ರಬಕವಿಬನಹಟ್ಟಿ ನಗರಕ್ಕೆ ನಿನ್ನೆ ಅಮಿತ್ ಶಾ ಬಂದಾಗ ನಡೆದ ಘಟನೆ..!

ಅಮಿತ್ ಶಾ ಸ್ವಾಗತ ಕೋರಿದ ಹಾಲಿನ ಪ್ಯಾಕೆಟ್ ಕಳ್ಳ ಸಾಗಾಣಿಕೆ ದಂಧೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿ, ರಬಕವಿಬನಹಟ್ಟಿ ನಗರಕ್ಕೆ ನಿನ್ನೆ ಅಮಿತ್ ಶಾ ಬಂದಾಗ ನಡೆದ ಘಟನೆ,  ಶಿವಾನಂದ ಅಂಗಡಿ ಕ್ಷೀರಭಾಗ್ಯ ಹಾಲಿನ ಪ್ಯಾಕೆಟ್ ಕಳ್ಳಸಾಗಾಣಿಕೆ ದಂಧೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿ. ಕ್ಷೀರಭಾಗ್ಯ ಹಾಲಿನ ಪ್ಯಾಕೆಟ್ ದಂಧೆಕೋರರಲ್ಲಿ ಬಂಧಿತರಲ್ಲಿ ಶಿವಾನಂದ ಅಂಗಡಿ ಕೂಡ ಒಬ್ಬನಾಗಿದ್ದ. ಜಮಖಂಡಿ ನಗರದ ಗೋಪಾಲ ತೇಲಿ ಎಂಬುವರ ಗೋದಾಮ್ ಒಂದರಲ್ಲಿ ಹಾಲಿನ ಪ್ಯಾಕೆಟ್ ಕಳ್ಳಸಂಗ್ರಹ ಸಾಗಾಣಿಕೆ ಕಂಡು ಬಂದಿತ್ತು.

ಹಾಲಿನ ಪ್ಯಾಕೆಟ್ ಗಳನ್ನು ಮಹಾರಾಷ್ಟ್ರಕ್ಕೆ ಕಳ್ಳ ಸಾಗಾಣಿಕೆ ಮಾಡುತ್ತಿದ್ದರು. ೩೫ ಲಕ್ಷ ಮೌಲ್ಯದ ೧೪ ಟನ್ ಹಾಲಿನ ಪ್ಯಾಕೆಟ್ ಪತ್ತೆಯಾಗಿದ್ವು,  ಆಗ ಮಹದೇವ ತೇಲಿ,ಗಿರೀಶ್ ತೇಲಿ ,ರಮೇಶ್ ಉಪ್ಪಿನ ಅವರನ್ನು ಜಮಖಂಡಿ ಪೊಲೀಸರು ಬಂಧಿಸಿದ್ದರು. ನಂತರ ಪ್ರಕರಣ ಸಿಐಡಿ ತನಿಖೆಗೆ ಹಸ್ತಾಂತರವಾಗಿತ್ತು. ಸಿಐಡಿ ಪೊಲೀಸರು ಶಿವಾನಂದ ಅಂಗಡಿಯನ್ನು ಬಂಧಿಸಿದ್ದರು.

ಎರಡುವರೆ ವರ್ಷದ ಹಿಂದೆ ನಡೆದಿದ್ದ ಘಟನೆ, ಈಗ ಆತ ತೇರದಾಳ ಕ್ಷೇತ್ರದ ಮಹಾಲಿಂಗಪುರ ಭಾಗದ ಬಿಜೆಪಿ ಮುಖಂಡ,  ಈತನ ಪತ್ನಿ ಆಗ ಮಹಾಲಿಂಗಪುರ ಪುರಸಭೆ ಅಧ್ಯಕ್ಷೆ ಆಗಿದ್ದಳು.  ಅದೇ ವ್ಯಕ್ತಿ ಅಮಿತ್ ಶಾ ರಬಕವಿಬನಹಟ್ಟಿ ಹೆಲಿಪ್ಯಾಡ್ ಗೆ ಬಂದಾಗ ನಡೆದ ಘಟನೆ. ಮಹಾಲಿಂಗಪುರ ಮೂಲದ ಶಿವಾನಂದ ಅಂಗಡಿ,  ಮಹಾಲಿಂಗಪುರ ಪುರಸಭೆ ಮಾಜಿ ಅಧ್ಯಕ್ಷೆ ಸ್ನೇಹಲ್ ಅಂಗಡಿ ಪತಿ ಶಿವಾನಂದ ಅಂಗಡಿ,  ತೇರದಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಆಪ್ತ, ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ,  ಆಕ್ರಮದಲ್ಲಿ ಭಾಗಿಯಾದವನಿಂದ ಅಮಿತ್ ಶಾ ಸ್ವಾಗತ  ಕೋರಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದಲ್ಲಿ, ಬಾರಿ ಬಿನ್ನಮತ..!

Wed Apr 26 , 2023
ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದಲ್ಲಿ, ಬಾರಿ ಬಿನ್ನಮತ ಇದೀಗ ೩ ದಿನಗಳ, ಹಿಂದೆ ಬಂದ ನಿಪ್ಪಾಣಿ ವಿಧಾನಸಭಾ, ಕ್ಷೇತ್ರದ ಅಭ್ಯರ್ಥಿ ಉತ್ತಮ ಪಾಟೀಲ, ಹಳೇ ಕಾರ್ಯಕರ್ತರನ್ನು, ಚಿಕ್ಕೋಡಿ ಜಿಲ್ಲಾಧ್ಯಕ್ಷ ಜಾವೇದ್ ಕಾಜಿ ಯವರನ್ನು, ಹಾಗೂ ನಿಪ್ಪಾಣಿ ತಾಲೂಕಾ ಅಧ್ಯಕ್ಷ ,ನಜೀರ್ ಶೇಕ್ ಅವರನ್ನು, ಉತ್ತಮ ಪಾಟೀಲರ ಬಣ ಪದೇ ಪದೇ, ಕಡೆಗಣಿಸುತ್ತಿದ್ದು ಸುಮಾರು ದಿನಗಳಿಂದ, ಪ್ರಾಮಾಣಿಕ ವಾಗಿ ರಾಷ್ಟ್ರವಾದಿ ಕಾಂಗ್ರೆಸ್, ಪಕ್ಷ ಸಂಘಟಿಸಿದ್ದರು ಇವತ್ತು ನಿಪ್ಪಾಣಿ ತಾಲೂಕಿನ, […]

Advertisement

Wordpress Social Share Plugin powered by Ultimatelysocial