18-03-2021 .
ಚೆನ್ನಾಗಿ ಬೆಳೆದಿದ್ದ ಒಂದು ಎಕರೆ ಕ್ಯಾಪ್ಸಿಕಂ ತೋಟಕ್ಕೆ ದುಷ್ಕರ್ಮಿಗಳು ವಾಮಾಚಾರ ಮಾಡಿರುವ ಘಟನೆ ಕೋಲಾರ ತಾಲ್ಲೂಕು ಮದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮದನಹಳ್ಳಿ ಗ್ರಾಮದ ಚೌಡರೆಡ್ಡಿ ಎಂಬುವರು ಒಂದು ಎಕರೆಯಲ್ಲಿ ಕ್ಯಾಪ್ಸಿಕಂ ಬೆಳೆ ಬೆಳೆದಿದ್ದಾರೆ, ಇದನ್ನು ಸಹಿಸದ ದುಷ್ಕರ್ಮಿಗಳು ಹಸಿರು ಬ್ಯಾಗ್ ನಲ್ಲಿ ನಾಲ್ಕೈದು ಯಂತ್ರಗಳನ್ನು ಹಾಕಿ ಯಂತ್ರದ ಒಳಗೆ ರೈತ ಚೌಡರೆಡ್ಡಿ ಹಾಗೂ ಅವರ ಹೆಸರುಗಳನ್ನು ಚೀಟಿಯಲ್ಲಿ ಬರೆದು ಹಾಕಿ ಕೆಡುಕು ಬಯಸಿದ್ದಾರೆ, ಆತಂಕಗೊಂಡ ಚೌಡರೆಡ್ಡಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ, ಈ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಗ್ರಾಮಾಂತರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲು
*ಕ್ಯಾಪ್ಸಿಕಂ ತೋಟಕ್ಕೆ ದುಷ್ಕರ್ಮಿಗಳ ವಾಮಾಚಾರ
*ಕೋಲಾರ ತಾಲ್ಲೂಕು ಮದನಹಳ್ಳಿ ಗ್ರಾಮದಲ್ಲಿ ಘಟನೆ
*ಮದನಹಳ್ಳಿ ಗ್ರಾಮದ ಚೌಡರೆಡ್ಡಿ ತೋಟ