ವಿಜಯಪುರ ಜಿಲ್ಲೆಗೆ ನೀರು ನಿರ್ವಹಣೆ ಸವಾಲು.

 ಜಿಲ್ಲೆಯಲ್ಲಿ ಬೃಹತ್‌ ಜಲಾಶಯವಿದ್ದರೂ ಬೇಸಿಗೆಯಲ್ಲಿ ಕೆಲವೆಡೆ ಕುಡಿವ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ಕುಡಿವ ನೀರಿನ ತೊಂದರೆಯಾಗದಂತೆ ಜಲಾಶಯದ ನೀರನ್ನು ಎಚ್ಚರಿಕೆಯಲ್ಲಿ ಅಳೆದು ತೂಗಿ ಬಳಕೆ ಮಾಡಬೇಕಿದೆ.519.60ಮೀ ಗರಿಷ್ಠ ಮಟ್ಟದಲ್ಲಿ 123.081 ಟಿಎಂಸಿ ನೀರು ಸಂಗ್ರಹಣಾ ಸಾಮಾರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ ಫೆ.27ರಂದು 513.70 ಮೀಟರ್‌ ಎತ್ತರದಲ್ಲಿ 52.424 ಟಿಎಂಸಿ ನೀರು ಸಂಗ್ರಹವಿದೆ. ಇದರಲ್ಲಿ 17.62 ಟಿಎಂಸಿ ಡೆಡ್‌ ಸ್ಟೋರೇಜ್‌ಗೆ ಮೀಸಲಿದ್ದು, ಉಳಿದ 34.804 ಟಿಎಂಸಿ ನೀರಿನಲ್ಲಿ ಮಾ.30ರವರೆಗೆ ಕಾಲುವಗಳಿಗೆ ನೀರು ಹರಿಸಿ ಉಳಿದ ನೀರಿನಲ್ಲಿ ಬೇಸಿಗೆಯಲ್ಲಿಕುಡಿವ ನೀರು, ಕೆರೆ ತುಂಬಿಸುವುದು ಸೇರಿದಂತೆ ಬೇಸಿಗೆಯಲ್ಲಿ ಬಳಕೆ ಮಾಡಬೇಕು.2022ರ ಫೆ.27ರಂದು ಜಲಾಶಯದಲ್ಲಿ 516.08 ಮೀಟರ್‌ ಎತ್ತರದಲ್ಲಿ 73.838 ಟಿಎಂಸಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಂದಾಜು 21.414 ಟಿಎಂಸಿ ನೀರು ಕಡಿಮೆ ಇದೆ. ಹೀಗಾಗಿ ಜಲಾಶಯದ ನೀರನ್ನು ವ್ಯರ್ಥವಾಗಿ ಬಳಸದೇ ಸಮರ್ಪಕವಾಗಿ ಬಳಕೆ ಮಾಡುವ ಸವಾಲು ಅಧಿಕಾರಿಗಳಿಗೆ ಇದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ನಡ ಮಾಧ್ಯಮದ ಶೇ.60 ರಷ್ಟು ಮಕ್ಕಳು ಓದುವಲ್ಲಿ ಸರಾಸರಿಗಿಂತ ಕಡಿಮೆ:

Tue Feb 28 , 2023
ಬೆಂಗಳೂರು, ಫೆಬ್ರವರಿ. 28: ಸುಮಾರು 60% ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಓದುವ ವಿಷಯದಲ್ಲಿ ಪ್ರಾವೀಣ್ಯತೆಯ ಸರಾಸರಿ ಮಟ್ಟಕ್ಕಿಂತ ಕೆಳಗಿದ್ದಾರೆ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಇತ್ತೀಚಿನ ವರದಿ ಹೇಳಿದೆ. ಮಾರ್ಚ್ 2022 ರಲ್ಲಿ ಎನ್‌ಸಿಇಆರ್‌ಟಿ ಕೈಗೊಂಡ ಅಡಿಪಾಯ ಕಲಿಕೆಯ ಅಧ್ಯಯನದ ಭಾಗವಾಗಿ, ತಿಳುವಳಿಕೆ ಮತ್ತು ಸಂಖ್ಯಾಶಾಸ್ತ್ರದ ಭಾರತ್ (ನಿಪುಣ್ ಭಾರತ್) ನಲ್ಲಿ ಓದುವಲ್ಲಿ ಪ್ರಾವೀಣ್ಯತೆಗಾಗಿ ರಾಷ್ಟ್ರೀಯ ಕಾರ್ಯಕ್ರಮಕ್ಕಾಗಿ ಈ ರದಿಯನ್ನು ಸಿದ್ಧಪಡಿಸಲಾಗಿದೆ. ಸಮೀಕ್ಷೆಯ ಫಲಿತಾಂಶಗಳನ್ನು […]

Advertisement

Wordpress Social Share Plugin powered by Ultimatelysocial