ತೆಂಗಿನ ಕಾಯಿ ಒಡೆಯುವಾಗ ಸಿಗುವ ನೀರನ್ನು ವ್ಯರ್ಥವೆಂದು ಸಿಂಕ್ ಗೆ ಚೆಲ್ಲುತ್ತೀರಾ, ಬೇಡ. ಇದರಲ್ಲಿರುವ ಪೌಷ್ಟಿಕಾಂಶಗಳು ಎಳನೀರಿಗಿಂತಲೂ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ ಎಂಬುದು ನಿಮಗೆ ತಿಳಿದಿದೆಯೇ.
ತೆಂಗಿನಕಾಯಿ ನೀರು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬಿಸಿಲಿನ ಬೇಗೆಯಿಂದ ನಿರ್ಜಲೀಕರಣಗೊಳ್ಳುವ ದೇಹಕ್ಕೆ ಬೇಕಿರುವ ನೀರಿನಾಂಶವನ್ನು ಒದಗಿಸುತ್ತದೆ. ದೇಹಕ್ಕೆ ತಂಪನ್ನು ಒದಗಿಸುವ ಸಕ್ಕರೆ ಮತ್ತು ಇಲೆಕ್ಟ್ರೋಲೈಟ್ಸ್ ಸಮನಾಗಿ ಬೆರೆತಿರುವ ಪೇಯದ ಅವಶ್ಯಕತೆ ನಮ್ಮ ದೇಹಕ್ಕಿದೆ.
ತೆಂಗಿನ ಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಎಂಜೀಮ್ಗಳಿದ್ದು ಜೀರ್ಣಕ್ರಿಯಯ ಸಮಸ್ಯೆಯನ್ನು ಇದು ದೂರ ಮಾಡುತ್ತದೆ. ಇದನ್ನು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವವಾಗುವುದರಿಂದ ಪದೇ ಪದೇ ಹಸಿವಾಗದು. ಹಾಗಾಗಿ ಇದು ದೇಹ ತೂಕ ಇಳಿಕೆಗೂ ಸಹಕಾರಿ. ವಿಟಮಿನ್ ಗಳು ಹೇರಳವಾಗಿರುವ ಇದು ಹೃದಯದ ಆರೋಗ್ಯ ಕಾಪಾಡುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.
ಕೊರೊನಾ ಆತಂಕ ಮುಗೀತು ಎಂದು ಒಂದೆರಡು ತಿಂಗಳು ನಿಟ್ಟಿಸಿರು ಬಿಡುವಷ್ಟರಲ್ಲಿ ಮತ್ತೆ ಕೊರೊನಾ ಆತಂಕ ಎದುರಾಗಿದೆ. ಈಗಾಗಲೇ ಒಮಿಕ್ರಾನ್ ಸಂಖ್ಯೆ 650 ದಾಟಿದೆ. ಒಮಿಕ್ರಾನ್ ಹೀಗೆ ಹೆಚ್ಚಾದರೆ ಕೊರೊನಾ 3ನೇ ಅಲೆ ಉಂಟಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಸರ್ಕಾರ ಮುಂದಾಗಿದೆ, ಬೂಸ್ಟರ್ ಲಸಿಕೆ ನೀಡಲು ಮುಂದಾಗಿದೆ ಅದಕ್ಕೆ ಪ್ರಿಕಾಷನ್ ಡೋಸ್ ಎಮದು ಕರೆಯಲಾಗಿದೆ. ಇದನ್ನು ಮೊದಲಿಗೆ ಆರೋಗ್ಯ ಕಾರ್ಯಕರ್ತರು, ಫ್ರಂಟ್ಲೈನ್ ವರ್ಕರ್ಸ್ ಹಾಗೂ 60 ವರ್ಷ ಮೇಲ್ಪಟ್ಟವರಿಗೆ […]