ದೊಡ್ಡಬಳ್ಳಾಪುರ ನಗರದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಆದೇಶದ ಮೇರೆಗೆ ಪೊಲೀಸ್ ಠಾಣೆಗಳಿಗೆ ಡ್ರೋಣ್ ಮೂಲಕ ಸೋಂಕು ನಿವಾರಕಗಳನ್ನು ಸಿಂಪಡಣೆ ಮಾಡಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ಸುರಕ್ಷಿತ ದೃಷ್ಠಿಯಿಂದ ಸಿಟ್ರೋ ಬಯೋ ಶೀಲ್ಡ್ ಸೋಂಕು ನಿವಾರಕವನ್ನು ಪೊಲೀಸ್ ಠಾಣೆ ಮೇಲೆ ಡ್ರೋಣ್ ಮೂಲಕ ಸಿಂಪಡಣೆ ಮಾಡಲಾಗುತ್ತಿದೆ. ಈ ಸೋಂಕು ನಿವಾರಕ ಹಾನಿಕಾರಕವಲ್ಲದ ಆರ್ಗಾನಿಕ್ ಆಗಿದೆ. ಮೊದಲು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೋಂಕು ನಿವಾರಕವನ್ನು ಸಿಂಪಡಿಸಲಾಗಿದ್ದು, ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇತರೆ ಠಾಣೆಗಳಲ್ಲೂ ಸಿಂಪಡಣೆ ಮಾಡಲಾಗುತ್ತದೆ. ಪೊಲೀಸರ ಬಗ್ಗೆ ಕಾಳಜಿವಹಿಸಿರುವ ಎಸ್ಪಿ ಚನ್ನಣ್ಣನವರ್ ಅವರ ಈ ಕಾರ್ಯಕ್ಕೆ ಪೊಲೀಸ್ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿದ್ದಾರೆ.
ಠಾಣೆಗಳಿಗೆ ಸ್ಯಾನಿಟೈಸೇಷನ್
Please follow and like us: