ನವದೆಹಲಿ: ಮಾಜಿ ಶಾಸಕ ವೈ.ಎಸ್.ವಿ. ದತ್ತ ಜೆಡಿಎಸ್ ಪಕ್ಷ ತೊರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ.
ಒಂದೆರಡು ವಿಚಾರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರ ಮೇಲೆ ದತ್ತ ಅವರಿಗೆ ಬೇಸರ ಇರಬಹುದು.
ಕುಮಾರಸ್ವಾಮಿ ಹಿಂದೆಯೇ ದತ್ತ ಅವರನ್ನು ಎಂಎಲ್ಸಿ ಮಾಡಿದ್ದರು. ನನ್ನ ಜೊತೆ ಇರುವಂತೆ ದತ್ತ ಅವರಿಗೆ ಹೇಳಿದ್ದೇನೆ. ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ವಿಚಾರದಲ್ಲಿಯೂ ಇಂತಹ ಊಹಾಪೋಹಗಳು ಇದ್ದವು ಎಂದು ಹೇಳಿದ್ದಾರೆ.
ಅನಿತಾ ಕುಮಾರಸ್ವಾಮಿ ಚುನಾವಣೆಗೆ ನಿಲ್ಲಲ್ಲ ಎನ್ನುವ ಹೇಳಿಕೆಯ ಬಗ್ಗೆ ಕುಮಾರಸ್ವಾಮಿ ಜೊತೆಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೆಚ್.ಡಿ. ದೇವೇಗೌಡ ಹೇಳಿದ್ದಾರೆ. ಕುಮಾರಸ್ವಾಮಿ ಈಗಲೇ ಈ ರೀತಿ ಹೇಳಿಕೆ ನೀಡಬಾರದು. ಅನಿತಾಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಏನೂ ಹೇಳಿಲ್ಲ. ನಾವು ಚುನಾವಣೆಯಲ್ಲಿ ಗಂಭೀರವಾಗಿ ಸ್ಪರ್ಧೆ ಮಾಡುತ್ತಿದ್ದೇವೆ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us:
Wed Feb 9 , 2022
IPL 2022: ಮುಂಬೈ ಇಂಡಿಯನ್ಸ್ ಕೀರನ್ ಪೊಲಾರ್ಡ್ ಅವರೊಂದಿಗೆ ದೊಡ್ಡ ತಪ್ಪು ಮಾಡಿದೆಯೇ? ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ವೆಸ್ಟ್ ಇಂಡೀಸ್ ನಾಯಕ ಪೊಲಾರ್ಡ್ ನಿಗೂಢ ಕಾರಣದಿಂದ ಹೊರಗುಳಿದಿದ್ದಾರೆ. ಅವರು ಈ ಹಿಂದೆ ಪಾಕಿಸ್ತಾನದ ವೆಸ್ಟ್ ಇಂಡೀಸ್ ಸರಣಿಯಿಂದ ವಂಚಿತರಾಗಿದ್ದರು ಮತ್ತು T20 ವಿಶ್ವಕಪ್ನಲ್ಲಿ T20I ಸ್ಪರ್ಧೆಯನ್ನು ಮಧ್ಯದಲ್ಲೇ ಕಳೆದುಕೊಂಡಿದ್ದರು. IPL 2022 ಕ್ಕಿಂತ ಮುಂಚಿತವಾಗಿ MI ಗೆ ನಿರಂತರವಾದ ಗಾಯವು ಒಂದು ದೊಡ್ಡ […]