ಡ್ರೈವರ್,ಕಂಡಕ್ಟರ್ ಬಚಾವ್

ಪುತ್ತೂರಿನಿಂದ ಈಶ್ವರಮಂಗಲ ಕಡೆಗೆ ಹೋಗುತ್ತಿದ್ದ ಸರಕಾರಿ ಬಸ್ಸೊಂದು ಈಶ್ವರಮಂಗಲದ ಸಮೀಪ ಸಾಂತ್ಯ ಸಮೀಪದ ತಿರುವಿನಲ್ಲಿ ಚಾಲPನÀ ನಿಯಂತ್ರಣ ತಪ್ಪಿ ಮನೆಯ ಮೇಲ್ಚಾವಣಿ ಮೇಲೆ ಬಿದ್ದ ಘಟನೆÀ ಇಂದು ನಡೆದಿದೆ. ಘಟನೆಯಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಸ್ವಲ್ಪ ಗಾಯವಾಗಿದೆ, ಉಳಿದಂತೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಸುಮಾರು ೨೦ ಅಡಿಯಷ್ಟು ಕೆಳಗೆ ಇರುವ ಮನೆಯ ಕೊಟ್ಟಿಗೆಯ ಛಾವಣಿಯ ಮೇಲೆ ಬಸ್ಸು ಉರುಳಿ ಬಿದ್ದಿದೆ. ಬಸ್ ಉರುಳಿ ಬಿದ್ದ ಸಮಯದಲ್ಲಿ ಮನೆಯವರು ಯಾರೂ ಇರದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಸದ್ಯ ಬಸ್ ಮೇಲೆತ್ತುವ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೊಳಚೆ ನೀರಿನಲ್ಲಿ ವೈರಸ್‌ ವಂಶವಾಹಿ ಪತ್ತೆ

Wed Jun 10 , 2020
ಐಐಟಿ-ಗಾಂಧಿನಗರದ ಸಂಶೋಧಕರ ತಂಡವೊಂದು ಅಹ್ಮದಾಬಾದ್‌ನ ಹೊರವಲಯದಲ್ಲಿ ಸಂಗ್ರಹಿಸಿದ ಸಂಸ್ಕರಣೆ ಮಾಡದೇ ಇದ್ದ ಕೊಳಚೆ ನೀರಿನಲ್ಲಿ ಕೋವಿಡ್ ವೈರಸ್‌ನ ಸಾಂಕ್ರಾಮಿಕವಲ್ಲದ ವಂಶವಾಹಿಗಳನ್ನು ಪತ್ತೆ ಹಚ್ಚಿದೆ. ಈವರೆಗೆ ಆಸ್ಟ್ರೇಲಿಯಾ, ಫ್ರಾನ್ಸ್‌, ನೆದರ್‌ಲ್ಯಾಂಡ್‌, ಅಮೆರಿಕಗಳ ಒಳಚರಂಡಿ ನೀರಿನಲ್ಲಿ ಸಾರ್ಸ್‌-ಕೋವ್‌-2 ವೈರಸ್‌ ಪತ್ತೆಯಾಗಿರುವುದು ವರದಿಯಾಗಿತ್ತು. ಆದರೆ, ಭಾರತದಲ್ಲಿ ಒಳಚರಂಡಿ ನೀರಿನಲ್ಲಿ “ಸಾರ್ಸ್‌-ಕೋವ್‌-2′ ವೈರಸ್‌ ಪತ್ತೆಯಾಗಿರುವುದು ಇದೇ ಮೊದಲು ಎನ್ನಲಾಗಿದೆ.ಈ ಕುರಿತಂತೆ ಹೆಚ್ಚಿನ ಮಾಹಿತಿ ನೀಡಿದ ಸಂಶೋಧಕರ ತಂಡದ ಮುಖ್ಯಸ್ಥ ಐಐಟಿ-ಗಾಂಧಿನಗರದ ಪ್ರಾಧ್ಯಾಪಕ ಮನೀಶ್‌ ಕುಮಾರ್‌, “”ಸೋಂಕಿನ […]

Advertisement

Wordpress Social Share Plugin powered by Ultimatelysocial