ನಾನು ಲೋಕಸಭಾ ಸಧಸ್ಯನಾಗಿದ್ದಾಗ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿದ್ದೇನೆ
ಸಮುದಾಯ ಭವನ ಬಸ್ ನಿಲ್ದಾಣಗಳ ಮೇಲೆ ಈಗಲೂ ನನ್ನ ಹೆಸರಿದೆ ಎಂದು ಹೇಳಿಕೆ ನೀಡಿದ್ದ ಯತ್ನಾಳ.
ನಾನು ಹೆಸರಿಗಾಗಿ ಕೆಲಸ ಮಾಡಲ್ಲಾ, ಜನರಿಗಾಗಿ ಕೆಲಸ ಮಾಡುತ್ತೇನೆ
ನನಗೆ ಬೋರ್ಡ್ ಹಾಕಿಸಿಕೊಳ್ಳುವ ಆಸೆಯಿಲ್ಲಾ ಎಂದಿದ್ದ ಸಂಸದ ಜಿಗಜಿಣಗಿ.
ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ.ಯತ್ನಾಳ ಹೆಸರು ತಗೋದಿದ್ದರೂ ನಿಮಗೂ ಸಮಾಧಾನ ಆಗಲ್ಲಾ.
ನನ್ನ ಬಗ್ಗೆ ನೇರವಾಗಿ ಯಾರೂ ಮಾತನಾಡಲ್ಲಾ.
ನೇರವಾಗಿ ಮಾತನಾಡಿದರಿಗೆ ಅಲ್ಲೇ ಉತ್ತರ ಕೊಡುತ್ತಿದ್ದೆ, ಜಾಡಿಸಿ ಬಿಡುತ್ತಿದ್ದೇ.
ನನಗೆ ಆ ತಾಕತ್ ಇದೆ ಎಂದು ಹೇಳಿಕೆ.ಬೋರ್ಡ್ ಹಾಕೋದಕ್ಕೂ ಒಂದು ನಿಯಮವಿದೆ.
ಎಂಪಿ ನಿಧಿಯಿಂದ ಆದ ಕೆಲಸ ಕಾಮಗಾರಿಯ ಗುತ್ತಿಗೆ ಬಿಲ್ ಬರಲು ಕಾಮಗಾರಿ ಆದ ಪೋಟೋವನ್ನು ಹಾಕಬೇಕು.
ಕಾಮಗಾರಿ ಆದ ಬೋರ್ಡ್ ಇರೋ ಪೋಟೋ ಹಾಕಬೇಕು.
ನಾನು ಕೆಲಸ ಮಾಡುತ್ತೇನೆ ಬೋರ್ಡ್ ಹಾಕುತ್ತೇನೆ. ಯಾರು ಏನು ಕಿಸಿಯುತ್ತಾರೆ ಎಂದು ಪ್ರಶ್ನೆ…?
ಈ ಜಿಲ್ಲೆಯೊಳಗೆ ಸಂಸದನಾಗಿ ಕೆಲಸ ಮಾಡಿದ್ದಕ್ಕೆ ಬೋರ್ಡ್ ಬರೆದಿದ್ದಾರೆ.
ಸುಮ್ಮಸುಮ್ಮನೇ ಬೋರ್ಡ್ ಹಾಕುತ್ತಾರಾ..?
ಇದಕ್ಕೆ ಯಾಕೆ ಇವರು ಹೊಟ್ಟೆಕಿಚ್ಚು ಪಡಬೇಕೆಂದು ಪರೋಕ್ಷಾಗಿ ಸಂಸದ ಜಿಗಜಿಣಗಿಗೆ ಟಾಂಗ್.ಇವರು ಮಾಡಿದ್ದರೆ ಬೋರ್ಡ್ ಬರೆಯುತ್ತಾರೆ.
ಬೋರ್ಡ್ ಬೇಡವೆಂದರೂ ಬರೆಯುತ್ತಾರೆ, ಇಲ್ಲವಾದರೆ ಆಧಿಕಾರಿಗಳು ಸಸ್ಪೆಂಡ್ ಆಗುತ್ತಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: