ಅಮಿತ್ ಶಾ ಸ್ವಾಗತ ಕೋರಿದ ಹಾಲಿನ ಪ್ಯಾಕೆಟ್ ಕಳ್ಳ ಸಾಗಾಣಿಕೆ ದಂಧೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿ, ರಬಕವಿಬನಹಟ್ಟಿ ನಗರಕ್ಕೆ ನಿನ್ನೆ ಅಮಿತ್ ಶಾ ಬಂದಾಗ ನಡೆದ ಘಟನೆ, ಶಿವಾನಂದ ಅಂಗಡಿ ಕ್ಷೀರಭಾಗ್ಯ ಹಾಲಿನ ಪ್ಯಾಕೆಟ್ ಕಳ್ಳಸಾಗಾಣಿಕೆ ದಂಧೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿ. ಕ್ಷೀರಭಾಗ್ಯ ಹಾಲಿನ ಪ್ಯಾಕೆಟ್ ದಂಧೆಕೋರರಲ್ಲಿ ಬಂಧಿತರಲ್ಲಿ ಶಿವಾನಂದ ಅಂಗಡಿ ಕೂಡ ಒಬ್ಬನಾಗಿದ್ದ. ಜಮಖಂಡಿ ನಗರದ ಗೋಪಾಲ ತೇಲಿ ಎಂಬುವರ ಗೋದಾಮ್ ಒಂದರಲ್ಲಿ ಹಾಲಿನ ಪ್ಯಾಕೆಟ್ ಕಳ್ಳಸಂಗ್ರಹ ಸಾಗಾಣಿಕೆ ಕಂಡು ಬಂದಿತ್ತು.
ಹಾಲಿನ ಪ್ಯಾಕೆಟ್ ಗಳನ್ನು ಮಹಾರಾಷ್ಟ್ರಕ್ಕೆ ಕಳ್ಳ ಸಾಗಾಣಿಕೆ ಮಾಡುತ್ತಿದ್ದರು. ೩೫ ಲಕ್ಷ ಮೌಲ್ಯದ ೧೪ ಟನ್ ಹಾಲಿನ ಪ್ಯಾಕೆಟ್ ಪತ್ತೆಯಾಗಿದ್ವು, ಆಗ ಮಹದೇವ ತೇಲಿ,ಗಿರೀಶ್ ತೇಲಿ ,ರಮೇಶ್ ಉಪ್ಪಿನ ಅವರನ್ನು ಜಮಖಂಡಿ ಪೊಲೀಸರು ಬಂಧಿಸಿದ್ದರು. ನಂತರ ಪ್ರಕರಣ ಸಿಐಡಿ ತನಿಖೆಗೆ ಹಸ್ತಾಂತರವಾಗಿತ್ತು. ಸಿಐಡಿ ಪೊಲೀಸರು ಶಿವಾನಂದ ಅಂಗಡಿಯನ್ನು ಬಂಧಿಸಿದ್ದರು.
ಎರಡುವರೆ ವರ್ಷದ ಹಿಂದೆ ನಡೆದಿದ್ದ ಘಟನೆ, ಈಗ ಆತ ತೇರದಾಳ ಕ್ಷೇತ್ರದ ಮಹಾಲಿಂಗಪುರ ಭಾಗದ ಬಿಜೆಪಿ ಮುಖಂಡ, ಈತನ ಪತ್ನಿ ಆಗ ಮಹಾಲಿಂಗಪುರ ಪುರಸಭೆ ಅಧ್ಯಕ್ಷೆ ಆಗಿದ್ದಳು. ಅದೇ ವ್ಯಕ್ತಿ ಅಮಿತ್ ಶಾ ರಬಕವಿಬನಹಟ್ಟಿ ಹೆಲಿಪ್ಯಾಡ್ ಗೆ ಬಂದಾಗ ನಡೆದ ಘಟನೆ. ಮಹಾಲಿಂಗಪುರ ಮೂಲದ ಶಿವಾನಂದ ಅಂಗಡಿ, ಮಹಾಲಿಂಗಪುರ ಪುರಸಭೆ ಮಾಜಿ ಅಧ್ಯಕ್ಷೆ ಸ್ನೇಹಲ್ ಅಂಗಡಿ ಪತಿ ಶಿವಾನಂದ ಅಂಗಡಿ, ತೇರದಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಆಪ್ತ, ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ, ಆಕ್ರಮದಲ್ಲಿ ಭಾಗಿಯಾದವನಿಂದ ಅಮಿತ್ ಶಾ ಸ್ವಾಗತ ಕೋರಿದ್ದಾರೆ.
https://play.google.com/store/apps/details?id=com.speed.newskannada