ಯುಕ್ರೇನ್-ರಷ್ಯಾ ಯುದ್ದದ ನಡುವೆಯೇ ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾಷಣ ಮಾಡಿದ್ದಾರೆ. ವರ್ಚುವಲ್ ಆಗಿ ಮಾತನಾಡಿದ ಅವರು, ವಿಶ್ವಸಂಸ್ಥೆ ವಿರುದ್ದ ಬೆಂಕಿ ಉಗುಳಿದ್ದಾರೆ. ಈ ಕೂಡಲೇ ರಷ್ಯಾ ದಾಳಿಯನ್ನ ನಿಲ್ಲಸಿ.
ಇಲ್ಲದಿದ್ರೆ ವಿಶ್ವಸಂಸ್ಥೆಯ ಬಾಗಿಲನ್ನ ಬಂದ್ ಮಾಡಿ ಅಂತ ಹರಿಹಾಯ್ದಿದ್ದಾರೆ. ಯುಕ್ರೇನ್ನಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗ್ತಿದೆ, ಟ್ಯಾಂಕ್ಗಳನ್ನ ಹತ್ತಿಸಿ ಜನರನ್ನ ಹತ್ಯೆ ಮಾಡಲಾಗ್ತಿದೆ. ಮಕ್ಕಳನ್ನ ನಿರ್ದಾಕ್ಷೀಣ್ಯವಾಗಿ ಕೊಲ್ಲಲಾಗ್ತಿದೆ. ರಷ್ಯಾ ಸೈನಿಕರು ಇಸ್ಲಾಮಿಕ್ ಉಗ್ರರ ರೀತಿ ನಡೆದುಕೊಳ್ತಿದ್ದಾರೆ. ವಿಶ್ವಸಂಸ್ಥೆಯ ನಿಯಮಗಳನ್ನ ರಷ್ಯಾ ಗಾಳಿಗೆ ತೂರಿದೆ. ಹೀಗಾಗಿ ರಷ್ಯಾ ವಿರುದ್ಧ ಕ್ರಮ ಕೈಗೊಳ್ಳಿ. ಇಲ್ಲ ವಿಶ್ವಸಂಸ್ಥೆಯನ್ನ ವಿಸರ್ಜನೆ ಮಾಡಿ, ಬಾಗಿಲು ಮುಚ್ಕೊಂಡು ಮನೆಗೆ ಹೋಗಿ. ಇಂಥಾ ಸಂಕಷ್ಟದ ಸಮಯದಲ್ಲೂ ರಕ್ಷಣೆಗೆ ಬಾರದ ನೀವು ಯಾರಿಗೂ ಬೇಡ ಅಂತೆಲ್ಲಾ ವಾಗ್ದಾಳಿ ನಡೆಸಿದ್ದಾರೆ. ಯುಕ್ರೇನ್ ಬುಚಾ ನಗರದಲ್ಲಿ ನಡೆದಿದೆ ಎನ್ನಲಾಗುವ ಸಾಮೂಹಿಕ ನರಮೇಧಕ್ಕೆ ಸಂಬಂಧಪಟ್ಟಂತೆ ನಡೆದ ಭದ್ರತಾ ಮಂಡಳಿ ಸಭೆಯಲ್ಲಿ ಈ ರೀತಿ ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada