ಪುತ್ತೂರಿನಿಂದ ಈಶ್ವರಮಂಗಲ ಕಡೆಗೆ ಹೋಗುತ್ತಿದ್ದ ಸರಕಾರಿ ಬಸ್ಸೊಂದು ಈಶ್ವರಮಂಗಲದ ಸಮೀಪ ಸಾಂತ್ಯ ಸಮೀಪದ ತಿರುವಿನಲ್ಲಿ ಚಾಲPನÀ ನಿಯಂತ್ರಣ ತಪ್ಪಿ ಮನೆಯ ಮೇಲ್ಚಾವಣಿ ಮೇಲೆ ಬಿದ್ದ ಘಟನೆÀ ಇಂದು ನಡೆದಿದೆ. ಘಟನೆಯಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಸ್ವಲ್ಪ ಗಾಯವಾಗಿದೆ, ಉಳಿದಂತೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಸುಮಾರು ೨೦ ಅಡಿಯಷ್ಟು ಕೆಳಗೆ ಇರುವ ಮನೆಯ ಕೊಟ್ಟಿಗೆಯ ಛಾವಣಿಯ ಮೇಲೆ ಬಸ್ಸು ಉರುಳಿ ಬಿದ್ದಿದೆ. ಬಸ್ ಉರುಳಿ ಬಿದ್ದ ಸಮಯದಲ್ಲಿ ಮನೆಯವರು ಯಾರೂ ಇರದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಸದ್ಯ ಬಸ್ ಮೇಲೆತ್ತುವ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದಿದೆ.
ಡ್ರೈವರ್,ಕಂಡಕ್ಟರ್ ಬಚಾವ್
Please follow and like us: