‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಆರತಿ ಗರ್ಭಿಣಿ ಆಗಿದ್ದಾಳೆ. ಹೀಗಾಗಿ ಇವಳ ಬಗ್ಗೆ ಕಾಳಜಿ ವಹಿಸಲು ವಿಕ್ಕಿ ಹೆಚ್ಚಾಗಿ ಆಫಿಸಿಗೆ ಹೋಗುವುದೇ ಇಲ್ಲ.ಆರತಿಗೆ ವಿಕ್ಕಿ ತಿಂಡಿ ತಿನ್ನಿಸಲು ಮುಂದಾಗುತ್ತಾನೆ. ಆದರೆ, ಆರತಿ ತಿನ್ನುವುದಿಲ್ಲ. ಹಠ ಮಾಡುತ್ತಾಳೆ.ವಿಕ್ಕಿ ಎಷ್ಟು ಹೇಳಿದರೂ ಆರತಿ ತಿಂಡಿ ತಿನ್ನುವುದಿಲ್ಲ.ಇದೇ ವೇಳೆಗೆ ಅಮೂಲ್ಯ ಬರುತ್ತಾಳೆ. ಆರತಿಗೆ ಬಲವಂತ ಮಾಡಿ ಊಟ ಮಾಡಿಸುತ್ತಾಳೆ. ಇದನ್ನು ನೋಡಿದ ವಿಕ್ಕಿ ಖುಷಿ ಪಡುತ್ತಾನೆ. ಆರತಿ ಕೂಡ ಅಮೂಲ್ಯ ಅಕ್ಕನ ಹಾಗೆ ಹೆಸರಿಗಷ್ಟೇ ನಾನು ಅಕ್ಕ ಎಂದು ಹೇಳುತ್ತಾಳೆ.
ಧ್ರುವನಿಗೆ ಸ್ಲೋ ಪಾಯ್ಸನ್ಇತ್ತ ಸುಹಾಸಿನಿ, ಅಗ್ನಿ, ಚಂದ್ರ ಮೂವರು ಸೇರಿ ಚೇತರಿಸಿಕೊಳ್ಳುತ್ತಿರುವ ಧ್ರುವನನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದಾರೆ. ಧ್ರುವನಿಗೆ ಮಾತು ಬಂದರೆ, ಈ ಮೂವರ ಬಂಡವಾಳ ಬಯಲಾಗುತ್ತೆ ಎಂಬ ಭಯ ಕಾಡುತ್ತಿದೆ. ಹಾಗಾಗಿ ಮೂವರು ಧ್ರುವನನ್ನು ಕೊಲ್ಲಲು ಮುಂದಾಗಿದ್ದಾರೆ. ಸುಹಾಸಿನಿಗೆ ಚಂದ್ರಾ ಸ್ಲೋ ಪಾಯಿಸನ್ನ ಮಾತ್ರೆಗಳನ್ನು ಕೊಟ್ಟಿದ್ದಾಳೆ. ಇದನ್ನು ಧ್ರುವನಿಗೆ ಕೊಡಲು ಹೇಳಿದ್ದಾಳೆ. ಈ ಪ್ಲ್ಯಾನ್ ತಿಳಿದ ಅಜ್ಜಿ ಈಗ ಮೊಮ್ಮಗನನ್ನು ರಕ್ಷಿಸಲು ಮುಂದಾಗಿದ್ದಾಳೆ. ಸುಹಾಸಿನಿ ತಂದ ಮಾತ್ರೆಗಳ ಡಬ್ಬಿಗೆ ವಿಟಮಿನ್ ಮಾತ್ರೆಗಳನ್ನು ಹಾಕಿ ಸುಹಾಸಿನಿ ಪ್ಲ್ಯಾನ್ ಅನ್ನು ಉಲ್ಟಾ ಮಾಡಿದ್ದಾಳೆ. ಆದರೆ, ಅಜ್ಜಿ ಸುಹಾಸಿನಿ ರೂಮಿಗೆ ಬಂದಿದ್ದನ್ನು ನೋಡಿದ ವೈಜಯಂತಿ ಗಾಬರಿಯಾಗುತ್ತಾಳೆ. ಬೇಗ ಬೇಗ ಮಾತ್ರೆಗಳನ್ನು ಬದಲಾಯಿಸಿ, ಹೊರಡುತ್ತಾರೆ. ಆದರೆ, ಸುಹಾಸಿನಿ ಇವರನ್ನು ನೋಡಿ ಇಲ್ಲಿಗ್ಯಾಕೆ ಬಂದಿದ್ದು ಎಂದು ಕೇಳುತ್ತಾರೆ. ಅಜ್ಜಿ ನೆಪ ಹೇಳಿ ಹೋಗುತ್ತಾರೆ.
ಧ್ರುವ ಬೇಗ ಚೇತರಿಸಿಕೊಳ್ಳುತ್ತಾನಾ..?ಅಜ್ಜಿ ಮಾತ್ರೆಗಳನ್ನು ಬದಲಾಯಿಸಿ, ಸುಹಾಸಿನಿ ಪ್ಲ್ಯಾನ್ಗೆ ಉಲ್ಟಾ ಹೊಡೆದಿದ್ದಾಳೆ. ಆದರೆ, ಈ ವಿಚಾರ ಇನ್ನೂ ಯಾರಿಗೂ ಗೊತ್ತಾಗಿಲ್ಲ. ಅಜ್ಜಿಯ ಈ ಪ್ಲ್ಯಾನ್ನಿಂದ ಚಂದ್ರಾಳ ಐಡಿಯಾ ಶುರುನಲ್ಲೇ ಠುಸ್ ಆಗಿದೆ. ಧ್ರುವ ಅಜ್ಜಿ ಇಟ್ಟ ಮಾತ್ರೆಗಳಿಂದ ಬೇಗ ಚೇತರಿಸಿಕೊಳ್ಳುತ್ತಾನಾ..? ಸುಹಾಸಿನಿ, ಚಂದ್ರಾ ಬಂಡವಾಳವನ್ನು ಬಯಲಿಗೆಳೆಯುತ್ತಾನಾ..? ವೈಜಯಂತಿಯೇ ಅವರ ಅಮ್ಮ ಎಂಬ ಸತ್ಯವನ್ನು ತಿಳಿಸಿಕೊಡುತ್ತಾನಾ ಎಂಬ ಕುತೂಹಲ ಧಾರಾವಾಹಿಯಲ್ಲಿ ಮೂಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada