ಕೊರೊನಾ ಮುಕ್ತಿಗೊಳಿಸಲು ಪ್ರಾರ್ಥನೆ ಮಾಡೋಣ

ರಂಜಾನ್ ಹಬ್ಬ ಮನುಷ್ಯನಲ್ಲಿ ಸತ್ಯ,  ನ್ಯಾಯ,  ನೀತಿ, ಧರ್ಮ,  ಮಾನವೀಯ ಪ್ರಜ್ಞೆ ಮೂಡಿಸುವಂಥ ಹಬ್ಬವಾಗಿದೆ ಎಂದು  KPCC  ರಾಜ್ಯ ಕಾರ್ಯಾಧ್ಯಕ್ಷ ಈಶ್ವರ್  ಖಂಡ್ರೆ  ಹೇಳಿದ್ದಾರೆ. ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನನ್ನ ವತಿಯಿಂದ ಎಲ್ಲಾ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಇದ್ ಮುಬಾರಕ್ ಶುಭಾಶಯಗಳನ್ನು ಕೋರುತ್ತೇನೆ. ಈ ಹಬ್ಬವು ಮುಸ್ಲಿಂ ಬಾಂಧವರಿಗೆ ಪವಿತ್ರವಾದ ಹಬ್ಬವಾಗಿದೆ,  ಈ ಹಬ್ಬ ಮನುಷ್ಯನಲ್ಲಿ ಸತ್ಯ,  ನ್ಯಾಯ,  ನೀತಿ, ಧರ್ಮ,  ಮಾನವೀಯ ಪ್ರಜ್ಞೆ ಮೂಡಿಸುವಂಥ ಹಬ್ಬವಾಗಿದೆ. ವಿಶೇಷವಾಗಿ ಮುಸ್ಲಿಂ ಬಾಂಧವರಲ್ಲಿ ಇದ್ದ ಬಡವರಿಗೆ,  ನಿರ್ಗತಿಕರಿಗೆ ದಾನ,  ಧರ್ಮ ಮಾಡಿ ಅಲ್ಲಾಹನನ್ನು ಸಂತೃಪ್ತಿ ಪಡಿಸುವುದು ಒಂದು ಉದಾತ್ತವದಂಥ ಚಿಂತನೆಯಾಗುವಂಥ  ಹಬ್ಬವಾಗಿದೆ. ಕಳೆದ ಒಂದು ತಿಂಗಳಿಂದ  ಉಪವಾಸ ಮಾಡಿದ್ರಿ,  ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಮಾಡಿದ್ದೀರಿ,  ಆದರೆ ಈ ಸಂಭ್ರಮಕ್ಕೆ ಮಹಾಮಾರಿ ಕರೋನಾ ಕಾರ್ಮೋಡ ಕವಿಯುವಂತೆ ಮಾಡಿದೆ. ಹೀಗಾಗಿ ನಾವೆಲ್ಲರೂ ಅಲ್ಲಾಹನನ್ನು ಪ್ರಾರ್ಥನೆ ಮಾಡಿ ಇಡೀ ಮನುಕುಲಕ್ಕೆ ಮಹಾಮಾರಿ ಕೊರೊನಾ ಮುಕ್ತಿಗೊಳಿಸಲು ಪ್ರಾರ್ಥನೆ ಮಾಡೋಣ. ಮತ್ತು ರಂಜಾನ್ ಹಬ್ಬ ಎಲ್ಲರಿಗೂ ಆರೋಗ್ಯ ಸಂತೋಷ ಸಮೃದ್ಧಿ ತರಲಿ ಎಲ್ಲರಿಗೂ ಒಳ್ಳೆದಾಗಲಿ ಮತ್ತೊಮ್ಮೆ ಎಲ್ಲರಿಗೂ ಹಾರ್ದಿಕ ಶುಭಾಶಯಗಳು ಕೋರುತ್ತೇನೆಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಅಧಿಕಾರಿಗಳಿಗೆ ದೂರು ನೀಡಿದ್ರೂ ಕ್ಯಾರೇ ಅಂದಿಲ್ಲ..!

Tue May 26 , 2020
ಕೊರೊನ ಸೊಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಅನೇಕ ಕಡೆ ಕ್ವಾರಂಟೈನ್ ಸ್ಥಳಗಳನ್ನು ಸಿದ್ದಪಡಿಸಿದೆ. ಅದೇ ರೀತಿ ಬೀದರನಲ್ಲಿ ಮಾಡಿದೆ. ಆದರೆ ಅನೇಕ ಕಡೆ ಸರಿಯಾದ ವ್ಯವಸ್ಥೆ ಇಲ್ಲವೆಂದು ದೂರುಗಳು ಕೇಳಿ ಬರುತ್ತಿವೆ. ಇಂತಹದೇ ಒಂದು ದೂರು  ಗುರುಮಠಕಲ್ ತಾಲೂಕಿನ ಚಪೆಟ್ಲಾ ಗ್ರಾಮದಿಂದ ಬಂದಿದೆ. ಗುರುಮಠಕಲ್ ತಾಲೂಕಿನ ಚಪೆಟ್ಲಾ ಗ್ರಾಮದಲ್ಲಿ   ಬರುವ ಶಾಂತಿನಿಕೇತನ ಪ್ರಾಥಮಿಕ ಶಾಲೆಯಲ್ಲಿ ಸುಮಾರು 40 ಜನ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಇಲ್ಲಿ ಜನರಿಗೆ ಬಾತ್ರೂಮ್ […]

Advertisement

Wordpress Social Share Plugin powered by Ultimatelysocial