ಲಕ್ನೋ: ವೈದ್ಯರು ಮೃತಪಟ್ಟಿದ್ದಾರೆ ಎಂದು ಹೇಳಿದ ಬಳಿಕ ಅಂತಿಮ ವಿಧಿ ವಿಧಾನಕ್ಕೆ ಮೃತದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವ ವೇಳೆ ಅಚ್ಚರಿಯೊಂದು ನಡೆದಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ಇತ್ತೀಚೆಗೆ ನಡೆದಿದೆ.ಉತ್ತರ ಪ್ರದೇಶದ ಜಸ್ರಾನ ಪಟ್ಟಣದ ಬಿಲಾಸ್ಪುರ್ ಗ್ರಾಮದ ಹರಿಭೇಜಿ (81) ಅನಾರೋಗ್ಯದ ಕಾರಣ ಡಿಸೆಂಬರ್ 23 ರಂದು ಫಿರೋಜಾಬಾದ್ ಟ್ರಾಮಾ ಸೆಂಟರ್ಗೆ ದಾಖಲಾಗಿದ್ದರು. ಕೆಲ ದಿನಗಳ ಬಳಿಕ ಹರಿಭೇಜಿ ಅವರ ಮೆದುಳು ಮತ್ತು ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿದ ಕಾರಣ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದರು.ತಾಯಿ ಕೊನೆಯುಸಿರೆಳೆದಿದ್ದಾರೆ ಎಂದು ಮಗ ಸುಗ್ರೀವ್ ಸಿಂಗ್ ಅಂತಿಮ ವಿಧಿ ವಿಧಾನಕ್ಕೆ ಗ್ರಾಮಕ್ಕೆ ಬಂದು, ಅಂತ್ಯ ಸಂಸ್ಕಾರಕ್ಕೆ ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಾರೆ. ಇನ್ನೇನು ಸ್ಮಶಾನಕ್ಕೆ ಕರೆದುಕೊಂಡು ಹೋದ ಬಳಿಕ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ನಡೆಯುತ್ತಿರುವಾಗಲೇ ಎಲ್ಲರಿಗೂ ಅಚ್ಚರಿಯಾಗುವಂತೆ ಹರಿಭೇಜಿ ಕಣ್ಣು ತೆರೆಯುತ್ತಾರೆ. ವೈದ್ಯರು ಮೃತಪಟ್ಟಿದ್ದಾರೆ ಎಂದು ಹೇಳಿದ ಬಳಿಕ ಈ ರೀತಿ ಆಗಿರುವುದು ಎಲ್ಲರೂ ಒಮ್ಮೆ ಶಾಕ್ ಆಗುವಂತೆ ಮಾಡುತ್ತದೆ.ತಾಯಿಯನ್ನು ಮತ್ತೆ ಮನೆಗೆ ಕರೆ ತರುತ್ತಾರೆ. ಮನೆಗೆ ಬಂದು ಮತ್ತೆ ಬದುಕಿ ಬಂದದಕ್ಕಾಗಿ ಹರಿಭೇಜಿ ಕೆಲ ದನಗಳನ್ನು ದಾನ ಮಾಡುತ್ತಾರೆ. ಚಹಾ ಕುಡಿಯುತ್ತಾರೆ. ಆದರೆ ಮೊದಲಿನ ಹರಿಭೇಜಿ ಸ್ಥಿತಿ ಇರುವುದಿಲ್ಲ. ಬದುಕಿ ಬಂದ ರಾತ್ರಿ ಮಲಗಿದವರು ಮರುದಿನ ಮುಂಜಾನೆ ಮೃತಪಟ್ಟಿದ್ದಾರೆ. ಆ ಬಳಿಕ ಮತ್ತೆ ಸ್ಮಶಾನಕ್ಕೆ ಹೋಗಿ ತಾಯಿ ಅಂತ್ಯ ಸಂಸ್ಕಾರವನ್ನು ಕುಟುಂಬಸ್ಥರು ಮಾಡುತ್ತಾರೆ.
https://play.google.com/store/apps/details?id=com.speed.newskannada