ಬೆಳಗಾವಿ: ಘಟಪ್ರಭಾ ಎಡದಂಡೆ ಕಾಲುವೆ ಮತ್ತು ಬಲದಂಡೆ ಕಾಲುವೆಗಳಿಗೆ 2021-22ನೇ ಸಾಲಿನ ಹಿಡಕಲ್ ಜಲಾಶಾಯದಿಂದ ಹಿಂಗಾರು ಹಂಗಾಮಿನಲ್ಲಿ ರೈತರ ಕೃಷಿ ಜಮೀನುಗಳಿಗೆ ನೀರು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಪ್ರಸ್ತುತ ಜಲಾಶಯದಲ್ಲಿ 38.85 ಟಿ.ಎಂ.ಸಿ ನೀರು ನೀರಾವರಿಗೆ ಲಭ್ಯವಿದ್ದು, ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ 18-12-2021 ರಿಂದ 07-01-2022 ರವರೆಗೆ 20 ದಿನಗಳ ಕಾಲ ನೀರು ಹರಿಸಲಾಗುವುದು. ನಂತರ 22-01-2022 ರಿಂದ 11-02-2022 ರವರೆಗೆ ಮತ್ತು 26-02-2022 ರಿಂದ 18-03-2022 ರವರೆಗೆ ಒಟ್ಟು 60 ದಿನಗಳ ಕಾಲ ನೀರು ಹರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದರು.
ಇಂದು ಈ ಸಂಬಂಧ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ) ಸಭೆ ನಡೆಸಿದ ಬಳಿಕ ಸಭೆ ನಿರ್ಣಯ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿದಂತ ಅವರು, ಚಿಕ್ಕೋಡಿ ಶಾಖಾ ಕಾಲುವೆಯಿಂದ 18-12-2021 ರಿಂದ 07-01-2022 ರವರೆಗೆ 20 ದಿನಗಳ ಕಾಲ ನೀರು ಹರಿಸಲಾಗುವುದು. 27-01-2022 ರಿಂದ 16-02-2022 ರವರೆಗೆ ಮತ್ತು 08-03-2022 ರಿಂದ 28-03-2022 ರವರೆಗೆ ನೀರು ಹರಿಸಲು ನಿರ್ಣಯಿಸಿದೆ ಎಂದು ತಿಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada