ಮಹಾಂತೇಶ್ ಸ್ವಾಮೀಜಿಯವರು ನಿಧನರಾಗಿದ್ದಾರೆ, ಇವರು ಹಾವೇರಿ ಜಿಲ್ಲೆಯ ಚಳಗೇರಿ ನಡೆದಾಡುವ ದೇವರೇಂದೆ ಪ್ರಸಿದ್ದಿಯನ್ನು ಪಡೆದಿದ್ದರು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ಚಳಗೇರಿಯ ಕಟಗಿಹಳ್ಳಿಯಲ್ಲಿ, ಮಠಾಧೀಶರಾಗಿದ್ದರು ಮತ್ತು ಮಹಾಂತೇಶ್ ಸ್ವಾಮೀಜಿಯವರು ಅನಾರೋಗ್ಯದ ಸಮಸ್ಯೆಯಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ವಿಧಿಯಾಟ ಬಲ್ಲವರಾರು..? ಅನಾರೋಗ್ಯದಿಂದ ಬಳಲುತ್ತಿದ್ದ ಚಳಗೇರಿಯ ಕಟಗಿಹಳ್ಳಿ ಮಠದ ಮಹಾಂತೇಶ್ ಸ್ವಾಮೀಜಿ ಚಿಕಿತ್ಸೆ ಫಲಕಾರಿಯಾಗದೆ ಚಿಕಿತ್ಸೆಗೆಂದು ದಾಖಲಾಗಿದ್ದ ಆಸ್ಪತ್ರೆಯಲ್ಲೇ ಚಿಕಿತ್ಸೆ ಫಲಕಾರಿಯಾಗದೆ ನಿಧಿವಶರಾಗಿದ್ದರೆ.
ಅರವಿಂದ್ ಘೋಷ್ ಅವರ ಬಗ್ಗೆ ಸಂಶೋದನೆಯನ್ನು ಮಾಡಿ ಡಾಕ್ಟರೇಟ್ ಎಂಬ ಪಟ್ಟವನ್ನು ಪಡೆದಿದ್ದ ಮಹಂತೇಶ್ ಸ್ವಾಮೀಜಿಯವರು ಇದೀಗ ಇಹಲೋಕವನ್ನ ತ್ಯಜಿಸಿದ್ದಾರೆ. ಇಂದು ಚಳಗೇರಿಯ ಕಟ್ಟಿಗೆಹಳ್ಳಿ ಮಠದಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತದೆ.