ಚೆನ್ನೈ: ನಟ ಪುನೀತ್ ರಾಜ್ಕುಮಾರ್ ಅವರ ಅಕಾಲಿನ ಸಾವಿನ ನಂತರ ಅವರು ನಡೆಸುತ್ತಿದ್ದ ಶಾಲೆಗಳ ಸುಮಾರು 1800 ಮಕ್ಕಳ ಜವಾಬ್ದಾರಿಯನ್ನು ತಾನು ಹೊರುವುದಾಗಿ ಹೇಳಿ ಕನ್ನಡದ ಭಾರಿ ಅಭಿಮಾನಿಗಳನ್ನು ಗಳಿಸಿರುವ ತಮಿಳು ನಟ ವಿಶಾಲ್ಗೆ ಮತ್ತೊಮ್ಮೆ ಭಾರಿ ಆಘಾತ ಉಂಟಾಗಿದೆ.
ಸಾಹಸ ದೃಶ್ಯಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ನಟ ವಿಶಾಲ್ಗೆ ಇದೀಗ ಮತ್ತೆ ಅದೇ ದೃಶ್ಯ ಕೈಕೊಟ್ಟಿದೆ. ಕಳೆದ ಫೆಬ್ರುವರಿಯಲ್ಲಿ ಲಾಠಿ ಚಿತ್ರೀಕರಣದ ವೇಳೆ ಹೇರ್ಲೈನ್ ಫ್ರ್ಯಾಕ್ಚರ್ ಆಗಿತ್ತು. ಲಾಠಿ ಚಿತ್ರದಲ್ಲಿ ಇವರು ಪೊಲೀಸ್ ಅಧಿಕಾರಿಯಾಗಿ ಪಾತ್ರ ನಿರ್ವಹಿಸಿದ್ದರು. ಮಗುವೊಂದನ್ನು ಎತ್ತಿಕೊಂಡು ಆಳವಾದ ಜಾಗಕ್ಕೆ ಧುಮುಕುವ ಸಂದರ್ಭದಲ್ಲಿ ಅನಾಹುತ ಸಂಭವಿಸಿತ್ತು. ಇದರ ಬೆನ್ನಲ್ಲೇ ಇದೀಗ `ಲತ್ತಿಯ’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ಗಾಯಗೊಂಡಿದ್ದಾರೆ. ಫೈಟ್ ಸೀನ್ ಚಿತ್ರೀಕರಿಸುವಾಗ ಗಾಯಗಳಾಗಿದ್ದು, ಸದ್ಯ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ.
ಲತ್ತಿಯ ಚಿತ್ರದಲ್ಲಿ ಕೂಡ ವಿಶಾಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದೆ. ಆಯಕ್ಷನ್ ಸೀನ್ಸ್ ಶೂಟಿಂಗ್ ಮಾಡುವಾಗ ಗಾಯಗೊಂಡಿದ್ದಾರೆ. ಈ ಸಿನಿಮಾಗಾಗಿ ವಿಶಾಲ್ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದರು. ಈ ವಿಡಿಯೋ ಸಖತ್ ವೈರಲ್ ಕೂಡ ಆಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada