ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸದಸ್ಯ ಶೀಳನೆರೆ ಭರತ್ ಕುಮಾರ್ ನೇತೃತ್ವದಲ್ಲಿ ಸಚಿವ ಅಶ್ವಥ್ ನಾರಾಯಣ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕೆ ಆರ್ ಪೇಟೆ ಪಟ್ಟಣದಲ್ಲಿರುವ ದುಂಡುಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಅವರು ನಮ್ಮ ಪಕ್ಷದ ಶಕ್ತಿಯಾಗಿ ರಾಜ್ಯಾದ್ಯಂತ ಪಕ್ಷ ಸಂಘಟಿಸುತ್ತ ಘನ ಸರ್ಕಾರದ ಸಚಿವರಾಗಿರುವ ನಮ್ಮ ನಾಯಕ ಅಶ್ವಥ್ ನಾರಾಯಣ ಅವರ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ಮತ್ತು ಬಸವೇಶ್ವರ ದೇವಾಲಯಕ್ಕೆ ವಿಶೇಷ ಪೂಜೆ ಸಲ್ಲಿಸುವ ಮುಖಾಂತರ ಸರಳವಾಗಿ ಆಚರಿಸಿದ್ದೇವೆ,ದಿನದಿಂದ ದಿನಕ್ಕೆ ಯುವಕರ ಕಣ್ಮಣಿಯಾಗಿ ರಾಜ್ಯಾದ್ಯಂತ ಪಕ್ಷವನ್ನು ಸಂಘಟಿಸುತ್ತಾ ಬಲಿಷ್ಠ ರಾಜಕಾರಣಿಯಾಗಿ ನಾಡಪ್ರಭು ಕೆಂಪೇಗೌಡ ವರಪುತ್ರನಂತೆ ಅವರ ಆದರ್ಶಗಳನ್ನ ಮೈಗೂಡಿಸಿಕೊಂಡು ಬೃಹತ್ ಪುತಳಿ ನಿರ್ಮಾಣಕ್ಕಾಗಿ ಶ್ರಮವಹಿಸಿ,ಪಕ್ಷದ ನಿಷ್ಠಾವಂತ ಕಾರ್ಯಕರ್ತರಂತೆ ದುಡಿಯುತ್ತ ರಾಜ್ಯ ರೈತ ಮತ್ತು ಬಡವರ ಕಷ್ಟಕ್ಕೆ ಸ್ಪಂದನೆ ಕ್ರಮಗಳನ್ನು ರೂಪಿಸುತ್ತಾ ರಾಜ್ಯದಲ್ಲಿ ಭವಿಷ್ಯ ರಾಜಕಾರಣಿಯಾಗಿರುವ ನಮ್ಮ ನಾಯಕರಿಗೆ ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಮೀನಾಕ್ಷಿ ಪುಟ್ಟರಾಜು,ಬಿಜೆಪಿ ಹಿರಿಯ ಮುಖಂಡ ಪುಟ್ಟರಾಜು,ರೈತ ಮೋರ್ಚ ಅಧ್ಯಕ್ಷ ದಬ್ಬೇಘಟ್ಟ ಭರತ್,ಬಿಜೆಪಿ ಮಹಿಳಾ ಘಟಕ ತಾಲೂಕು ಉಪಾಧ್ಯಕ್ಷೆ ಚಂದ್ರಕಲಾ,ಸಂತೆಬಾಹಳ್ಳಿ ಹೋಬಳಿ ಓ ಬಿ ಸಿ ಅಧ್ಯಕ್ಷ ಸೋಮಶೇಖರ್, ಶಿವಮೂರ್ತಿ,ಹರೀಶ್,ಸಚಿವ ಅಶ್ವಥ್ ನಾರಾಯಣ ಅಭಿಮಾನಿಗ ಳು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಉಪಸ್ಥಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada