ಗೋಪಾಲಯ್ಯಗಿಂತ ಮೊದಲು ಮಂತ್ರಿ ಆಗಿದ್ದು, ನಾನು ಸರ್ಕಾರ ಹೇಗೆ ನಡೆಯುತ್ತದೆ? ವ್ಯವಸ್ಥೆ ಹೇಗಿರುತ್ತದೆ ಎನ್ನುವುದು ಚೆನ್ನಾಗಿ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಸ್ತಾನು ಇರಿಸಿದ್ದ ಅಕ್ಕಿ ಎನ್ನುವ ಗೋಪಾಲಯ್ಯ ಮೊದಲೇ ಏಕೆ ದಾಸ್ತಾನು ಇರಿಸಿದ್ದ ಬಗ್ಗೆ ಘೋಷಣೆ ಮಾಡಿಲ್ಲ. ನನಗೆ ಎಲ್ಲವೂ ಗೊತ್ತಿದೆ ಬಿಡಿ ಎಂದರು.ಇನ್ನೂ ಮಂಡ್ಯದಲ್ಲಿ ಶಾಸಕ ಶ್ರೀಕಂಠೇ ಗೌಡ ದಾದಾಗಿರಿ ವಿಚಾರವಾಗಿ ಮಾತನಾಡಿದ ಅವರು, ಮಾಧ್ಯಮದವರು, ಸರಕಾರದವರು ಒಬ್ಬರಿಗೊಂದು ಮಾಡಬೇಡಿ. ಭರತ್ ಶೆಟ್ಟಿಗೊಂದು ನ್ಯಾಯ, ರೇಣುಕಾಚಾರ್ಯಗೆ ಒಂದು, ಶ್ರೀಕಂಠೆ ಗೌಡರಿಗೊಂದು ನ್ಯಾಯ ಬೇಡ. ಎಲ್ಲರಿಗೂ ಸರ್ಕಾರ ಒಂದೇ ರೀತಿ ನೋಡಲಿ. ಯಾರೇ ತಪ್ಪು ಮಾಡಿದ್ರೂ ಕ್ರಮ ಆಗಲಿ. ನಮ್ಮವರು, ಅವರ ಕಡೆಯವರು ಯಾರೇ ತಪ್ಪು ಮಾಡಿದರೂ ಕ್ರಮ ಆಗಲಿ ಎಂದು ಹೇಳಿದರು.
ಗೋಪಾಲಯ್ಯಗಿಂತ ಮೊದಲು ಮಂತ್ರಿ ಆಗಿದ್ದು, ನಾನು:ಡಿ ಕೆ ಶಿ
Please follow and like us: