ನವದೆಹಲಿ: ಕೊರೊನಾ ಹಿನ್ನೆಲೆಯಲ್ಲಿ ಸಾಕಷ್ಟು ಹಣದ ಅವಶ್ಯಕತೆ ಇದೆ. ಖಾಸಗಿಯವರ ಆರ್ಥಿಕ ನೆರವಿನ ಹೊರತಾಗಿ ಕೇಂದ್ರದ ಎಲ್ಲಾ ಸಚಿವರು ಹಾಗೂ ಸಂಸದರ ವೇತನದಲ್ಲಿ ಶೇಕಡಾ ೩೦ರಷ್ಟು ಕಡಿತ ಮಾಡಲಾಗಿದೆ. ಇದೀಗ ಕೇಂದ್ರ ಸರ್ಕಾರಿ ನೌಕರರ ಡಿಎ ಹಾಗೂ ಪಿಂಚಣಿದಾರರ ಡಿಆರ್ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
ಈ ಭತ್ಯೆಗಳನ್ನು ೨೦೨೦ರ ಜನವರಿ ಒಂದರಿಂದ ೨೦೨೧ರ ಜುಲೈ ೦೧ ರವರೆಗೆ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ತಿಳಿಸಿದೆ. ಕಳೆದ ಮಾರ್ಚ್ನಲ್ಲಿ ಸರ್ಕಾರಿ ನೌಕರರ ಡಿಎ ಹಾಗೂ ಡಿಆರ್ ಅನ್ನು ಶೇಕಡಾ೧೭ರಿಂದ ಶೇಕಡಾ ೨೧ಕ್ಕೆ ಒಟ್ಟು ಶೇಕಡಾ ೪ರಷ್ಟು ಹೆಚ್ಚಳ ಮಾಡಲಾಗಿತ್ತು. ಈ ಬಗ್ಗೆ ಕೇಂದ್ರ ಸಚಿವ ಸಂಪುಟದಿಂದ ಕೂಡ ಅನುಮೋದನೆ ದೊರಕಿತ್ತು. ಇದೀಗ ಹೆಚ್ಚುವರಿ ಭತ್ಯೆಯನ್ನು ೨೦೨೦ರ ಜುಲೈ ಒಂದರಿಂದ ೨೦೨೧ರ ಜನವರಿವರೆಗೂ ತಡೆಹಿಡಿಯಲು ನಿರ್ಧರಿಸಲಾಗಿದೆ ಅಂತ ಕೇಂದ್ರ ಹಣಕಾಸು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನೌಕರರ ಡಿಎ, ಪಿಂಚಣಿದಾರರ ಡಿಆರ್ ತಡೆಹಿಡಿತ
Please follow and like us: