ದೇವದರ್ಗ ಪಟ್ಟಣದ ಗೌರಮ್ಮ ಪೇಟೆ ಕಾಲೋನಿಯಲ್ಲಿ ಬಂಡೆ ಉರುಳಿ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರಿಗೆ ಗಾಯವಾಗಿದೆ. ಮನೆಯ ಪಕ್ಕದಲ್ಲಿ ಗುಡ್ಡವಿದ್ದು ಎರಡು ದಿನದಿಂದ ಧಾರಾಕಾರವಾಗಿ ಮಳೆ ಬಂದು ನಿಂತ ಮೇಲೆ ಮಕ್ಕಳು ಗುಡ್ಡದ ಬಂಡೆ ಪಕ್ಕದಲ್ಲಿ ಆಟವಾಡುತ್ತಿರುವಾಗ ಬಂಡೆ ಉರುಳಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಮೌನೇಶ ತಂದೆ ಶಿವರಾಜ ಪೂಜಾರಿ ಕಾಲು ಮುರಿದಿದೆ. ಸರ್ವಜನಿಕ ರ್ಕಾರಿ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯ ಕುರಿತು ಮಾತನಾಡಿದ ಜಿಲ್ಲಾ ವರಿಷ್ಠಾಧಿಕಾರಿ ಎಸ್ಪಿ ವೇದಮರ್ತಿ ಅವರು ಸರ್ವಜನಿಕರಲ್ಲಿ ವಿನಂತಿಸಿಕೊಳ್ಳುವುದೆನೇಂದರೆ ಮಳೆಗಾಲ ಇರುವ ಕಾರಣ ಗುಡ್ಡದಲ್ಲಿ ಮನೆ ಮಾಡಿಕೊಂಡಿರುವವರು ಜಾಗೃತರಾಗಿ ಇರಬೇಕು ಮಣ್ಣಿನ ಸವಕಳಿಂದ ಅತಿ ಹೆಚ್ಚು ಅನಾಹುತಗಳು ಆಗುವ ಸಂಭವಿರುತ್ತದೆ. ಎಂದು ಎಸ್ಪಿ ವೇದಮರ್ತಿ ತಿಳಿಸಿದರು.
ಬಂಡೆ ಉರುಳಿ ಬಿದ್ದು ಇಬ್ಬರು ಮಕ್ಕಳ ಸಾವು
Please follow and like us: