವಾಬ್ದಾರಿ ಎಂದು ಟಿಡಿಪಿ ನಾಯಕ ಆರೋಪಿಸಿದ್ದಾರೆ.

ಪೊಲೀಸರ ಪ್ರಕಾರ, ಬುಧವಾರ ರಾತ್ರಿ 10.30 ರ ಸುಮಾರಿಗೆ ಟಿಡಿಪಿ ನಾಯಕ ಮತ್ತು ಮಾಜಿ ಸಂಸದ ವೆನ್ನಾ ಬಾಲಕೋಟಿ ರೆಡ್ಡಿ ಮೇಲೆ ಪಿ ವೆಂಕಟೇಶ್ವರ್ ರೆಡ್ಡಿ ಗುಂಡು ಹಾರಿಸಿದ್ದಾರೆ.

ರಾತ್ರಿ ವೆಂಕಟೇಶ್ವರ್ ರೆಡ್ಡಿ ಅವರು ಬಾಲಕೋಟಿ ರೆಡ್ಡಿಯ ಮನೆ ಬಾಗಿಲು ತಟ್ಟಿದ್ದಾರೆ. ಈ ವೇಳೆ, ಬಾಲಕಕೋಟಿ ರೆಡ್ಡಿ ಬಾಗಿಲು ತೆರೆದ ಕೂಡಲೇ ವೆಂಕಟೇಶ್ವರ್ ಗುಂಡು ಹಾರಿಸಿದ್ದು, ಗುಂಡು ಅವರ ಹೊಟ್ಟೆಗೆ ತಗುಲಿದೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ದಾಳಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. .

ಕಳೆದ ವರ್ಷವೂ ಬಾಲಕೋಟಿ ರೆಡ್ಡಿ ವಾಕಿಂಗ್‌ಗೆ ತೆರಳಿದ್ದ ವೇಳೆ ಚಾಕು ಮತ್ತು ಕೊಡಲಿಯಿಂದ ಹಲ್ಲೆಗೆ ಯತ್ನಿಸಲಾಗಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಮತಾಮೂರ್ತಿ ಸ್ಫೂರ್ತಿ ಕೇಂದ್ರದಲ್ಲಿ 108 ಪವಿತ್ರ ಕ್ಷೇತ್ರಗಳ ಬ್ರಹ್ಮೋತ್ಸವ ಸಂಭ್ರಮ ಇಂದಿನಿಂದ ಆರಂಭವಾಗಲಿದೆ.

Thu Feb 2 , 2023
ಸಮತಾಮೂರ್ತಿ ಸ್ಫೂರ್ತಿ ಕೇಂದ್ರದಲ್ಲಿ 108 ಪವಿತ್ರ ಕ್ಷೇತ್ರಗಳ ಬ್ರಹ್ಮೋತ್ಸವ ಸಂಭ್ರಮ ಇಂದಿನಿಂದ ಆರಂಭವಾಗಲಿದೆ. ಶ್ರೀ ತ್ರಿದಂಡಿ ಶ್ರೀಮನ್ನಾರಾಯಣ ರಾಮಾನುಜ ಚಿನಜೀಯರ್ ಸ್ವಾಮೀಜಿ ನೇತೃತ್ವದಲ್ಲಿ ಸಮತಾ ಕುಂಭ-2023 ಮಹೋತ್ಸವವು ಬೆಳಗ್ಗೆಯಿಂದ ಆರಂಭವಾಗಿದೆ 10.30ಕ್ಕೆ ಚಿನಜೀಯರ್ ಸ್ವಾಮಿ ಸುವರ್ಣಮೂರ್ತಿ ಭಗವದ್ರಾಮಾನುಜರ ಉಸ್ತುವಾರಿಯಲ್ಲಿ ಉತ್ಸವಾಂಭ ಸ್ನಾನದೊಂದಿಗೆ ಉತ್ಸವಗಳು ಆರಂಭವಾಗಲಿವೆ. ಈ ಆಧ್ಯಾತ್ಮಿಕ ಹಬ್ಬ ಇಂದಿನಿಂದ ಇದೇ 12ರವರೆಗೆ ನಡೆಯಲಿದೆ. ಈ ಉತ್ಸವವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಆಯೋಜಕರು ಸೂಕ್ತ ವ್ಯವಸ್ಥೆ […]

Advertisement

Wordpress Social Share Plugin powered by Ultimatelysocial