ಚಿತ್ರದಲ್ಲಿರುವ ಇಬ್ಬರು ಮುದ್ದು ಮಕ್ಕಳು ಇಂದು ನಟಿಯರು,

ಚಿತ್ರದಲ್ಲಿರುವ ಇಬ್ಬರು ಮುದ್ದು ಮಕ್ಕಳಲ್ಲಿ ಒಬ್ಬರು ಸ್ಟಾರ್ ನಟಿಯಾಗಿದ್ದರೆ, ಮತ್ತೊಬ್ಬರು ಈಗ ನಟನೆ ಆರಂಭಿಸಿದ್ದಾರೆ. ಈ ಇಬ್ಬರೂ ನಟನೆ ಆರಂಭಿಸಿರುವುದು ತೆಲುಗು ಚಿತ್ರರಂಗದಿಂದ. ಯಾರು ಈ ನಟಿಯರು ಗುರುತಿಸಬಲ್ಲಿರಾ?ಚಿತ್ರದಲ್ಲಿ ಕಾಣಿಸುತ್ತಿರುವ ಹೆಣ್ಣು ಮಕ್ಕಳು ಅಕ್ಕ-ತಂಗಿಯರು.ಈ ಇಬ್ಬರಲ್ಲಿ ಒಬ್ಬರು ಸ್ಟಾರ್ ನಟಿಯಾದರೆ ಮತ್ತೊಬ್ಬರು ಈಗಿನ್ನು ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ನಟಿಸಿರುವ ಎರಡೂ ಸಿನಿಮಾಗಳು ಇನ್ನೂ ಬಿಡುಗಡೆ ಆಗಿಲ್ಲ. ಇಬ್ಬರೂ ದೆಹಲಿ ಮೂಲದವರಾದರೂ ನಟನೆ ಪದಾರ್ಪಣೆ ಮಾಡಲು ಮೊದಲು ಆಯ್ದುಕೊಂಡಿದ್ದು ತೆಲುಗು ಚಿತ್ರರಂಗವನ್ನು.ಸ್ಟಾರ್ ನಟಿ ಹಾಗೂ ಅವರ ಸಹೋದರಿ ನೂಪುರ್ ಸೆನನ್ ಅವರ ಚಿತ್ರವಿದು. ಇಬ್ಬರೂ ದೆಹಲಿಯ ನಿವಾಸದಲ್ಲಿದ್ದಾಗ ತೆಗೆದ ಚಿತ್ರವಿದು. ಮಧ್ಯಮ ಕುಟುಂಬಕ್ಕೆ ಸೇರಿದ ಈ ಚೆಲುವೆಯರು, ಶಿಕ್ಷಣ ಮುಗಿಸಿ ಮಾಡೆಲಿಂಗ್ ಮಾಡಿ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.ಅಕ್ಕ ಕೃತಿ ಸನೋನ್ ತೆಲುಗಿನಲ್ಲಿ ಮಹೇಶ್ ಬಾಬು ನಟಿಸಿರುವ ‘ನೇನೊಕ್ಕಡಿನೆ’ ಸಿನಿಮಾದ ಮೂಲಕ ನಟನೆಗೆ ಪದಾರ್ಪಣೆ ಮಾಡಿ ಆ ಬಳಿಕ ಸ್ಟಾರ್ ನಟಿಯಾಗಿ ಬೆಳೆದರು. ಇದೀಗ ಕೃತಿಯ ಸಹೋದರಿ ನೂಪುರ್ ಸನೋನ್ ಸಹ ಚಿತ್ರರಂಗಕ್ಕೆ ತೆಲುಗು ಸಿನಿಮಾದ ಮೂಲಕವೇ ಪದಾರ್ಪಣೆ ಮಾಡುತ್ತಿದ್ದಾರೆ.ನೂಪುರ್ ಸನೋನ್, ತೆಲುಗಿನ ಸ್ಟಾರ್ ಹೀರೋ ಮಾಸ್ ಮಹಾರಾಜ ರವಿತೇಜ ನಟಿಸುತ್ತಿರುವ ಟೈಗರ್ ನಾಗೇಶ್ವರ್ ರಾವ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ನಟಿಸುವಾಗಲೇ ಹಿಂದಿ ಸಿನಿಮಾದಿಂದಲೂ ನೂಪುರ್​ಗೆ ಅವಕಾಶ ಬಂದಿದ್ದು, ನವಾಜುದ್ದೀನ್ ಸಿದ್ಧಿಕಿ ನಟನೆಯ ನೂರಾನಿ ಚೆಹ್ರ ಸಿನಿಮಾದಲ್ಲಿ ನೂಪುರ್ ನಟಿಸುತ್ತಿದ್ದಾರೆ.ಇನ್ನು ಕೃತಿ ಸನೋನ್, ಬಾಲಿವುಡ್​ ಮಾತ್ರವೇ ಅಲ್ಲದೆ ದಕ್ಷಿಣ ಚಿತ್ರರಂಗದಲ್ಲಿಯೂ ಜನಪ್ರಿಯ ನಟಿಯಾಗಿದ್ದು, ಇತ್ತೀಚೆಗಷ್ಟೆ ಅವರ ನಟನೆಯ ಶೆಹಜಾದಾ ಹಿಂದಿ ಸಿನಿಮಾ ಬಿಡುಗಡೆ ಆಗಿದೆ. ಪ್ರಭಾಸ್ ಜೊತೆಗೆ ಆದಿಪುರುಷ್ ಸಿನಿಮಾದಲ್ಲಿ ಸೀತೆ ಪಾತ್ರದಲ್ಲಿ ನಟಿಸಿದ್ದಾರೆ. ಟೈಗರ್ ಶ್ರಾಫ್ ಜೊತೆಗೆ ಗಣ್​ಪತ್ ಸಿನಿಮಾಕ್ಕೂ ಬಣ್ಣ ಹಚ್ಚಿದ್ದಾರೆ. ಹಿಂದಿಯ ಇನ್ನೊಂದು ರೊಮ್ಯಾಂಟಿಕ್ ಸಿನಿಮಾವನ್ನೂ ಕೃತಿ ಒಪ್ಪಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ.

Tue Feb 28 , 2023
  ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ 7 ನೇ ವೇತನ ಆಯೋಗ ಜಾರಿ ವಿಚಾರ ಮಧ್ಯಂತರ ವರದಿ ಸಿದ್ಧಪಡಿಸ್ತಾ ಇದ್ದೇವೆ ಮಧ್ಯಂತರ ವರದಿ ಬಂದ ಕೂಡಲೇ ಜಾರಿಯಾಗುತ್ತೆ 2023-24 ನೇ ಸಾಲಿನಲ್ಲಿಯೇ ಅನುಷ್ಠಾನಕ್ಕೆ ತರ್ತೇವೆ ಬಜೆಟ್ ನಲ್ಲಿ 7 ವೇತನ ಆಯೋಗ ಜಾರಿಗೆ ಹಣ ತೆಗೆದಿಟ್ಟಿದ್ದೇವೆ ಅಮಿತ್ ಶಾ ಸೇರಿದಂತೆ ಅನೇಕ ನಾಯಕರು ಚುನಾವಣಾ ಏಜೆಂಟರಂತೆ ವರ್ತಿಸ್ತಾರೆ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಬೊಮ್ಮಾಯಿ ಕಿಡಿ ಮೋದಿ ಭೇಟಿಯಿಂದ ಕಾಂಗ್ರೆಸ್ […]

Advertisement

Wordpress Social Share Plugin powered by Ultimatelysocial