ಟಾಲಿವುಡ್ ಜನಪ್ರಿಯ ಯುವ ನಟ ‘ಸುಧೀರ್ ವರ್ಮ’ ಆತ್ಮಹತ್ಯೆ.

ಕೆಎನ್‌ಎನ್ಡಿಜಿಟಲ್ ಡೆಸ್ಕ್ : ಟಾಲಿವುಡ್ ಯುವ ನಟ ಸುಧೀರ್ ವರ್ಮ ವೈಯಕ್ತಿಕ ಸಮಸ್ಯೆಗಳಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗ್ತಿದೆ. ಈ ಘಟನೆ ಸೋಮವಾರ ವಿಶಾಖಪಟ್ಟಣದಲ್ಲಿ ನಡೆದಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಅಂದ್ಹಾಗೆ, 2013ರಲ್ಲಿ ಕಿಶೋರ್ ತಿರುಮಲ ನಿರ್ದೇಶನದ ಸೆಕೆಂಡ್ ಹ್ಯಾಂಡ್ ಸಿನಿಮಾ ಸುಧೀರ್ ವರ್ಮಾಗೆ ನಾಯಕನಾಗಿ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಸಂತೋಷ್ ಎಂಬ ಛಾಯಾಗ್ರಾಹಕನ ಪಾತ್ರವನ್ನ ಸುಧೀರ್ ವರ್ಮಾ ನಿರ್ವಹಿಸಿದ್ದಾರೆ. ಈ ಚಿತ್ರದ ಮೂಲಕ ಅವರು ಟಾಲಿವುಡ್ಗೆ ಪ್ರವೇಶಿಸಿದರು. ನಂತ್ರ ಸುಧೀರ್ ವರ್ಮಾ ವರಮುಲಪುಡಿ ನಿರ್ದೇಶನದ ಕುಂದನಪು ಬೊಮ್ಮ ಚಿತ್ರದಲ್ಲಿ ನಾಯಕನಾಗಿ ನಟಿಸಿದರು. ಈ ಚಿತ್ರವು 2016ರಲ್ಲಿ ಬಿಡುಗಡೆಯಾಯಿತು. ಇದಲ್ಲದೇ, ಸುಧೀರ್ ವರ್ಮಾ ಇತರ ಕೆಲವು ತೆಲುಗು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನ ನಿರ್ವಹಿಸಿದ್ದಾರೆ. ಇನ್ನು ಚಿರಂಜೀವಿ ಅವರ ಮಗಳು ಸುಶ್ಮಿತಾ ನಿರ್ಮಿಸಿದ ಶೂಟೌಟ್ ಅಟ್ ಆಲರ್ ವೆಬ್ ಸರಣಿಯಲ್ಲಿ ಸುಧೀರ್ ವರ್ಮಾ ನಟಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದೇ ವೇದಿಕೆ ಮೇಲೆ ಕಿಚ್ಚ ಸುದೀಪ್-ದರ್ಶನ್ ಸಹೋದರ.

Mon Jan 23 , 2023
ಕರ್ನಾಟಕ ಚಲನಚಿತ್ರ ಕಪ್ ಕಳೆದ ಎರಡು ಸೀಸನ್ ಯಶಸ್ವಿಯಾಗಿ ನಡೆದಿದೆ. ಈಗ ಮೂರನೇ ಸೀನಸ್‌ಗೆ ಮುಂದಾಗಿದೆ. ಈ ಬಾರಿ ಕಳೆದ ಎರಡು ಸೀಸನ್‌ಗಿಂತ ಅದ್ದೂರಿಯಾಗಿ ನಡೆಯುತ್ತೆ ಅನ್ನೋ ಸುಳಿವು ನೋಡಿದ್ದಾರೆ. ಅದಕ್ಕಾಗಿಯೇ ಕೆಸಿಸಿ ಕಮಿಟಿ ಪ್ರೆಸ್‌ಮೀಟ್ ಕರೆದಿತ್ತು. ಈ ವೇಳೆ ವೇದಿಕೆ ಮೇಲೆ ಕಿಚ್ಚ ಸುದೀಪ್ ಹಾಗೂ ಚಿತ್ರರಂಗ ನಟ, ನಿರ್ದೇಶಕ ಹಾಗೂ ನಿರ್ಮಾಪಕರು ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ದರ್ಶನ್ ಜೊತೆ ದಿನಕರ್ ತೂಗುದೀಪ ಕೂಡ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಈ […]

Advertisement

Wordpress Social Share Plugin powered by Ultimatelysocial