ಕೊಲೆಯಾದ ವಿದ್ಯಾರ್ಥಿನಿ ಕೋಲಾರದ ಮುಳಬಾಗಿಲಿನವಳು.
ಕಳೆದ ಎರಡು ವರ್ಷದಿಂದ ಪ್ರೀತಿಯಲ್ಲಿ ಬಿದ್ದಿದ್ದ ಜೋಡಿ.
ಹೊಸ ಕಾಲೇಜಿಗೆ ಸೇರ್ತಿದ್ದಂತೆ ಹಳೆ ಲವ್ವರ್ ಪವನ್ ನನ್ನ ಅವಾಯ್ಡ್ ಮಾಡಿದ್ದ ಲಯಸ್ಮಿತಾ.
ಬೇರೆ ಹುಡುಗನ ಜೊತೆ ಓಡಾಡ್ತಿದ್ದಾಳೆ ಎಂಬ ಗಾಳಿಸುದ್ದಿ ಕೇಳಿದ್ದ ಪವನ್.
ಇದರಿಂದ ಸಿಟ್ಟಿಗೆದ್ದ ಪವನ್ ಇಂದು ಬ್ಯಾಗ್ ನಲ್ಲಿ ಚಾಕು ಹಿಡಿದು ಬಂದಿದ್ದ.
ಪ್ರೆಸಿಡೆನ್ಸಿ ಕಾಲೇಜಿನ ಕ್ಯಾಂಪಸ್ ಗೆ ಎಂಟ್ರಿ ಕೊಟ್ಟಿದ್ದ.
ಇಂದು 12 ಗಂಟೆಗೆ ಕ್ಯಾಂಪಸ್ ಗೆ ಎಂಟ್ರಿ ಕೊಟ್ಟಿದ್ದ.
ಕಾಲೇಜು ಮುಗಿಸಿ ಹೊರಬಂದಿದ್ದ ಲಯಸ್ಮಿತಾಳನ್ನ ಫೋನ್ ಮಾಡಿ ತಾನಿದ್ದಲ್ಲಿಗೆ ಕರೆಸಿಕೊಂಡಿದ್ದ.
ನಂತರ ಐದೇ ಐದು ನಿಮಿಷದಲ್ಲಿ ಮಾತುಕತೆ ಮುಗಿಸಿದ್ದ ಪವನ್.
ಮಾತು ಮುಗಿಸಿ ಬ್ಯಾಗ್ ತೆರೆದವ್ನೇ ಚಾಕುವಿನಿಂದ ಲಯಸ್ಮಿತಾಳಿಗೆ ಇರಿಯೋಕೆ ಶುರುಮಾಡಿದ್ದ.
ಎದೆಯ ಭಾಗಕ್ಕೆ ಐದು ಬಾರಿ ಚಾಕುವಿನಿಂದ ಇರಿದಿದ್ದ ಪವನ್.
ನಂತರ ತಾನೂ ಎದೆಯ ಭಾಗಕ್ಕೆ ಚಾಕುವನ್ನ ಇರಿದುಕೊಂಡಿದ್ದ.
ಸದ್ಯ ಘಟನೆಯಲ್ಲಿ ಲಯಸ್ಮಿತಾ ಸಾವನ್ನಪ್ಪಿದ್ದಾಳೆ.
ಕೊಲೆಗಾರ ಪವನ್ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada