ಗಣದಿನ್ನಿ ಗ್ರಾಮದಲ್ಲಿ ಕೆರೆಯಲ್ಲಿ ಕುಡಿಯುವ ನೀರು ಕಲುಷಿತವಾದರೂ ಕೆರೆಯ ನೀರನ್ನು ಹೊರ ಹಾಕದೆ ಅದೇ ನೀರಿನಲ್ಲಿ ಮತ್ತೆ ಕೆರೆಯನ್ನು ತುಂಬಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಪಿಡಿಒ
ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗಣ ದಿನ್ನಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಇದ್ದರು ಅದೇ ಗಣದಿನ್ನಿ ಗ್ರಾಮದಲ್ಲಿ ಬಹುದಿನಗಳಿಂದ ಕುಡಿಯುವ ನೀರು ಕೆರೆಯಲ್ಲಿ ನಿಂತಿರುವುದರಿಂದ ಕೆರೆಯ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ಇಂತಹ ಕಲುಷಿತ ನೀರನ್ನು ಕುಡಿದು ಗ್ರಾಮದ ಜನರ ಆರೋಗ್ಯದಲ್ಲಿ ಹೆಚ್ಚು ಕಮ್ಮಿಯಾದರೆ ಇದಕ್ಕೆ ಯಾರು ಹೊಣೆಗಾರರು.
ಸಂಬಂಧಪಟ್ಟ ಮೇಲಾಧಿಕಾರಿಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಿ ಇ ಓ ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಇ ಓ ಗಣದಿನ್ನಿ ಕೆರೆಯ ಕಡೆ ಗಮನ ಹರಿಸಬೇಕೆಂದು ಗ್ರಾಮಸ್ಥರು ಮಾಧ್ಯಮದ ಮುಖಾಂತರ ತಿಳಿಸಿದರು ಇಂತಹ ಕಲುಷಿತ ಕೆರೆಯ ನೀರನ್ನು ಹೊರಹಾಕಿ ಕೆರೆಯ ಸುತ್ತಮುತ್ತಲಿರುವ ಹುಲ್ಲು ಕಸ ಕಡ್ಡಿಯನ್ನು ತೆಗೆದು ಮತ್ತೆ ಹೊಸ ನೀರು ತುಂಬಿಸ ಬೇಕೆಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಪಂಚಾಯತ್ ಸದಸ್ಯರುಗಳಿಗೆ ಗ್ರಾಮಸ್ಥರು ಅಡ್ಡಿಪಡಿಸಿರುವ ಘಟನೆ ಗಣ ದಿನ್ನಿ ಗ್ರಾಮದಲ್ಲಿ ನಡೆದಿದೆ.
ಸರಕಾರ ಕುಡಿಯುವ ನೀರಿಗಾಗಿ 15ನೇ ಹಣಕಾಸಿನಲ್ಲಿ ಕೋಟಿ ಕೋಟಿ ಹಣ ಮೀಸಲಿಟ್ಟರು ಹಣವನ್ನು ಸರಿಯಾದ ಕೆಲಸಕ್ಕೆ ಬಳಸದೆ ವಿನಾಕಾರಣ ಹಣವನ್ನು ದುರ್ಬಳಕೆಯಾಗುತ್ತಿದೆ ಸರ್ಕಾರ ನಿಯೋಜಿಸಿರುವ ಹಣವನ್ನು ಕುಡಿಯುವ ನೀರಿನ ಕೆರೆಗಾಗಿ ಮತ್ತು ಗ್ರಾಮದ ಕುಡಿಯುವ ನೀರಿನ ಅಭಿವೃದ್ಧಿಗಾಗಿ ಬಳಸಿ ಕುಡಿಯುವ ಕೆರೆಯ ಕಲುಷಿತ ನೀರನ್ನು ಹೊರ ಹಾಕಿ ಮತ್ತು ಕೆರೆಯ ಸುತ್ತಮುತ್ತ ಕಸ ಕಡ್ಡಿಯನ್ನು ತೆಗೆದು ಮತ್ತೆ ಪುನಃ ಕೆರೆಗೆ ಹೊಸ ನೀರು ತುಂಬಿ ಸಾರ್ವಜನಿಕರ ಆರೋಗ್ಯ ಕಾಪಾಡುವುದಕ್ಕಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಿಇಒ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಇ ಓ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಅಧ್ಯಕ್ಷರು ಗ್ರಾಮ ಪಂಚಾಯತ್ ಸದಸ್ಯರು ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲ ಮಾಡಿಕೊಡುತ್ತಾರೋ ಇಲ್ಲವೋ ಅನ್ನುವದನ್ನೇ ಕಾದು ನೋಡಬೇಕಾಗಿದೆ ವರದಿಗಾರರು ಚಂದ್ರಶೇಖರ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada