ಹುಟ್ಟುಹಬ್ಬದಂದು ಫ್ಯಾನ್ಸ್ ಕೊಟ್ಟ ದಿನಸಿ ಏನಾಯ್ತು?

ರ್ಶನ್ ಹುಟ್ಟುಹಬ್ಬ ಆರಂಭ ಆಗುವುದಕ್ಕಿಂತಲೂ ಒಂದು ವಾರ ಮುನ್ನವೇ ಅಭಿಮಾನಿಗಳಲ್ಲಿ ಸಂಭ್ರಮ ಸಡಗರ ಮನೆ ಮಾಡಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದರ್ಶನ್ ಹೇಳಿದಂತೆ ಬರ್ತ್‌ಡೇಗೆ ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗಿದ್ದರು.

ಅಭಿಮಾನಿಗಳಿಗೆ ಕೇಕ್, ಹಾರಗಳನ್ನು ತರಬೇಡಿ.

ಅದರ ಬದಲು ಅಸಹಾಯಕರಿಗೆ ನೆರವಾಗಿ ಎಂದು ಕರೆ ನೀಡಿದ್ದರು. ಅದರಂತೆ ಪ್ರತಿ ವರ್ಷ ದರ್ಶನ್ ಹುಟ್ಟುಹಬ್ಬದಂದು ಅಭಿಮಾನಿಗಳು ಸ್ವ:ಇಚ್ಚೆಯಿಂದ ತಮ್ಮ ಕೈಲಾದಷ್ಟು ದವಸ ಧಾನ್ಯಗಳನ್ನು ಮನೆಗೆ ತಲುಪಿಸುತ್ತಾರೆ.

ಈ ವರ್ಷ ಕೂಡ ಸಹಸ್ರಾರು ಸಂಖ್ಯೆಯಲ್ಲಿ ದಿನಸಿಯನ್ನಯ ಸಂಗ್ರಹಣೆ ಮಾಡಲಾಗಿತ್ತು. ಅದೆಲ್ಲವನ್ನೂ ಹಂಚುವ ಕೆಲಸ ಈಗ ನಡೆಯುತ್ತಿದೆ. ಹಾಗಿದ್ದರೆ, ಈ ಬಾರಿ ಅಭಿಮಾನಿಗಳಿಂದ ಸಂಗ್ರಹವಾದ ದಿನಸಿ ವಸ್ತುಗಳು ಯಾರಿಗೆ ನೀಡಿದ್ದಾರೆ? ದರ್ಶನ್ ಕೊಟ್ಟ ಸೂಚನೆ ಮೇರೆ ಫ್ಯಾನ್ಸ್ ಕೊಟ್ಟಿದ್ದು ಯಾರಿಗೆ? ತಿಳಿಯಲು ಮುಂದೆ ಓದಿ.

6 ದಿನಗಳಿಂದ ದಿನಸಿ ಸಂಗ್ರಹಣೆ

ಫೆಬ್ರವರಿ 16ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವಿತ್ತು. ಇದನ್ನೂ ಒಂದು ವಾರ ಮುನ್ನವೇ ದರ್ಶನ್ ಮನೆಗೆ ಅಭಿಮಾನಿಗಳು ಅಕ್ಕಿ,ಬೇಳೆ,ಅಡುಗೆ ಎಣ್ಣೆ ಸೇರಿದಂತೆ ದಿನಸಿ ವಸ್ತುಗಳನ್ನು ನೀಡುತ್ತಿದ್ದರು. ಇದು ಹುಟ್ಟುಹಬ್ಬದ ಹಿಂದಿನ ದಿನದವರೆಗೂ ಮುಂದುವರೆದಿತ್ತು. ಪ್ರತಿವರ್ಷದಂತೆ ಈ ವರ್ಷ ಕೂಡ ಹೆಚ್ಚು ದಿನಸಿ ವಸ್ತುಗಳನ್ನು ಸಂಗ್ರಹಣೆ ಮಾಡಲಾಗಿತ್ತು. ಅದನ್ನೀಗ ದರ್ಶನ್ ಸೂಚನೆ ಮೇರೆಗೆ ಹಂಚುವ ಕೆಲಸ ನಡೆಯುತ್ತಿದೆ.

ಮಂಗಳಮುಖಿಯರಿಗೆ ದಿನಸಿ ಹಂಚಿಕೆ

ಹುಟ್ಟುಹಬ್ಬದ ನಿಮಿತ್ತ ಸಂಗ್ರಹವಾದ ದಿನಸಿ ವಸ್ತುಗಳನ್ನು ಹಂಚುವ ಕೆಲಸ ನಡೆಯುತ್ತಿದೆ. ಸ್ವತ: ದರ್ಶನ್ ಈ ಬಾರಿ ದಿನಸಿಯನ್ನು ಮಂಗಳಮುಖಿಯರಿಗೆ ಹಂಚುವಂತೆ ಸೂಚನೆ ನೀಡಿದ್ದರು. ಅದರಂತೆ ಅಭಿಮಾನಿಗಳು ಈಗ ಎಲ್ಲೆಲ್ಲಿ ಮಂಗಳಮುಖಿಯರು ಅಸಹಾಯಕ ಸ್ಥಿತಿಯಲ್ಲಿ ಇದ್ದಾರೋ, ಅವರಿಗೆಲ್ಲ ವಾಹನಗಳಲ್ಲಿ ದಿನಸಿಯನ್ನು ಕಳುಹಿಸಿಕೊಡಲಾಗುತ್ತಿದೆ. ಈ ವಿಡಿಯೋಗಳು, ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

ಮಂಗಳಮುಖಿಯರಿಗೆ ದರ್ಶನ್ ಸಂದೇಶ

ದರ್ಶನ್ ದವಸ ಧಾನ್ಯಗಳ ಜೊತೆಗೆ ಒಂದು ಪತ್ರವನ್ನು ಕೂಡ ಕಳುಹಿಸಿದ್ದಾರೆ. ಎಲ್ಲೆಲ್ಲಿ ಮಂಗಳಮುಖಿಯರಿಗೆ ದಿನಸಿ ವಿತರಣೆ ಮಾಡಲಾಗಿದೆಯೋ ಆ ಎಲ್ಲಾ ಕಡೆಗೂ ಸಂದೇಶ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ. ದರ್ಶನ್ ಮನವಿಯಂತೆಯೇ ಅಭಿಮಾನಿಗಳು ಮಂಗಳಮುಖಿಯರ ವಾಸವಿರುವ ಪ್ರದೇಶವನ್ನು ಗುರುತಿಸಿ, ಅಲ್ಲಿಗೆ ದಿನಸಿ ವಿತರಣೆ ಮಾಡುತ್ತಿದ್ದಾರೆ.

ದರ್ಶನ್‌ಗೆ ಮಂಗಳಮುಖಿಯರ ಹಾರೈಕೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯಕ್ಕೆ ಮಂಗಳಮುಖಿಯರು ಹರ್ಷ ವ್ಯಕ್ತಪಡಿಸಿದ್ದಾರೆ. ದರ್ಶನ್ ಕಳುಹಿಸಿಕೊಟ್ಟಿರೋ ದಿನಸಿಯನ್ನು ಸ್ವೀಕರಿಸಿದ ಬಳಿಕ ಮಂಗಳಮುಖಿಯರು ಶುಭ ಹಾರೈಸಿದ್ದಾರೆ. ” ತುಂಬಾನೇ ಖುಷಿ ಆಯ್ತು. ದೇವರು ಆಯಸ್ಸು, ಆರೋಗ್ಯ ಕೊಟ್ಟು ದರ್ಶನ್ ಸರ್ ಅನ್ನು ಕಾಪಾಡಲಿ” ಎಂದು ಮಂಗಳಮುಖಿಯರು ಹಾರೈಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟಿ ಮೇಘನಾ ರಾಜ್ ಸರ್ಜಾ ಕೊನೆಗೂ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

Sun Feb 19 , 2023
ಸ್ಯಾಂಡಲ್‌ವುಡ್  ನಟಿ ಮೇಘನಾ ರಾಜ್ ಸರ್ಜಾ ಕೊನೆಗೂ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ನೀವೆಲ್ಲರೂ ಕೇಳುವ ಪ್ರಶ್ನೆಗೆ ಉತ್ತರ ನೀಡುವ ಸಮಯ ಬಂದಿದೆ ಎಂದು ಪೋಸ್ಟ್ ಮಾಡುವ ಮೂಲಕ ನಟಿ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದ್ದರು. ಈಗ ಹೊಸ ಸಿನಿಮಾ ಅನೌನ್ಸ್ ಮಾಡುವ ಮೂಲಕ ಆ ಕುತೂಹಲಕ್ಕೆ ತೆರೆಬಿದ್ದಿದೆ. ಕನ್ನಡದ ಪ್ರತಿಭಾನ್ವಿತ ನಟಿ ಮೇಘನಾ ರಾಜ್ ಅವರು ಪತಿ ಚಿರು  ನಿಧನದ ನಂತರ ಸಾಕಷ್ಟು ನೋವು, ಸಂಕಷ್ಟಗಳನ್ನ ಎದುರಿಸಿದ್ದರು. ನಟಿಯ ಎರಡನೇ […]

Advertisement

Wordpress Social Share Plugin powered by Ultimatelysocial