ಕನ್ನಡ ಮಾತಾಡಪ್ಪ ಅಂತ ಹೇಳಿದಕ್ಕೆ ಬಿತ್ತು ಬಾಟಲಿನ ಏಟು.
ಹಿಂದಿ ವಾಲನ ದೌಲತ್ತು ಹೇಗಿತ್ತು ಗೊತ್ತ.!
ದೂರದ ಊರಿಂದ ಬಂದ ಹಿಂದಿವಾನಿಂದ ಕನ್ನಡಿಗನ ಮೇಲೆ ಹಲ್ಲೆ.
ಚೆನ್ನಮ್ಮನ ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ನಡೆದಿರುವ ಘಟನೆ.
ತಾಜ ಜ್ಯೂಸ್ ಶಾಪ್ ನಲ್ಲಿ ನಡೆದಿರುವ ಘಟನೆ.
ದೀಪಕ್ ಹಲ್ಲೆಗೊಳಗಾದ ವ್ಯಕ್ತಿ.
ಬಿಹಾರ್ ಮೂಲದ ಯುವಕ ಶಬ್ಬೀರ್ ನಿಂದ ಹಲ್ಲೆ.
ಕಳೆದ ತಿಂಗಳ 31 ರಾತ್ರಿ 7:30 ಕ್ಕೆ ಐಸ್ ಕ್ರೀಂ ತನ್ನಲು ಅಂಗಡಿಗೆ ಹೋಗಿದ್ದ ದೀಪಕ್.
ನಂತರ ಐಸ್ ಕ್ರೀಂ ಹಣ ಎಷ್ಟು ಅಂತ ಕೇಳಿದ ದೀಪಕ್.
ಯುವಕ ಶಬ್ಬೀರ್ ಹಿಂದಿಯಲ್ಲಿ ಐಸ್ ಕ್ರೀಂ ಬೆಲೆ ತಿಳಿಸಿದ್ದ.
ಆದ್ರೆ ದೀಪಕ್ ಗೆ ಹಿಂದಿ ಬರದ ಕಾರಣ ,ಕನ್ನಡಲ್ಲಿ ಹೇಳಪ್ಪ ಅಂತ ತಿಳಿಸಿದ್ದ.
ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಜ್ಯೂಸ್ ಅಂಗಡಿಯ ಯುವಕ ಶಬ್ಬೀರ್.
ಗಲಾಟೆ ಶುರುವಾಗಿದ್ದು, ನಂತರ ದೀಪಕ್ ಮುಖ ಕ್ಕೆ ಪೆಪ್ಸಿ ಬಾಟಲಿನಿಂದ ಹಲ್ಲೆ ನಡೆಸಿದ್ದ ಅಂಗಡಿಯ ಯುವಕ.
ಹಲ್ಲೆಯ ಸಿಸಿಟಿವಿ ದೃಶ್ಯಾವಳಿ ಬಿಟಿವಿ ನ್ಯೂಸ್ ಗೆ ಲಬ್ಯ.
ಹಲ್ಲೆಯಿಂದ ಪ್ರಜ್ಞೆ ತಪ್ಪಿದ ದೀಪಕ್ ನನ್ನ ಆಸ್ಪತ್ರೆಯ ದಾಖಲು.
ಇದೀಗ 2 ಸರ್ಜರಿ ಮಾಡಬೇಕು ಅಂತ ತಿಳಿಸಿರುವ ವೈದ್ಯರು.
ಸದ್ಯ ಘಟನೆ ಬಗ್ಗೆ ಚೆನ್ನಮ್ಮನ ಕೆರೆ ಪೊಲೀಸ್ ಠಾಣೆಗೆ ದೂರು ನೀಡಿರುವ ದೀಪಕ್ ಪೋಷಕರು.
ಸದ್ಯ ಹಲ್ಲೆ ನಡೆಸಿದ್ದ ಆರೋಪಿಯನ್ನ ವಶಕ್ಕೆ ಪಡೆದಿರುವ ಪೊಲೀಸರು.
ಚೆನ್ನಮ್ಮನ ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada