ಬೆಳಗಿನ ಜಾವ 6.30ರವರೆಗೂ ಸಾಗಿದ ಅದ್ಧೂರಿ ಮೆರವಣಿಗೆ
ಸಂಪೂರ್ಣ ಕೇಸರಿಮಯವಾಗಿದ್ದ ಕುಂದಾನಗರಿ ಬೆಳಗಾವಿ ಮೆರವಣಿಗೆಯುದ್ದಕ್ಕೂ ಗಮನ ಸೆಳೆದ ಶಿವಾಜಿ ಮಹಾರಾಜರ ಸಾಹಸ ಕಥೆ ಹೇಳುವ ದೃಶ್ಯಾವಳಿಗಳು
70ಕ್ಕೂ ಅಧಿಕ ವಿವಿಧ ರೂಪಕಗಳು ಮೆರವಣಿಗೆಯಲ್ಲಿ ಭಾಗಿ
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎರಡು ಸಾವಿರಕ್ಕೂ ಹೆಚ್ಚು ಕಲಾವಿದರು ಮೆರವಣಿಗೆಯಲ್ಲಿ ಭಾಗಿಯಾಗಿ ರೂಪಕಗಳ ಕಣ್ಣುತುಂಬಿಕೊಂಡ ಸಾವಿರಾರು ಜನರು
ನಿನ್ನೆ ಸಂಜೆ 6 ಗಂಟೆಗೆ ಮೆರವಣಿಗೆಗೆ ಚಾಲನೆ ನೀಡಿದ್ದ ಶಾಸಕ ಅನಿಲ್ ಬೆನಕೆ, ಅಭಯ್ ಪಾಟೀಲ್ ನರಗುಂದಕರ ಭಾವೆ ಚೌಕ್ನಿಂದ ಆರಂಭಗೊಂಡಿದ್ದ ಮೆರವಣಿಗೆ
ಮಾರುತಿ ಬೀದಿ, ಗಣಪತಿ ಬೀದಿ, ಸಮಾದೇವಿ ಬೀದಿ, ಕಾಲೇಜು ರಸ್ತೆ, ಕಿರ್ಲೋಸ್ಕರ್ ರಸ್ತೆ ಮೂಲಕ ಕಪಿಲೇಶ್ವರ ದೇಗುಲವರೆಗೂ ಮೆರವಣಿಗೆ
ಇದೇ ಮೊದಲ ಬಾರಿ ಡ್ರೋಣ್ ಮೂಲಕ ಕಣ್ಗಾವಲು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ ಭದ್ರತೆ
ಇಬ್ಬರು ಡಿಸಿಪಿ ಸೇರಿ 2 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜಿಸಲಾಗಿತ್ತು ಕೋವಿಡ್ ಹಿನ್ನೆಲೆ ಎರಡು ವರ್ಷಗಳ ಕಾಲ ಶಿವಜಯಂತಿ ಮೆರವಣಿಗೆ ನಡೆದಿರಲಿಲ್ಲ
ಡಿಜೆ ಸೌಂಡ್ಗೆ ಕುಣಿದು ಕುಪ್ಪಳಿಸಿದ ಯುವ ಸಮೂಹ ಖಾಕಿ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ಶಿವಜಯಂತಿ ಮೆರವಣಿಗೆ ಅಂತ್ಯ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada