ಕಿಡ್ನಿ ಸಮಸ್ಯೆಗಳಿಗೆ ರಾಮಬಾಣ ʼಬಾಳೆ ದಿಂಡುʼ

ಕಿಡ್ನಿ ಸಮಸ್ಯೆಗಳಿಗೆ ರಾಮಬಾಣ ʼಬಾಳೆ ದಿಂಡುʼ

ತನ್ನ ದೇಹದ ಎಲ್ಲಾ ಭಾಗವನ್ನೂ ಇತರರಿಗೆ ನೆರವಾಗುವಂತೆ ಬಿಟ್ಟುಕೊಡುವ ಅಪರೂಪದ ಗಿಡ ಬಾಳೆ. ಬಾಳೆಕಾಯಿ, ಹಣ್ಣು, ಹೂ, ಒಳಗಿನ ದಿಂಡು ಎಲ್ಲವೂ ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು, ವಿಟಮಿನ್ ಗಳನ್ನು ಒದಗಿಸುತ್ತದೆ. ಬಾಳೆ ದಿಂಡಿನ ಪ್ರಯೋಜನಗಳೇನು ಎಂದಿರಾ ಇಲ್ಲಿ ಕೇಳಿ.

ಬಾಳೆ ದಿಂಡು ಸಾಕಷ್ಟು ಒಗರನ್ನು ಒಳಗೊಂಡಿರುತ್ತದೆ. ಬಲಿತಿರುವ ಬಾಳೆ ಗೊನೆ ಕಡಿದ ಬಳಿಕ ಅದರ ತಿರುಳನ್ನು ಬಗೆದು ಒಳಗಿರುವ ದಿಂಡನ್ನು ತೆಗೆಯಬೇಕು. ಇದು ಕಿಡ್ನಿ ಸ್ಟೋನ್ ಗೆ ರಾಮಬಾಣ. ಅಂದರೆ ಕಿಡ್ನಿಯಲ್ಲಿ ಕಲ್ಲಾಗಿದ್ದರೆ ವೈದ್ಯರು ಬಾಳೆ ದಿಂಡು ಸೇವಿಸಲು ಸಲಹೆ ನೀಡುತ್ತಾರೆ. ಕಲ್ಲನ್ನು ಕರಗಿಸುವ ವಿಶೇಷ ಶಕ್ತಿ ಇದಕ್ಕಿದೆ.

ಹೊಟ್ಟೆಯಲ್ಲಿ ಸೇರಿಕೊಂಡ ಕಲ್ಮಶಗಳನ್ನು ಇದು ಸ್ವಚ್ಛವಾಗಿಸುತ್ತದೆ. ಸಣ್ಣ ಕೂದಲು ಅಥವಾ ಕಸ ಹೊಟ್ಟೆಯೊಳಗಿದ್ದರೆ ಇದು ಅದನ್ನು ಹೊರ ತರಿಸುತ್ತದೆ. ಕಬ್ಬಿಣಾಂಶ ಹೇರಳವಾಗಿರುವ ಬಾಳೆದಿಂಡು ತುಸು ಉಷ್ಣ ಪ್ರವೃತ್ತಿಯದ್ದಾದರಿಂದ ಅತಿಯಾಗಿ ಇದನ್ನು ಸೇವಿಸಬಾರದು.

ಗರ್ಭಿಣಿಯರು ಇದರಿಂದ ದೂರವಿರುವುದೇ ಒಳ್ಳೆಯದು. ಪಲ್ಯ, ಸಾಂಬಾರು, ತಂಬುಳಿ ರೂಪದಲ್ಲಿ ಇದನ್ನು ಸೇವಿಸಬಹುದು. ಹಲವು ವಿಧದ ಪ್ರಯೋಜನಗಳನ್ನು ಹೊಂದಿರುವ ಬಾಳೆದಿಂಡನ್ನು ಸೇವಿಸಿ ಉತ್ತಮ ಅರೋಗ್ಯ ನಿಮ್ಮದಾಗಿಸಿಕೊಳ್ಳಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪೌಷ್ಟಿಕಾಂಶಭರಿತ ತೆಂಗಿನ ಕಾಯಿ ನೀರಿನಿಂದ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

Wed Dec 29 , 2021
ತೆಂಗಿನ ಕಾಯಿ ಒಡೆಯುವಾಗ ಸಿಗುವ ನೀರನ್ನು ವ್ಯರ್ಥವೆಂದು ಸಿಂಕ್ ಗೆ ಚೆಲ್ಲುತ್ತೀರಾ, ಬೇಡ. ಇದರಲ್ಲಿರುವ ಪೌಷ್ಟಿಕಾಂಶಗಳು ಎಳನೀರಿಗಿಂತಲೂ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ ಎಂಬುದು ನಿಮಗೆ ತಿಳಿದಿದೆಯೇ. ತೆಂಗಿನಕಾಯಿ ನೀರು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಿಸಿಲಿನ ಬೇಗೆಯಿಂದ ನಿರ್ಜಲೀಕರಣಗೊಳ್ಳುವ ದೇಹಕ್ಕೆ ಬೇಕಿರುವ ನೀರಿನಾಂಶವನ್ನು ಒದಗಿಸುತ್ತದೆ. ದೇಹಕ್ಕೆ ತಂಪನ್ನು ಒದಗಿಸುವ ಸಕ್ಕರೆ ಮತ್ತು ಇಲೆಕ್ಟ್ರೋಲೈಟ್ಸ್ ಸಮನಾಗಿ ಬೆರೆತಿರುವ ಪೇಯದ ಅವಶ್ಯಕತೆ ನಮ್ಮ ದೇಹಕ್ಕಿದೆ. ತೆಂಗಿನ ಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಎಂಜೀಮ್ಗಳಿದ್ದು […]

Advertisement

Wordpress Social Share Plugin powered by Ultimatelysocial