ಲಾಕ್ಡೌನ್ ಆಗಿ ನಲವತ್ತು ದಿನಗಳೇ ಕಳೆದಿದೆ, ನಶೆಯ ಸಾಮಾಗ್ರಿಗಳಿಲ್ಲದೆ, ನಾಲಿಗೆ ಸತ್ತುಬಿದ್ದಿದೆ. ತುಟಿಗಳು ಚುಟುಚುಟು ಅಂತಿದೆ. ಇನ್ನಾಗೊಲ್ಲಾ ಕಣ್ರಿ ಅಂತಿದ್ದಾರೆ ಹಲವು ಜನ. ಇದಕ್ಕೆ ಸಾಕ್ಷಿ ಗುಜರಾತ್ನ ಸುರೇಂದ್ರ ನಗರ ತಾಲೂಕಿನಲ್ಲಿ ನಡೆದ ಘಟನೆ.
ಬಿಡಿ,ಸಿಗರೇಟು,ಗುಟ್ಕಾ,ಪಾನ್ ಇಲ್ಲದೇನೆ ದಿನಗಳೇ ಹೋಗುತ್ತಿಲ್ಲ. ಇಂತವರ ಆಸೆ ಪೂರೈಸಲು ಇಲ್ಲಿನ ಸುದಾಮ್ದಾ ನಗರದಲ್ಲಿ ಬೀಡಾ ಅಂಗಡಿಯೊAದನ್ನು ಅದರ ಮಾಲೀಕನೊಬ್ಬ ತೆರೆದಿದ್ದ. ಲಾಕ್ಡೌನ್ ನಡುವೆ ಅಂಗಡಿ ಓಪನ್ ಮಾಡುವಂತಿಲ್ಲ. ಆದಾಗ್ಯೂ ಶಾಪ್ ಓಪನ್ ಮಾಡಿದ್ದರ ಪರಿಣಾಮ ಎಂಬAತೆ ನೂರಕ್ಕೂ ಹೆಚ್ಚು ಮಂದಿ ಒಂದೆ ಸಲ, ಅಂಗಡಿಯಲ್ಲಿ ತಮಗೆ ಬೇಕಾದನ್ನು ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಎಲ್ಲಿ ಪೊಲೀಸರು ಬಂದು ಬಿಡ್ತಾರೋ? ಎಲ್ಲಿ ಇರೋ ಸ್ಟಾಕ್ ಖಾಲಿಯಾಗಿ ತಮಗೇನು ಸಿಗುವುದಿಲ್ಲ ಎನ್ನುವ ಆತಂಕವೋ? ಏನೋ ಅಲ್ಲಿದ್ದವರು ಅಂಗಡಿಯೊಳಕ್ಕೆ ನುಗ್ಗಿಬಿಟ್ಟಿದ್ದರು. ಕೆಲವರು ಶೆಟರ್ ಹಿಡಿದುಕೊಂಡು ಎಳೆದಾಡಿದ್ರು. ಇನ್ನು ಕೆಲವರು ಇರೋ ಜನರ ಮೈಮೇಲೆ ಹತ್ತಿ ಒಳಕ್ಕೆ ನುಗ್ಗಿದ್ದರು.
ಕೇವಲ ಕೆಲವೇ ನಿಮಿಷಗಳಲ್ಲಿ ಅಂಗಡಿಯಲ್ಲಿ ದೊಂಬಿಯೇ ನಡೆದು ಹೋಯಿತು. ವಿಷಯ ತಿಳಿದು ಸ್ಥಳಕ್ಕೆಬಂದ ಪೊಲೀಸರು ಅಂಗಡಿ ಮಲೀಕನ ವಿರುದ್ಧ ಕೇಸ್ ಜಡಿದು, ಅಂಗಡಿಯಲ್ಲಿದ್ದ ೧೨,೬೦೦ರೂಪಾಯಿಗಳನ್ನು ಜಪ್ತಿ ಮಡಿ ತೆಗೆದುಕೊಂಡು ಹೋಗಿದ್ದಾರೆ.
ಗುಟ್ಕಾ-ಸಿಗರೇಟಿಗಾಗಿ ಹಾಹಾಕಾರ
Please follow and like us: