ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರ ಧರಣಿ ಸತತ ಮೂರನೇ ದಿನವೂ ಮುಂದುವರಿದಿದೆ;

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರ ಧರಣಿ ಸತತ ಮೂರನೇ ದಿನವೂ ಮುಂದುವರಿದಿದೆ. ಶುಕ್ರವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದ್ದರಿಂದ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಹತ್ತು ನಿಮಿಷ ಕಾಲ ಮುಂದೂಡಿದರು.

ಮಾಜಿ ಶಾಸಕ ಮಳ್ಳೂರ್ ಆನಂದ ರಾವ್ ನಿಧನಕ್ಕೆ ಸಂತಾಪ‌ ಸೂಚಿಸಲಾಯಿತು. ಬಳಿಕ ಪ್ರಶ್ನೋತ್ತರ ಕಲಾಪ ಆರಂಭವಾಯಿತು. ಆದರೆ, ಕಾಂಗ್ರೆಸ್ ಸದಸ್ಯರು ಜೋರಾಗಿ ಗದ್ದಲ ನಡೆಸಿದರು.

‘ತಾವೂ ಸೇರಿದಂತೆ ವಿಪಕ್ಷ ಸದಸ್ಯರ ಜೀವಕ್ಕೆ ಬೆದರಿಕೆ ಇದೆ. ರಕ್ಷಣೆ ಕೊಡಬೇಕು’ ಎಂದು ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದರು.

ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ವಾಕ್ಸಮರ ಜೋರಾಗಲಾರಂಭಿಸಿತು. ಹತ್ತು ನಿಮಷ ಕಲಾಪ ಮುಂದೂಡಿದ ಸಭಾಪತಿ, ತಮ್ಮ ಕೊಠಡಿಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಪ್ರಮುಖ ನಾಯಕರ ಜತೆ ಚರ್ಚೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಶಶಿಕಪೂರ್ ಎಂದರೆ ಸುಂದರ ಸೌಮ್ಯ ಸರಳ ಸಜ್ಜನಿಕೆಯ ಮುಖ ಕಣ್ಮುಂದೆ ಬರುತ್ತದೆ.

Fri Feb 18 , 2022
ಶಶಿಕಪೂರ್ ಎಂದರೆ ಸುಂದರ ಸೌಮ್ಯ ಸರಳ ಸಜ್ಜನಿಕೆಯ ಮುಖ ಕಣ್ಮುಂದೆ ಬರುತ್ತದೆ. ಶಶಿಕಪೂರ್ ಜನಿಸಿದ್ದು 1938ರ ಮಾರ್ಚ್ 18 ರಂದು.ಅಪ್ಪ ಪೃಥ್ವೀರಾಜ್ ಕಪೂರ್ ಹಿರಿಮೆ, ಅಣ್ಣ ರಾಜ್ ಕಪೂರ್ ಪ್ರದರ್ಶಿಕೆ, ಮತ್ತೊಬ್ಬ ಅಣ್ಣ ಶಮ್ಮಿ ಕಪೂರರ ಎದ್ದು ಬಿದ್ದು ಕುಣಿಯುವಿಕೆ ಇವುಗಳ ನಡುವಿನ ಸಮತ್ವದ ಗರಿಮೆ ಶಶಿಕಪೂರರದ್ದು. ‘ಸಿದ್ಧಾರ್ಥ’ ಅಂತಹ ಭಾರತದ ಸೆನ್ಸಾರಿನಿಂದ ಬಹಿಷ್ಕೃತಗೊಂಡ ಮುಕ್ತಕಾಮದ ಹಂದರವುಳ್ಳ ಚಿತ್ರ ಮತ್ತು ಬಿಡುಗಡೆಯಾಗಿ ಅದೇ ಭಾವಗಳನ್ನು ಒಂದಿಷ್ಟು ಕದ್ದುಮುಚ್ಚಿ ತೋರಿ ವ್ಯಾಪಾರ […]

Advertisement

Wordpress Social Share Plugin powered by Ultimatelysocial