ಸ್ವಾಮೀಜಿ ಹೇಳಿದ ಭವಿಷ್ಯ ನಿಜ ಆಗುತ್ತಾ?

ಶಿವರಾತ್ರಿ ಹಬ್ಬದಂದು ಮುದ್ದುಮಣಿಗಳ ಆಸೆ, ಕನಸನ್ನು ಸಂಪೂರ್ಣಗೊಳ್ಳಲಿದೆ. ಸೃಷ್ಟಿ ಹಾಗೂ ಭೂಮಿಯ ಕನಸು ಎಂದು ನನಸಾಗಿ ಕಣ್ಣ ಮುಂದೆ ಬರಲಿದೆ ತನ್ನ ತಾಯಿಯನ್ನು ಯಾವತ್ತೋ ಕಳೆದುಕೊಂಡಿದ್ದೇವೆ, ಆದರೆ ಇನ್ನು ಮುಂದೆ ತಾಯಿ ಬರುವುದೇ ಇಲ್ಲ ಅಂದುಕೊಂಡಿದ್ದ ಇಬ್ಬರು ಮಕ್ಕಳಿಗೆ ತನ್ನ ತಾಯಿಯ ತದ್ರೂಪ ಇರುವ ಯುವತಿಯನ್ನು ನೋಡಿ ಆಶ್ಚರ್ಯ ಆಗುತ್ತದೆ.ಇದಕ್ಕಿಂತ ಮುಂಚೆ ಜಾಹ್ನವಿ ಬಳಿ ಸ್ವಾಮೀಜಿ ಬರುತ್ತಾರೆ.ಜಾಹ್ನವಿ ಸ್ವಾಮೀಜಿ ಬಳಿ ಅದೆಷ್ಟು ಬಾರಿ ಕೇಳಿಕೊಂಡರೂ ಆವರು ಮಾತ್ರ ಜಾಹ್ನವಿಗೆ ಬಿಡಲೇ ಇಲ್ಲ. ಆಗ ಜಾಹ್ನವಿ ಬಳಿ ನನಗೆ ಜಾಗ ಕೊಡಿ ನಾನು ಹೋಗಬೇಕು ಎಂದಾಗ ಸ್ವಾಮೀಜಿ ಜಾಹ್ನವಿ ಬಳಿ ಹಿಂದಿನ ಜನ್ಮದ ನೆನಪನ್ನು ಮಾಡಿಕೊಳ್ಳಲು ಹೇಳುತ್ತಾರೆ. ಹಾಗೆಯೇ ಈಗಾಗಲೇ ಅನೇಕ ಬಾರಿ ಹೀಗೆ ಬೇರೆ ಸ್ವಾಮೀಜಿಗಳು ಹೇಳಿರುತ್ತಾರೆ. ಜಾಹ್ನವಿಗೆ ಕನಸಿನಲ್ಲಿ ಏನೇನೋ ಯೋಚನೆಗಳು ಬರುತ್ತಾ ಇರುತ್ತದೆ. ಹಿಂದಿನ ಜನುಮದ ಬಗ್ಗೆ ಏನಾದರೂ ಸ್ವಾಮೀಜಿ ಹೇಳುತ್ತ ಇರಬಹುದಾ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ.ಆದರೆ ಇದೆಲ್ಲದಕ್ಕೆ ಜಾಹ್ನವಿ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಈ ಸ್ವಾಮೀಜಿ ಹಿಂದಿಯಲ್ಲಿ ಹೇಳುತ್ತ ಇರುವುದನ್ನು ಕೇಳಿದ ಜಾಹ್ನವಿಗೆ ಆಶ್ಚರ್ಯ ಆಗುತ್ತದೆ. ಮನದಲ್ಲಿ ತಳಮಳ ಹೆಚ್ಚಾಗುತ್ತದೆ. ನನ್ನಿಂದ ಏನು ಕೆಲಸ ಆಗಬೇಕಾಗಿದೆ ನಾನು ಯಾರಿಗೆ ಸಹಾಯ ಮಾಡಬೇಕಾಗಿದೆ ಎಂದೆಲ್ಲ ಯೋಚನೆ ಮಾಡುತ್ತಾ ಇರುವ ವೇಳೆ ಸ್ವಾಮೀಜಿ ಅಲ್ಲಿಂದ ಹೋಗುತ್ತಾರೆ. ಅದನ್ನು ನೋಡಿದ ಜಾಹ್ನವಿ ಸ್ವಾಮೀಜಿಯನ್ನು ಎಷ್ಟೇ ಕರೆದರೂ ಅವರು ಮಾತ್ರ ಎನು ಹೇಳಿದರು ಕೇಳದೆ ಸುಮ್ಮನೆ ಇರುತ್ತಾರೆ.ಇದನ್ನು ನೋಡಿದ ಜಾಹ್ನವಿ ಯೋಚನೆ ಮಾಡಿಕೊಂಡು ನಿಂತಿರುತ್ತಾಳೆ. ಶಿವರಾತ್ರಿಯ ದಿನ ಪವಾಡ ನಡೆಯುತ್ತದೆ ಎನ್ನುವುದಕ್ಕೆ ಇದೇ ನಿದರ್ಶನ. ಇನ್ನು ಭೂಮಿ ಹಾಗೂ ಸೃಷ್ಟಿ ಅದೇ ದೇವಾಲಯಕ್ಕೆ ಬರುತ್ತಾರೆ. ಬಳಿಕ ದೇವರ ದರ್ಶನವನ್ನು ಮಾಡಿ ದೀಪ ಬೆಳಗಿಸುತ್ತಾರೆ. ಸೃಷ್ಟಿ ತನ್ನ ಗಂಡ ಶಿವು ಜೊತೆ ಬಂದರೂ ಸೃಷ್ಟಿ ಮಾತ್ರ ಒಬ್ಬೊಂಟಿ ಆಗಿ ಬರುತ್ತಾಳೆ. ಬಂದು ದೇವರ ಮೂರ್ತಿಯನ್ನು ಮಣ್ಣಿನಲ್ಲಿ ಮಾಡುತ್ತಾ ಇರುವಾಗ ಜಾಹ್ನವಿ ತನ್ನ ಕುಟುಂಬದ ಜೊತೆ ದೇವಾಲಯಕ್ಕೆ ಆಗಮಿಸುತ್ತಾಳೆ.ಇನ್ನು ದೇವಾಲಯಕ್ಕೆ ಮೊದಲು ಭೇಟಿ ನೀಡಿರುವುದು ಆಕೆ ಅತ್ತೆ ಮಾವ. ಅವರಿಬ್ಬರೂ ಎಲ್ಲಿ ಎಂದು ಹುಡುಕುತ್ತಾ ಇರಬೇಕಾದರೆ ಅತ್ತೆ ಎಂದು ಕರೆದ ಶಬ್ದ ಆಗುತ್ತದೆ. ತನ್ನ ತಾಯಿಯ ಧ್ವನಿಯನ್ನು ಕೇಳಿ ಸೃಷ್ಟಿ ಭೂಮಿ ಒಮ್ಮೆ ಅವಕ್ಕಾಗುತ್ತಾರೆ. ಯಾರು ಇರಬಹುದು ಹೀಗೆ ನಮ್ಮನ್ನು ಕರೆದಿದ್ದು ಅಮ್ಮನ ಧ್ವನಿ ಇದ್ದ ಹಾಗೆ ಇದೆಯಲ್ಲ ಎಂದೆಲ್ಲ ಯೋಚನೆ ಮಾಡಿಕೊಂಡು ಇರುತ್ತಾಳೆ. ಇನ್ನು ಜಾಹ್ನವಿ ದೇವಾಲಯದಲ್ಲಿ ದೇವರ ದರ್ಶನ ಪಡೆದು ದೇವರ ಬಳಿ ಬೇಡಿಕೊಳ್ಳುತ್ತಾಳೆ. ಶಿವ ರಾತ್ರಿ ಆದ ಕಾರಣ ದೇವಾಲಯಕ್ಕೆ ಸಹಸ್ರಾರು ಜನರು ಬರುತ್ತಾರೆ.ಇನ್ನು ಸೃಷ್ಟಿ ಹಾಗೂ ದೃಷ್ಟಿ ಶಿವು ಜೈಲಿಂದ ಹೊರಗೆ ಬರಬೇಕು ಹಾಗೆ ಶ್ರವಣ್ ಆದಷ್ಟು ಬೇಗ ಹುಷಾರ್ ಆಗಿ ಇರಬೇಕು ಎನ್ನುವ ನಿಟ್ಟಿನಲ್ಲಿ ವ್ರತ ಮಾಡುತ್ತಾ ಇದ್ದಾರೆ. ಹಾಗೆಯೇ ಶಿವು ಜೈಲಿನಿಂದ ಬಿಡುಗಡೆ ಆಗಿ ಸೃಷ್ಟಿ ಮುಂದೆ ಬರುತ್ತಾನೆ. ಇದನ್ನು ಕಂಡ ಸೃಷ್ಟಿ ಬಹಳ ಖುಷಿ ಪಡುತ್ತಾಳೆ . ಬಳಿಕ ಇಬ್ಬರೂ ಸೇರಿ ದೇವರ ಪೂಜೆ ಮಾಡುತ್ತಾರೆ. ಇನ್ನು ಭೂಮಿ ಮಾತ್ರ ಒಂಟಿ ಆಗಿ ದೇವರ ಕೆಲಸಗಳನ್ನು ಮಾಡುತ್ತಾ ದೇವರ ಬಳಿ ಬೇಡಿಕೊಳ್ಳುತ್ತಾಳೆ. ತಾಯಿ ಇಲ್ಲದ ತಬ್ಬಲಿ ಮೇಲೆ ನಿನಗೆ ಯಾಕೆ ಅಷ್ಟು ಕೋಪ ಎಂದೆಲ್ಲ ಮಾತನಾಡುತ್ತಾ ಇರುತ್ತಾಳೆ. ಇನ್ನು ಜಾಹ್ನವಿ ಮುದ್ದು ಮಣಿಗಳಿಗೆ ಎಂದು ಕಾಣಸಿಗುತ್ತಾರೆ ಮುಂದೇನು ಕಾದು ನೋಡಬೇಕಿದೆ .

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಂಭ ರಾಶಿ ಭವಿಷ್ಯ.

Tue Feb 28 , 2023
  ಆಧ್ಯಾತ್ಮಿಕ ಜೀವನದ ಪೂರ್ವಾಪೇಕ್ಷಿತವಾಗಿರುವಂತಹ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ. ಒಳ್ಳೆಯದೂ ಹಾಗೂ ಕೆಟ್ಟದೆಲ್ಲವೂ ಮನಸ್ಸಿನ ಮೂಲಕವೇ ಬರುವುದರಿಂದ ಬುದ್ದಿ ಜೀವನದ ಹೆಬ್ಬಾಗಿಲಾಗಿದೆ. ಇದು ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಅಗತ್ಯವಿರುವ ಬೆಳಕನ್ನು ನೀಡುತ್ತದೆ. ಹೂಡಿಕೆ ಶಿಫಾರಸು ಮಾಡಲಾಗಿದ್ದರೂ ಸರಿಯಾದ ಸಲಹೆ ಪಡೆಯಬೇಕು. ದಿನದಲ್ಲಿ ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ ಸಂತೋಷ ಮತ್ತು ಆನಂದ ತೆರೆದಿಡುತ್ತದೆ. ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ – ನಿಮ್ಮ ಪ್ರೀತಿಪಾತ್ರರು […]

Advertisement

Wordpress Social Share Plugin powered by Ultimatelysocial