ತುಮಕೂರು ಬಿಜೆಪಿಯಲ್ಲಿ ಮುಂದುವರಿದ ಬಂಡಾಯದ ಬಿಸಿ.

ಕೊರಟಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ ಬೆನ್ನೆಲೆ. ಕೊರಟಗೆರೆ ಕ್ಷೇತ್ರದ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ.  ಕೊರಟಗೆರೆ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಕೆ.ಎಂ.ಮುನಿಯಪ್ಪಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ. ಕೊರಟಗೆರೆಯಲ್ಲಿ ಕೆ.ಎಂ ಮುನಿಯಪ್ಪ ಸುದ್ದಿಗೊಷ್ಠಿ. ಕೊರಟಗೆರೆ ಕ್ಷೇತ್ರದಲ್ಲಿ ತಳಮಟ್ಟದಲ್ಲಿದ್ದ ಬಿಜೆಪಿಯನ್ನ ಬೆಳಸಿದ್ದು ನಾವು. ಯಡಿಯೂರಪ್ಪ ಅವರು ಹೇಳಿದ್ರು, ಹೋಗಿ ಸಂಘಟನೆ ಮಾಡು ನಾವಿದ್ದಿವಿ ಅಂತ. ಆ ಭರವಸೆ ಮೇಲೆ‌ ನಾನು ಈ ಕ್ಷೇತ್ರಕ್ಕೆ ಬಂದೆ. ನಾನು ಮೊದಲು ಕ್ಷೇತ್ರಕ್ಕೆ ಬಂದಾಗ ಬಿಜೆಪಿ ಅಂದ್ರೆ ಜನ ನಗ್ತಿದ್ರು, ಆ ಮಟ್ಟದಲ್ಲಿದ್ದ ಬಿಜೆಪಿ ಪಕ್ಷವನ್ನು,  ಇವತ್ತು ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಕಟ್ಟಿ ಬೆಳೆಸಿದಿವಿ. ಆದರೆ ಇವತ್ತು ನಮಗೆ ಟಿಕೆಟ್ ಕೈ ತಪ್ಪಿದೆ. ಕರೋನಾ ಸಂಕಷ್ಟದ ಕಾಲದಲ್ಲಿ ಸಾಕಷ್ಟು ಕೆಲಸ ಮಾಡಿ ಪಕ್ಷವನ್ನು ಕಟ್ಟಿದ್ದೇನೆ, ಇಲ್ಲಿನ ಜನರ ಕಷ್ಟಕ್ಕೆ ಸ್ಪಂಧಿಸಿದಿನಿ, ಕ್ಷೇತ್ರದಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಪುಡ್ ಕಿಟ್ ಹಂಚಿದಿನಿ. ನಾನು ಅಧಿಕಾರದಲ್ಲಿ ಇಲ್ಲ ಅಂದ್ರು, ನನ್ನ ದುಡಿಮೆಯಿಂದ ಬಂದ ಹಣ ತಂದು ಜನರಿಗೆ ಸಹಾಯ ಮಾಡಿದಿನಿ, ಇಷ್ಟೇಲ್ಲಾ ನಾನು ಮಾಡಿದ್ದು ಬಿಜೆಪಿ ಟಿಕೆಟ್ ಕೊಡುತ್ತೆ ಅಂತ.  ಈ ಕ್ಷೇತ್ರದಲ್ಲಿ ನನ್ನ ಬಿಟ್ರೆ, ಇಲ್ಲಿ ಯಾರು ಗೆಲ್ಲಲು ಆಗಲ್ಲ. ಯಾಕಂದ್ರೆ ಇಲ್ಲಿ ಬಿಜೆಪಿ ಅಂದ್ರೆ ನಾನು,‌ ನಾನು ಅಂದ್ರೆ ಬಿಜೆಪಿ, ಆ ರೀತಿ ಈ ಕ್ಷೇತ್ರದಲ್ಲಿ ಕೆಲಸ ಮಾಡಿದಿನಿ. ನನಗೆ ಇವತ್ತು ಟಿಕೆಟ್ ಸಿಕ್ಕಿಲ್ಲ. ಪಕ್ಷದ ವರಿಷ್ಠರ ಮೇಲೆ ಅಸಮಾಧಾನ ಆಗಿದೆ. ನಾನು ಬಿಜೆಪಿಯಲ್ಲಿ ಇದ್ದುಕೊಂಡೆ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಿನಿ. ದಯವಿಟ್ಟು ವರಿಷ್ಠರು ಮಾಡಿದ ಮೋಸದ ರೀತಿ ನನಗೆ ಮೋಸ ಮಾಡ್ಬೇಡಿ. ಮತ ನೀಡಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ. ಬಿಜೆಪಿಯಲ್ಲಿ ಹಣ ಕೊಟ್ರೆ ಸೀಟ್ ಸಿಗುತ್ತೆ. ಅನಿಲ್‌ ಕುಮಾರ್ ದುಡ್ಡು ಕೊಟ್ಟು ಸಿಟ್ ತಂದಿರ್ಬಹುದು. ಅದು ನನಗೆ ಗೊತ್ತಿಲ್ಲ. ಟಿಕೆಟ್ ಕೊಡೋಕೆ ನನ್ನ ಬಳಿ ದುಡ್ಡು ಕೇಳಿದ್ರೆ, ಖಂಡಿತ ನಾನು ಹಣ ಕೊಡ್ತಿದ್ದೆ. ನಾನು 10 ರೂಪಾಯಿ ಖರ್ಚು ಮಾಡಿದ್ರು ಸಹ, ಬಿಜೆಪಿ ಪಕ್ಷಕ್ಕೆ ಅಂತ ಖರ್ಚು ಮಾಡಿದವನು, ನನ್ನಂತಹ ನಿಷ್ಠಾವಂತ ಕಾರ್ಯಕರ್ತನಿಗೆ ಬಿಜೆಪಿ ವರಿಷ್ಠರು ಟಿಕೆಟ್ ಕೈ ತಪ್ಪಿಸಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಬಿಜೆಪಿ ಟಿಕೆಟ್ ಅಕಾಂಕ್ಷಿಯಾಗಿದ್ದ ಕೆ.ಎಂ ಮುನಿಯಪ್ಪ ಹೇಳಿಕೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿ ಪ್ರೇಯಸಿಯ ಬರ್ತ್ ಡೇ ಆಚರಣೆ ಬಳಿಕ ಬರ್ಬರ ಕೊಲೆ..!

Sat Apr 15 , 2023
ಬೆಂಗಳೂರಿನಲ್ಲಿ ಪ್ರೇಯಸಿಯ ಬರ್ತ್ ಡೇ ಆಚರಣೆ ಬಳಿಕ ಬರ್ಬರ ಕೊಲೆ..!  ಖುಷಿಯಲ್ಲಿ ಕೇಕ್ ಕತ್ತರಿಸಿದ ಬಳಿಕ ಪ್ರೇಯಸಿಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ರಾಜಗೋಪಾಲ್ ನಗರದ ಲಗ್ಗೆರೆಯಲ್ಲಿ ಘಟನೆ  ನಡೆದಿದೆ.  ನವ್ಯ (24) ಕೊಲೆಯಾದ ಯುವತಿ,  ಪ್ರೇಮಿ ಪ್ರಶಾಂತ್ ಎಂಬಾತನಿಂದ ಕೃತ್ಯ ನಡೆದಿದೆ,  ಆಂತರಿಕ ಭದ್ರತಾ ವಿಭಾಗ (ISD)ದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡ್ತಿದ್ದ ನವ್ಯ,  ಕಳೆದ ಆರು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು.  ನವ್ಯ ಹಾಗೂ ಪ್ರಶಾಂತ್ ಇಬ್ಬರು ಕನಕಪುರ […]

Advertisement

Wordpress Social Share Plugin powered by Ultimatelysocial