5 ಲಕ್ಷ ಲಂಚ ಪಡೆಯುತ್ತಿರುವಾಗಲೇ ಗಂಡನ ಜತೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗ್ರಾಪಂ ಅಧ್ಯಕ್ಷೆ!

5 ಲಕ್ಷ ಲಂಚ ಪಡೆಯುತ್ತಿರುವಾಗಲೇ ಗಂಡನ ಜತೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗ್ರಾಪಂ ಅಧ್ಯಕ್ಷೆ!

ಬೆಂಗಳೂರು: ಜಮೀನಿಗೆ ಇ-ಖಾತೆ ಕೊಡಲು 5 ಲಕ್ಷ ರೂ. ಲಂಚಕ್ಕೆ ಬೇಡಿಕೆವೊಡ್ಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಇವರ ಗಂಡ ರೆಡ್‌ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಸಿಲುಕಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿ ಚೋಳನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಮತ್ತು ಈಕೆಯ ಪತಿ ಶಿವರಾಜ್ ಕುಮಾರ್ ಬಂಧಿತರು.

ಮಾಗಡಿ ರಸ್ತೆ ತಾವರೆಕೆರೆ ನಿವಾಸಿ, ಗಂಗೇನಹಳ್ಳಿ ಗ್ರಾಮದಲ್ಲಿ 2 ಎಕರೆ 2 ಗುಂಟೆ ಜಮೀನನ್ನು ವಾಣಿಜ್ಯ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಿಸಿದ್ದರು. ಈ ಜಮೀನಿಗೆ ಇ-ಖಾತಾ ಪಡೆಯಲು ಚೋಳನಾಯಕನಹಳ್ಳಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಪಂಚಾಯಿತಿಯನ್ನು ಅನುಮೋದನೆ ನೀಡಲು ಅಧ್ಯಕ್ಷೆ ಶ್ವೇತಾ ಮತ್ತು ಶಿವರಾಜ್ ಕುಮಾರ್, 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಒಡ್ಡಿದ್ದರು.

ಈ ಕುರಿತು ಅರ್ಜಿದಾರ ನೀಡಿದ ದೂರಿನ ಮೇರೆಗೆ ರಾಮನಗರ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಡಿ.16ರಂದು ಅರ್ಜಿದಾರನಿಂದ ಮುಂಗಡವಾಗಿ 2 ಲಕ್ಷ ರೂ. ಲಂಚ ಸ್ವೀಕರಿಸುವಾಗ ಟ್ರ್ಯಾಪ್ ಮಾಡಿದ್ದಾರೆ. ಅಧ್ಯಕ್ಷೆ ಮತ್ತು ಆಕೆ ಪತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಜೆಸಿ ರಸ್ತೆಯಲ್ಲೊಂದು ಗುಂಡಿ ರಹಸ್ಯ..!

Fri Dec 17 , 2021
ಬೆಂಗಳೂರು: ಅತಿ ಹೆಚ್ಚು ಸಂಚಾರದಟ್ಟಣೆವುಳ್ಳ ಜೆ.ಸಿ.ರಸ್ತೆಯ ಮಧ್ಯಭಾಗದಲ್ಲಿ ಏಕಾಏಕಿ ಗುರುವಾರ ಸುಮಾರು 7-8 ಅಡಿಯಷ್ಟು ಬೃಹದಾಕಾರದ ಗುಂಡಿ ಬಿದ್ದಿದ್ದು, ವಾಹನ ಸವಾರರು ಆತಂಕದಲ್ಲಿ ಸಂಚರಿಸಿದರು. ಬೆಳಗ್ಗೆಯೇ ಈ ಬೃಹದಾಕಾರದ ಗುಂಡಿ ರಸ್ತೆ ಮಧ್ಯೆ ಕಾಣಿಸಿಕೊಂಡಿದ್ದರಿಂದ ಕೆಲಹೊತ್ತು ಉದ್ದೇಶಿತ ಮಾರ್ಗದಲ್ಲಿ ಸವಾರರು ಕೈಯಲ್ಲಿ ಜೀವ ಹಿಡಿದು ಕೊಂಡು ಸಂಚರಿಸಿದರು. ವೇಗವಾಗಿ ಬರುವ ವಾಹನಗಳಿಗೆ ಗುಂಡಿ ಹತ್ತಿರಕ್ಕೆ ಬರುತ್ತಿದ್ದಂತೆ ಬ್ರೇಕ್‌ ಬೀಳುತ್ತಿತ್ತು. ಇದರಿಂದ ಹಿಂದೆ ಬರುವ ಇತರೆ ವಾಹನ ಸವಾರರು ಗಲಿಬಿಲಿಗೊಳ್ಳುತ್ತಿರುವುದು ಕಂಡುಬಂತು. […]

Advertisement

Wordpress Social Share Plugin powered by Ultimatelysocial