ಗ್ರೀನ್  ಝೋನ್ ಗ್ರೀನ್ ಸಿಟಿ ..!

ಶಿವಮೊಗ್ಗದಲ್ಲಿ ಈವರೆಗೆ ಒಂದೇ ಒಂದು ಕೊರೋನಾ ಪ್ರಕರಣ ಪತ್ತೆಯಾಗದ ಕಾರಣ ದಿನವಿಡೀ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ. ಆದ್ರೆ, ಕೊರೋನಾ ವರ್ಷಗಟ್ಟಲೆ ಹರಡುವ ಸಾಧ್ಯತೆ ಇದ್ದು, ಜನ ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈವರೆಗೂ ಒಂದೂ ಪಾಸಿಟಿವ್ ಕೇಸು ಪತ್ತೆಯಾಗಿಲ್ಲ. ಈ ನಡುವೆ ಜನಜೀವನವೂ ನಡೆಯಬೇಕಲ್ಲಾ. ಇದೇ ಕಾರಣಕ್ಕೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಜನರೇ ನಾವು ಶಿಸ್ತನಿಂದ ಇರುತ್ತೇವೆ ಎಂದಿದ್ದಕ್ಕೆ ಮಾರುಕಟ್ಟೆ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಇನ್ನೂ ಕೊರೋನಾ ವರ್ಷಗಟ್ಟಲೇ ಮುಂದುವರೆಯುವ ಸಾಧ್ಯತೆ ಇದೆ. ಅಲ್ಲಿಯವರಗೂ ವ್ಯಾಪಾರ ನಿಲ್ಲಿಸೋಕೆ ಆಗುತ್ತಾ. ಕಟಿಂಗ್ ಶಾಪ್, ಬಂಗಾರದ ಅಂಗಡಿಗಳು ಹೊರತು ಪಡಿಸಿ ಉಳಿದ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ. ಜನಜಂಗುಳಿಯಾಗದಂತೆ, ನೋಡಿಕೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಯಾರು ನಿಯಮ ಉಲ್ಲಂಘಿಸುತ್ತಾರೋ ಅವರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಕೇಂದ್ರ ಸರ್ಕಾರದ ನಿರ್ದೇಶನ ಆಧರಿಸಿ, ನಾಳೆ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ತರಲಿದೆ” ಎಂದು ಹೇಳಿದರು.

 

Please follow and like us:

Leave a Reply

Your email address will not be published. Required fields are marked *

Next Post

ನಟಿ ಸಮೀರಾ ರೆಡ್ಡಿ ತೆಲುಗು ಚಿತ್ರರಂಗದಿಂದ ದೂರ...!?

Sat May 2 , 2020
ನಾನು ಚಿತ್ರರಂಗ ಬಿಡೋದಕ್ಕೆ ಎನ್ ಟಿಆರ್ ಕಾರಣ ಅಂತ ಖ್ಯಾತ ನಟಿ ಸಮೀರಾ ರೆಡ್ಡಿ ಆರೋಪಿಸಿದ್ದಾರೆ. ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಸಾಕಷ್ಟು ಸ್ಟಾರ್ ನಟರೊಂದಿಗೆ ಅಭಿನಯಿಸಿರುವ ನಟಿ ಸಮೀರಾ ರೆಡ್ಡಿ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ರು.. ಸಮೀರಾ ಚಿತ್ರರಂಗ ಪ್ರವೇಶಿಸಿದ್ದು 2002ರಲ್ಲಿ. ಅಲ್ಲಿಂದ ಹನ್ನೊಂದು ವರ್ಷ ಚಿತ್ರರಂಗದಲ್ಲಿದ್ದರು. ಈಕೆಗೆ ಹಿಂದಿ ಸಿನಿಮಾಗಳಲ್ಲಿ ಹೆಚ್ಚಿನ ಅವಕಾಶಗಳಿದ್ದಾಗ,ದಕ್ಷಿಣ ಭಾರತೀಯ ಸಿನಿಮಾಗಳಿಂದಲೂ ಅವಕಾಶಗಳು ಅರಸಿ ಬಂದವು.  ಮೂಲತಃ ತೆಲುಗು ಕುಟುಂಬದವರಾದರೂ ತೆಲುಗು […]

Advertisement

Wordpress Social Share Plugin powered by Ultimatelysocial